ಆ್ಯಪ್ನಗರ

ರಾಹುಲ್ ತಮಾಷೆಯಾಗಿದ್ದು, ಬ್ಯಾಟಿಂಗ್ ಮಾಡಲು ಉತ್ತಮ ವ್ಯಕ್ತಿ: ವಿಜಯ್

ಆಸೀಸ್ ಸರಣಿಗೆ ತಯಾರಾಗಿದ್ದೇನೆ; ಮುರಳಿ ಆತ್ಮವಿಶ್ವಾಸದ ಮಾತುಗಳು

Vijaya Karnataka Web 2 Dec 2018, 1:14 pm
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿರುವ ಟೀಮ್ ಇಂಡಿಯಾ ಅನುಭವಿ ಬ್ಯಾಟ್ಸ್‌ಮನ್ ಮುರಳಿ ವಿಜಯ್, ತಮ್ಮ ಟೀಕಾಕಾರರಿಗೆ ಸ್ಪಷ್ಟ ಸಂದೇಶ ರವಾನಿಸಿದೆ.
Vijaya Karnataka Web vijay-rahul


ಉದಯೋನ್ಮುಖ ಬ್ಯಾಟ್ಸ್‌ಮನ್ ಪೃಥ್ವಿ ಶಾ ಗಾಯಗೊಂಡಿರುವ ಹಿನ್ನಲೆಯಲ್ಲಿ ಕೆಎಲ್ ರಾಹುಲ್ ಜೊತೆ ಮುರಳಿ ವಿಜಯ್ ಇನ್ನಿಂಗ್ಸ್ ಆರಂಭಿಸುವುದು ಬಹುತೇಕ ಖಚಿತವೆನಿಸಿದೆ.

ಇದಕ್ಕೆ ತಕ್ಕಂತೆ ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಶತಕ ಜತೆಯಾಟ ನೀಡುವ ಮೂಲಕ ಗಮನ ಸೆಳೆದಿದ್ದರು.

"ನಾವಿಬ್ಬರು ಭಾರತದ ಒಂದೇ ಪ್ರದೇಶದಿಂದ (ದಕ್ಷಿಣ ಭಾರತ) ಆಗಮಿಸಿದ್ದೇವೆ. ಹಾಗಾಗಿ ನಾವಿಬ್ಬರು ಒಬ್ಬರನ್ನೊಬರು ಚೆನ್ನಾಗಿ ಅರಿತುಕೊಳ್ಳುತ್ತಿದ್ದೇವೆ" ಎಂದು ರಾಹುಲ್ ಬಗ್ಗೆ ವಿಜಯ್ ಅಭಿಪ್ರಾಯಪಟ್ಟಿದ್ದಾರೆ.

"ರಾಹುಲ್ ತಮಾಷೆಯಾಗಿದ್ದು, ಬ್ಯಾಟಿಂಗ್ ಮಾಡಲು ಉತ್ತಮ ವ್ಯಕ್ತಿಯಾಗಿದ್ದಾರೆ" ಎಂದು ತಮ್ಮ ಸಹ ಆಟಗಾರನನ್ನು ಕೊಂಡಾಡಿದ್ದಾರೆ.

ರಾಹುಲ್ ಹಾಗೂ ವಿಜಯ್ ಇದುವರೆಗೆ ಒಟ್ಟು 25 ಬಾರಿ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇದೀಗ ಆಸೀಸ್ ಸರಣಿಯಲ್ಲೂ ಶ್ರೇಷ್ಠ ಪ್ರದರ್ಶನ ನೀಡುವ ನಂಬಿಕೆಯನ್ನಿಟ್ಟುಕೊಂಡಿದ್ದಾರೆ.

ಕಳೆದ ಬಾರಿ ಆಸೀಸ್ ಪ್ರವಾಸದಲ್ಲಿ ಆಡಿಲೇಡ್ ಪಂದ್ಯದಲ್ಲಿ ಮುರಳಿ ಅನುಕ್ರಮವಾಗಿ 53 ಹಾಗೂ 99 ರನ್ ಗಳಿಸಿದ್ದರು.

"ನಾನು ಬ್ಯಾಕ್ ಫೂಟ್‌ನಲ್ಲಿ ಆಡಲು ಇಷ್ಟಪಡುತ್ತೇನೆ. ಹಾಗಾಗಿ ಇಲ್ಲಿನ ಪಿಚ್ ಹೆಚ್ಚು ಹೊಂದಿಕೆಯಾಗುತ್ತಿದೆ. ಆಸೀಸ್‌ನಲ್ಲಿ ಬೌನ್ಸ್ ಜಾಸ್ತಿ ಸಿಗುತ್ತಿದ್ದು, ಹಾಗಾಗಿ ನನ್ನ ಶೈಲಿಯ ಬ್ಯಾಟಿಂಗ್‌ಗೆ ಸೂಕ್ತವಾಗಿದೆ" ಎಂದಿದ್ದಾರೆ.

"ನಾನು ತಂಡದಿಂದ ಹೊರಗಟ್ಟಿದಾಗಲೂ ನಿಮ್ಮ ಕೆಲಸದ ನೀತಿಶಾಸ್ತ್ರ ಉನ್ನತ್ತ ಮಟ್ಟದಲ್ಲಿರುವಂತೆ ನೋಡಿಕೊಂಡಿದ್ದೇನೆ. ಹಾಗಾಗಿ ಮತ್ತೆ ಅವಕಾಶ ಸಿಕ್ಕಾಗ ಉತ್ತಮ ನಿರ್ವಹಣೆ ನೀಡುವುದನ್ನು ಎದುರು ನೋಡುತ್ತಿದ್ದೇನೆ" ಎಂದರು.

"ಮೂಲತಃ ನಾನು ತಯಾರಾಗಿದ್ದೇನೆ. ನಾನು ತಂಡಕ್ಕೆ ಉತ್ತಮ ಆರಂಭ ನೀಡಲು ಬಯಸುತ್ತೇನೆ. ಆಡಿಲೇಡ್‌ನಲ್ಲಿ ಸ್ಮರಣೀಯ ನೆನಪುಗಳನ್ನು ಹೊಂದಿದ್ದು, ಉತ್ತಮ ಸರಣಿಯನ್ನು ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌