ಬೆಂಗಳೂರು: ಸ್ಟಾರ್ ಆಲ್ರೌಂಡರ್ ಕೃಷ್ಣಪ್ಪ ಗೌತಮ್ ಅವರ ಭರ್ಜರಿ ಬೌಲಿಂಗ್ ಪ್ರದರ್ಶನದಿಂದ ಮಿಂಚಿದ ಕರ್ನಾಟಕ ತಂಡ, ಇಲ್ಲಿ ನಡೆದ ಪ್ರಸಕ್ತ ಸಾಲಿನ ಪ್ರಥಮದರ್ಜೆ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಬದ್ಧ ಎದುರಾಳಿ ತಮಿಳುನಾಡು ವಿರುದ್ಧ 26 ರನ್ಗಳ ರೋಚಕ ಜಯ ದಾಖಲಿಸಿದೆ.
ಪಂದ್ಯದ 4ನೇ ಹಾಗೂ ಅಂತಿಮ ದಿನವಾದ ಗುರುವಾರ ಕಾರ್ನಟದ ತಂಡ ತನ್ನ 2ನೇ ಇನಿಂಗ್ಸ್ನಲ್ಲಿ 151 ರನ್ಗಳ ಅಲ್ಪಮೊತ್ತಕ್ಕೆ ಆಲ್ಔಟ್ ಆಯಿತು. ಬಳಿಕ 181 ರನ್ಗಳ ಗುರಿ ಬೆನ್ನತ್ತಿದ ವಿಕೆಟ್ ನಷ್ಟವಿಲ್ಲದೆ 50 ರನ್ಗಳಿಸಿದ್ದ ತಮಿಳುನಾಡು ತಂಡ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಝಾರೆ ಟ್ರೋಫಿ ಟೂರ್ನಿಗಳ ಫೈನಲ್ ಪಂದ್ಯಗಳ ಸೋಲಿಗೆ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿತ್ತು.
ಆದರೆ, ಗೌತಮ್ ಅವರ ಮಾಂತ್ರಿಕ ಸ್ಪಿನ್ ಬೌಲಿಂಗ್ ದಾಳಿ ಎದುರು ಆತಿಥೇಯ ತಮಿಳುನಾಡಿನ ತಂಡದ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾದವು. 30.3 ಓವರ್ಗಳನ್ನು ಬೌಲ್ ಮಾಡಿದ ಗೌತಮ್, 60 ರನ್ಗಳನ್ನು ನೀಡಿ 8 ವಿಕೆಟ್ ಪಡೆಯುವ ಮೂಲಕ ಮ್ಯಾಚ್ ವಿನ್ನರ್ ಎನಿಸಿದರು. ಕಳೆದ ವಾರವಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಗೌತಮ್, ಪಂದ್ಯದ ಮೊದಲ ಇನಿಂಗ್ಸ್ನಲ್ಲೂ 110ಕ್ಕೆ 6 ವಿಕೆಟ್ ಪಡೆದಿದ್ದರು. ಈ ಮೂಲಕ ಪಂದ್ಯದಲ್ಲಿ ಒಟ್ಟು 14 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ರಣಜಿ ಟ್ರೋಫಿ ಇತಿಹಾಸದ ಎಲೈಟ್ ಪಟ್ಟಿಗೆ ಕನ್ನಡಿಗ ವಿನಯ್ ಕುಮಾರ್!
ಹೆಚ್ಚುವರಿ 2 ಓವರ್ನ ರೋಚಕ ಫೈಟ್
ಇನಿಂಗ್ಸ್ ಹಿನ್ನಡೆಯೊಂದಿಗೆ ಪಂದ್ಯದಲ್ಲಿ ಡ್ರಾ ಸಾಧಿಸಿ ಕನಿಷ್ಠ 1 ಅಂಕವನ್ನಾದರೂ ದಕ್ಕಿಸಿಕೊಳ್ಳಲು ತಮಿಳುನಾಡು ತಂಡಕ್ಕೆ 4ನೇ ದಿನವಾದ ಗುರುವಾರ ಸಂಪೂರ್ಣವಾಗಿ ಬ್ಯಾಟ್ ಮಾಡುವ ಅನಿವಾರ್ಯತೆ ಇತ್ತು. ದಿನದಾಟದ ನಿಗದಿತ ಓವರ್ಗಳ ಅಂತ್ಯಕ್ಕೆ ತಮಿಳುನಾಡು 8 ವಿಕೆಟ್ ನಷ್ಟದಲ್ಲಿ 150 ರನ್ಗಳನ್ನು ಗಳಿಸಿತ್ತು. ಈ ಸಂದರ್ಭದಲ್ಲಿ ಕರ್ನಾಟಕದ ಗೆಲುವಿನ ಸಾಧ್ಯೆ ಹೆಚ್ಚಿದ್ದ ಕಾರಣ, 2 ಓವರ್ಗಳನ್ನು ಹೆಚ್ಚುವರಿಯಾಗಿ ಎಸೆಯಲು ಅಂಪೈರ್ಗಳು ಅವಕಾಶ ಮಾಡಿಕೊಟ್ಟರು. ಇದರ ಸದ್ಬಳಕೆ ಮಾಡಿಕೊಂಡ ಗೌತಮ್, ಆತಿಥೇಯರ ಬಾಲಂಗೋಚಿಗಳಾದ ಎಂ. ಸಿದ್ಧಾರ್ಥ್ (20) ಮತ್ತು ಕೆ ವಿಗ್ನೇಶ್ (4) ಅವರನ್ನು ಪೆವಿಲಿಯನ್ಗೆ ಅಟ್ಟಿ ಕರ್ನಾಟಕ್ಕೆ ವಿಜಯ ಮಾಲೆ ತೊಡಿಸಿದರು.
ಕರ್ನಾಟಕ ತಂಡ ಈ ಜಯದೊಂದಿಗೆ ಸಂಪೂರ್ಣ 6 ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದ್ದು, 'ಬಿ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ. ಇದೇ ಗುಂಪಿನಲ್ಲಿ ಮೊದಲ ಜಯ ಕಂಡಿರುವ ಮುಂಬೈ ತಂಡ ಅಷ್ಟೇ ಅಂಕಗಳೊಂದಿಗೆ ಉತ್ತಮ ರನ್ರೇಟ್ ಕಾರಣ ಅಗ್ರಸ್ಥಾನದಲ್ಲಿದೆ.
ಐಸಿಸಿ ಟಿ20-ಐ ರ್ಯಾಂಕಿಂಗ್: ಕೊಹ್ಲಿ, ರಾಹುಲ್ ಜಿಗಿತ, ಹಿಟ್ಮ್ಯಾನ್ ಕುಸಿತ!
ಈ ವರ್ಷ ಏಕದಿನ (ವಿಜಯ್ ಹಝಾರೆ ಟ್ರೋಫಿ) ಮತ್ತು ಟಿ20 (ಸೈಯದ್ ಮುಷ್ತಾಕ್ ಅಲಿ ಟ್ರೋಫಿ) ಟೂರ್ನಿಗಳಲ್ಲಿ ಚಾಂಪಿಯನ್ ಪಟ್ಟ ಪಡೆದಿರುವ ಕರ್ನಾಟಕ ತಂಡ ಇದೀಗ ರಣಜಿ ಟ್ರೋಫಿಯಲ್ಲೂ ಪ್ರಶಸ್ತಿ ಗೆಲುವಿನ ವಿಶ್ವಾಸದಲ್ಲಿದ್ದು, ಡಿ.17ರಂದು ಅರಂಭವಾಗಲಿರುವ ತನ್ನ ಎರಡನೇ ಪಂದ್ಯದಲ್ಲಿ ಅಪಾಯಕಾರಿ ಉತ್ತರ ಪ್ರದೇಶ ವಿರುದ್ಧ ಸೆಣಸಲಿದೆ. ಯುಪಿ ತಂಡದ ತನ್ನ ಮೊದಲ ಪಂದ್ಯದಲ್ಲಿ ರೈಲ್ವೇಸ್ ಎದುರು ಇನಿಂಗ್ಸ್ ಹಿನ್ನಡೆ ಹೊರತಾಗಿಯೂ ಡ್ರಾ ಸಾಧಿಸಿ ಕನಿಷ್ಠ 1 ಅಂಕ ಪಡೆದುಕೊಂಡಿದೆ.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 336 ಮತ್ತು 2ನೇ ಇನಿಂಗ್ಸ್ 151/10 (ದೇವದತ್ ಪಡಿಕ್ಕಲ್ 39, ಬಿಆರ್ ಶರತ್ 28; ಕೆ. ವಿಗ್ನೇಶ್ 31ಕ್ಕೆ 3, ಆರ್. ಅಶ್ವಿನ್ 46ಕ್ಕೆ 4).
ತಮಿಳುನಾಡು: 307 ಮತ್ತು 2ನೇ ಇನಿಂಗ್ಸ್ 63.3 ಓವರ್ಗಳಲ್ಲಿ 154ಕ್ಕೆ ಆಲ್ಔಟ್ (ಅಭಿನವ್ ಮುಕುಂದ್ 42, ಮುರುಗನ್ ಅಶ್ವಿನ್ ಔಟಾಗದೆ 23; ಕೆ ಗೌತಮ್ 60ಕ್ಕೆ 8, ವಿ ಕೌಶಿಕ್ 23ಕ್ಕೆ 1).
ಪಂದ್ಯಶ್ರೇಷ್ಠ: ಕೆ ಗೌತಮ್
ಪಂದ್ಯದ 4ನೇ ಹಾಗೂ ಅಂತಿಮ ದಿನವಾದ ಗುರುವಾರ ಕಾರ್ನಟದ ತಂಡ ತನ್ನ 2ನೇ ಇನಿಂಗ್ಸ್ನಲ್ಲಿ 151 ರನ್ಗಳ ಅಲ್ಪಮೊತ್ತಕ್ಕೆ ಆಲ್ಔಟ್ ಆಯಿತು. ಬಳಿಕ 181 ರನ್ಗಳ ಗುರಿ ಬೆನ್ನತ್ತಿದ ವಿಕೆಟ್ ನಷ್ಟವಿಲ್ಲದೆ 50 ರನ್ಗಳಿಸಿದ್ದ ತಮಿಳುನಾಡು ತಂಡ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಝಾರೆ ಟ್ರೋಫಿ ಟೂರ್ನಿಗಳ ಫೈನಲ್ ಪಂದ್ಯಗಳ ಸೋಲಿಗೆ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿತ್ತು.
ಆದರೆ, ಗೌತಮ್ ಅವರ ಮಾಂತ್ರಿಕ ಸ್ಪಿನ್ ಬೌಲಿಂಗ್ ದಾಳಿ ಎದುರು ಆತಿಥೇಯ ತಮಿಳುನಾಡಿನ ತಂಡದ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾದವು. 30.3 ಓವರ್ಗಳನ್ನು ಬೌಲ್ ಮಾಡಿದ ಗೌತಮ್, 60 ರನ್ಗಳನ್ನು ನೀಡಿ 8 ವಿಕೆಟ್ ಪಡೆಯುವ ಮೂಲಕ ಮ್ಯಾಚ್ ವಿನ್ನರ್ ಎನಿಸಿದರು. ಕಳೆದ ವಾರವಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಗೌತಮ್, ಪಂದ್ಯದ ಮೊದಲ ಇನಿಂಗ್ಸ್ನಲ್ಲೂ 110ಕ್ಕೆ 6 ವಿಕೆಟ್ ಪಡೆದಿದ್ದರು. ಈ ಮೂಲಕ ಪಂದ್ಯದಲ್ಲಿ ಒಟ್ಟು 14 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ರಣಜಿ ಟ್ರೋಫಿ ಇತಿಹಾಸದ ಎಲೈಟ್ ಪಟ್ಟಿಗೆ ಕನ್ನಡಿಗ ವಿನಯ್ ಕುಮಾರ್!
ಹೆಚ್ಚುವರಿ 2 ಓವರ್ನ ರೋಚಕ ಫೈಟ್
ಇನಿಂಗ್ಸ್ ಹಿನ್ನಡೆಯೊಂದಿಗೆ ಪಂದ್ಯದಲ್ಲಿ ಡ್ರಾ ಸಾಧಿಸಿ ಕನಿಷ್ಠ 1 ಅಂಕವನ್ನಾದರೂ ದಕ್ಕಿಸಿಕೊಳ್ಳಲು ತಮಿಳುನಾಡು ತಂಡಕ್ಕೆ 4ನೇ ದಿನವಾದ ಗುರುವಾರ ಸಂಪೂರ್ಣವಾಗಿ ಬ್ಯಾಟ್ ಮಾಡುವ ಅನಿವಾರ್ಯತೆ ಇತ್ತು. ದಿನದಾಟದ ನಿಗದಿತ ಓವರ್ಗಳ ಅಂತ್ಯಕ್ಕೆ ತಮಿಳುನಾಡು 8 ವಿಕೆಟ್ ನಷ್ಟದಲ್ಲಿ 150 ರನ್ಗಳನ್ನು ಗಳಿಸಿತ್ತು. ಈ ಸಂದರ್ಭದಲ್ಲಿ ಕರ್ನಾಟಕದ ಗೆಲುವಿನ ಸಾಧ್ಯೆ ಹೆಚ್ಚಿದ್ದ ಕಾರಣ, 2 ಓವರ್ಗಳನ್ನು ಹೆಚ್ಚುವರಿಯಾಗಿ ಎಸೆಯಲು ಅಂಪೈರ್ಗಳು ಅವಕಾಶ ಮಾಡಿಕೊಟ್ಟರು. ಇದರ ಸದ್ಬಳಕೆ ಮಾಡಿಕೊಂಡ ಗೌತಮ್, ಆತಿಥೇಯರ ಬಾಲಂಗೋಚಿಗಳಾದ ಎಂ. ಸಿದ್ಧಾರ್ಥ್ (20) ಮತ್ತು ಕೆ ವಿಗ್ನೇಶ್ (4) ಅವರನ್ನು ಪೆವಿಲಿಯನ್ಗೆ ಅಟ್ಟಿ ಕರ್ನಾಟಕ್ಕೆ ವಿಜಯ ಮಾಲೆ ತೊಡಿಸಿದರು.
ಕರ್ನಾಟಕ ತಂಡ ಈ ಜಯದೊಂದಿಗೆ ಸಂಪೂರ್ಣ 6 ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದ್ದು, 'ಬಿ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ. ಇದೇ ಗುಂಪಿನಲ್ಲಿ ಮೊದಲ ಜಯ ಕಂಡಿರುವ ಮುಂಬೈ ತಂಡ ಅಷ್ಟೇ ಅಂಕಗಳೊಂದಿಗೆ ಉತ್ತಮ ರನ್ರೇಟ್ ಕಾರಣ ಅಗ್ರಸ್ಥಾನದಲ್ಲಿದೆ.
ಐಸಿಸಿ ಟಿ20-ಐ ರ್ಯಾಂಕಿಂಗ್: ಕೊಹ್ಲಿ, ರಾಹುಲ್ ಜಿಗಿತ, ಹಿಟ್ಮ್ಯಾನ್ ಕುಸಿತ!
ಈ ವರ್ಷ ಏಕದಿನ (ವಿಜಯ್ ಹಝಾರೆ ಟ್ರೋಫಿ) ಮತ್ತು ಟಿ20 (ಸೈಯದ್ ಮುಷ್ತಾಕ್ ಅಲಿ ಟ್ರೋಫಿ) ಟೂರ್ನಿಗಳಲ್ಲಿ ಚಾಂಪಿಯನ್ ಪಟ್ಟ ಪಡೆದಿರುವ ಕರ್ನಾಟಕ ತಂಡ ಇದೀಗ ರಣಜಿ ಟ್ರೋಫಿಯಲ್ಲೂ ಪ್ರಶಸ್ತಿ ಗೆಲುವಿನ ವಿಶ್ವಾಸದಲ್ಲಿದ್ದು, ಡಿ.17ರಂದು ಅರಂಭವಾಗಲಿರುವ ತನ್ನ ಎರಡನೇ ಪಂದ್ಯದಲ್ಲಿ ಅಪಾಯಕಾರಿ ಉತ್ತರ ಪ್ರದೇಶ ವಿರುದ್ಧ ಸೆಣಸಲಿದೆ. ಯುಪಿ ತಂಡದ ತನ್ನ ಮೊದಲ ಪಂದ್ಯದಲ್ಲಿ ರೈಲ್ವೇಸ್ ಎದುರು ಇನಿಂಗ್ಸ್ ಹಿನ್ನಡೆ ಹೊರತಾಗಿಯೂ ಡ್ರಾ ಸಾಧಿಸಿ ಕನಿಷ್ಠ 1 ಅಂಕ ಪಡೆದುಕೊಂಡಿದೆ.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ: 336 ಮತ್ತು 2ನೇ ಇನಿಂಗ್ಸ್ 151/10 (ದೇವದತ್ ಪಡಿಕ್ಕಲ್ 39, ಬಿಆರ್ ಶರತ್ 28; ಕೆ. ವಿಗ್ನೇಶ್ 31ಕ್ಕೆ 3, ಆರ್. ಅಶ್ವಿನ್ 46ಕ್ಕೆ 4).
ತಮಿಳುನಾಡು: 307 ಮತ್ತು 2ನೇ ಇನಿಂಗ್ಸ್ 63.3 ಓವರ್ಗಳಲ್ಲಿ 154ಕ್ಕೆ ಆಲ್ಔಟ್ (ಅಭಿನವ್ ಮುಕುಂದ್ 42, ಮುರುಗನ್ ಅಶ್ವಿನ್ ಔಟಾಗದೆ 23; ಕೆ ಗೌತಮ್ 60ಕ್ಕೆ 8, ವಿ ಕೌಶಿಕ್ 23ಕ್ಕೆ 1).
ಪಂದ್ಯಶ್ರೇಷ್ಠ: ಕೆ ಗೌತಮ್