ಆ್ಯಪ್ನಗರ

ರಣಜಿ ಟ್ರೋಫಿ: ಪ್ರತೀಕ್‌ ದಾಳಿಗೆ ಹಳಿ ತಪ್ಪಿದ ರೈಲ್ವೇಸ್‌

ಕರ್ನಾಟಕ ತಂಡದ ವೇಗದ ಬೌಲರ್ ಪ್ರತೀಕ್ ಜೈನ್ ಮಾರಕ ದಾಳಿಗೆ ತತ್ತರಿಸಿರುವ ರೈಲ್ವೇಸ್ ಮಳೆ ಬಾಧಿತ ಪಂದ್ಯದಲ್ಲಿ ಮೊದಲ ದಿನದಾಟದ ಅಂತ್ಯಕ್ಕೆ ಆರು ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದೆ. ಈ ಮೂಲಕ ಪಂದ್ಯದಲ್ಲಿ ಕರ್ನಾಟಕ ಸಂಪೂರ್ಣ ಅಧಿಪತ್ಯ ಸ್ಥಾಪಿಸಿದೆ.

Vijaya Karnataka Web 28 Jan 2020, 9:26 am
ಹೊಸದಿಲ್ಲಿ: ಎಡಗೈ ಮಧ್ಯಮ ವೇಗಿ ಪ್ರತೀಕ್‌ ಜೈನ್‌(14ಕ್ಕೆ 4) ಅವರ ಮಾರಕ ದಾಳಿಯ ಬಲದಿಂದ ಮಿಂಚಿದ ಕರ್ನಾಟಕ ತಂಡ ರಣಜಿ ಟ್ರೋಫಿ ಪಂದ್ಯದಲ್ಲಿ ರೈಲ್ವೇಸ್‌ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವತ್ತ ಮಹತ್ವದ ದಾಪುಗಾಲಿಟ್ಟಿದೆ.
Vijaya Karnataka Web ಪ್ರತೀಕ್ ಜೈನ್


ಇಲ್ಲಿನ ಕರ್ನೈಲ್‌ ಸಿಂಗ್‌ ಕ್ರೀಡಾಂಗಣದಲ್ಲಿಸೋಮವಾರ ಮಳೆಯಿಂದಾಗಿ ಎರಡೂ ತಾಸಿಗೂ ಅಧಿಕ ಸಮಯ ವಿಳಂಬವಾಗಿ ಆರಂಭವಾದ ಎ ಮತ್ತು ಬಿ ಗುಂಪಿನ ಪಂದ್ಯದಲ್ಲಿಟಾಸ್‌ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನ ಪಡೆದ ರೈಲ್ವೇಸ್‌ ತಂಡ ದಿನದಾಟದ ಮುಕ್ತಾಯಕ್ಕೆ 49 ಓವರ್‌ಗಳಲ್ಲಿ6 ವಿಕೆಟ್‌ಗೆ 98 ರನ್‌ ಗಳಿಸಿದೆ.

ಪ್ರತೀಕ್‌ ಜೈನ್‌ ಅವರ ಶಿಸ್ತು ಬದ್ಧ ದಾಳಿಗೆ ಮೊದಲ ದಿನೇ ಬ್ಯಾಟಿಂಗ್‌ ಹಳಿ ತಪ್ಪಿರುವ ರೈಲ್ವೇಸ್‌ಗೆ ನಾಯಕ ಅರಿಂದಮ್‌ ಘೋಷ್‌ (32*) ಮತ್ತು ಅವಿನಾಶ್‌ ಯಾದವ್‌ (29*) ಆಸರೆಯಾಗಿದ್ದು, ಎರಡನೇ ದಿನದಾಟಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ದ. ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಮ್‌ ಇಂಡಿಯಾ ಆಯ್ಕೆ ಕುರಿತು ಮಾತನಾಡಿದ ಗಂಗೂಲಿ!

ಆರಂಭಿಕರಾಗಿ ಇನಿಂಗ್ಸ್‌ ಆರಂಭಿಸಿದ ಮೃಣಾಲ್‌ ದೇವ್‌ಧರ್‌ ಮತ್ತು ಆಶಿಶ್‌ ಸೆಹ್ರಾವತ್‌ ತಂಡದ ಮೊತ್ತ ಎರಡಂಕಿ ಮುಟ್ಟುವ ಮೊದಲೇ ವೇಗಿ ಅಭಿಮನ್ಯು ಮಿಥುನ್‌ ಈ ಜೋಡಿಯನ್ನು ಬೇರ್ಪಡಿಸಿ, ಕರ್ನಾಟಕಕ್ಕೆ ಮೇಲುಗೈ ಕಲ್ಪಿಸಿದರು. 11 ಎಸೆತಗಳನ್ನೆದುರಿಸಿದರೂ ಖಾತೆ ತೆರೆಯಲು ತಿಣುಕಾಡುತ್ತಿದ್ದ ಆಶಿಸ್‌ ವೇಗಿ ಮಿಥುನ್‌ ಬೌಲಿಂಗ್‌ನಲ್ಲಿಶ್ರೀನಿವಾಸ್‌ಗೆ ಕ್ಯಾಚಿತ್ತು ನಿರಾಸೆಯಿಂದಲೇ ಪೆವಿಲಿಯನ್‌ ಸೇರಿಕೊಂಡರು.

ನಂತರ ದೇವ್‌ಧರ್‌(12) ಅವರ ವಿಕೆಟ್‌ ಉರುಳಿಸಿದ ಜೈನ್‌, ಕೇವಲ 9 ರನ್‌ಗಳ ಅಂತರದಲ್ಲಿಸೌರಭ್‌ ಸಿಂಗ್‌, ಮಹೇಶ್‌ ರಾವತ್‌ ಮತ್ತು ದಿನೇಶ್‌ ಮೋರ್‌ ಅವರ ವಿಕೆಟ್‌ ಪಡೆದು ರೈಲ್ವೇಸ್‌ಗೆ ಸಿಂಹಸ್ವಪ್ನವಾಗಿ ಕಾಡಿದರು. ಒಂದು ಹಂತದಲ್ಲಿ45ಕ್ಕೆ 6 ವಿಕೆಟ್‌ ಕಳೆದುಕೊಂಡು ನೂರಳೊಳಗೆ ಆಲೌಟ್‌ ಆಗುವ ಭೀತಿಗೆ ಒಳಗಾದ ರೈಲ್ವೇಸ್‌ಗೆ ನಾಯಕ ಅರಿಂದರ್‌ ಘೋಷ್‌ ಮತು ಅವಿನಾಶ್‌ ಯಾದವ್‌ ಆಸರೆಯಾದರು. ಕರ್ನಾಟಕ ಬೌಲರ್‌ಗಳಿಗೆ ದಿಟ್ಟ ಎದೆಯೊಡ್ಡಿದ ಅರಿಂದಮ್‌ ಮತ್ತು ಯಾದವ್‌ ಜೋಡಿ ಕರುಣ್‌ ನಾಯರ್‌ ಬಳಗದ ವೇಗ ಮತ್ತು ಸ್ಪಿನ್‌ ದಾಳಿಯನ್ನು ಉತ್ತಮವಾಗಿ ನಿಭಾಯಿಸಿ ಮುರಿಯದ 7ನೇ ವಿಕೆಟ್‌ಗೆ 53 ರನ್‌ ಸೇರಿಸಿ ತಂಡದ ಮೊತ್ತವನ್ನು ಮೂರಂಕಿಯತ್ತ ಕೊಂಡೊಯ್ದಿದೆ.

ಬುಮ್ರಾ ಎದುರು ಬ್ಯಾಟ್‌ ಬೀಸೋದು ಬಲು ಕಷ್ಟ ಎಂದು ಕಿವೀಸ್‌ ಬ್ಯಾಟ್ಸ್‌ಮನ್‌!

ಕರ್ನಾಟಕದ ಪರ ಮಿಂಚಿದ ಪ್ರತೀಕ್‌ ಜೈನ್‌ (14ಕ್ಕೆ 4) ಮತ್ತು ಮಿಥುನ್‌ (18ಕ್ಕೆ 2) ಆರು ವಿಕೆಟ್‌ ಹಂಚಿಕೊಳ್ಳುವ ಮೂಲಕ ತಂಡಕ್ಕೆ ಮೊದಲ ದಿನದ ಗೌರವ ಕಲ್ಪಿಸಿದರು. ಗಾಯದಿಂದ ಚೇತರಿಸಿಕೊಂಡ ಬಳಿಕ ಮೊದಲ ಪಂದ್ಯ ಆಡಿದ ಆಲ್‌ರೌಂಡರ್‌ ಕೃಷ್ಣಪ್ಪ ಗೌತಮ್‌ 14 ಓವರ್‌ ಬೌಲಿಂಗ್‌ ಮಾಡಿದರೂ ವಿಕೆಟ್‌ ಪಡೆಯುವಲ್ಲಿವಿಫಲರಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌