ಆ್ಯಪ್ನಗರ

ರಾಹುಲ್ ಹೆಗಲ ಮೇಲೆ ಹೆಚ್ಚಿನ ಜವಾಬ್ದಾರಿ: ಬಂಗಾರ್

ಆಸೀಸ್ ಪ್ರವಾಸದಲ್ಲಿ ರಾಹುಲ್ ಫಾರ್ಮ್ ನಿರ್ಣಾಯಕ

Vijaya Karnataka Web 30 Nov 2018, 12:52 pm
ಸಿಡ್ನಿ: ಸದ್ಯ ಕಳಪೆ ಫಾರ್ಮ್‌ನಿಂದಾಗಿ ಅತೀವ ಒತ್ತಡದಲ್ಲಿರುವ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಕರ್ನಾಟಕದ ಕೆಎಲ್ ರಾಹುಲ್‌ಗೆ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಬೆಂಬಲ ಸೂಚಿಸಿದ್ದಾರೆ.
Vijaya Karnataka Web kl-rahul-02


ಇನ್ನು ಮುಂದಕ್ಕೆ ರಾಹುಲ್ ಅನನುಭವಿ ಆಟಗಾರನಲ್ಲ ಎಂಬುದನ್ನು ಉಲ್ಲೇಖಿಸಿರುವ ಬಂಗಾರ್, "ಈ ಭರವಸೆಯ ಕ್ರಿಕೆಟಿಗನ ಹೆಗಲ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ" ಎಂದು ನುಡಿದಿದ್ದಾರೆ.

ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರಾಹುಲ್ ಆರಂಭಿಕ ಸ್ಥಾನಕ್ಕೆ ರಾಹುಲ್ ಪ್ರಬಲ ಸ್ಪರ್ಧಿಯಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಆಸೀಸ್ ಪ್ರವಾಸದಲ್ಲೇ ರಾಹುಲ್ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ್ದರು.

ಇದೀಗ ತಮ್ಮನ್ನು ತಾವೇ ತೊಡಗಿಸಿಕೊಳ್ಳಲು ಹೊಸ ದಾರಿಯನ್ನು ಹುಡುಕಿಕೊಳ್ಳುತ್ತಿದ್ದಾರೆ ಎಂದು ಬಂಗಾರ್ ವಿವರಿಸಿದ್ದಾರೆ.

"ರಾಹುಲ್ ಉತ್ತಮ ಲಯದಲ್ಲಿದ್ದಾರೆ. ಅವರ ಸಾಮರ್ಥ್ಯದ ಬಗ್ಗೆ ನಮಗೆ ಅರಿವಿದೆ. ಉತ್ತಮ ನಿರ್ವಹಣೆ ನೀಡುವುದು ತಂಡದ ಪಾಲಿಗೆ ಮುಖ್ಯ. ಅವರೀಗ ಯುವ ಕ್ರಿಕೆಟಿಗನಲ್ಲ. ಆಸೀಸ್‌ಗೆ ಎರಡನೇ ಬಾರಿ ಪ್ರಯಾಣ ಕೈಗೊಂಡಿದ್ದಾರೆ. ಅವರೀಗಲೇ 30 ಟೆಸ್ಟ್‌ಗಳನ್ನು ಆಡಿದ್ದು, ಹೆಚ್ಚಿನ ಜವಾಬ್ದಾರಿಯಿದೆ. ಅದೇ ಜವಾಬ್ದಾರಿಯನ್ನು ಅರಿತುಕೊಂಡು ಆಡುವ ನಂಬಿಕೆ ನಮಗಿದೆ" ಎಂದು ಹೇಳಿದರು.

ಈ ನಡುವೆ ಡಿಸೆಂಬರ್ 6ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್‌ನಲ್ಲಿ ತಂಡ ಸಂಯೋಜನೆಯ ವಿವರಗಳನ್ನು ಬಂಗಾರ್ ಬಿಟ್ಟುಕೊಟ್ಟಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌