ಕರ್ನಾಟಕ ತಂಡಕ್ಕೆ 176 ರನ್ ಅಂತರದ ಭರ್ಜರಿ ಗೆಲುವು
ಗಣೇಶ್ ತಮ್ಮಡಿಹಳ್ಳಿ
ಶಿವಮೊಗ್ಗ : ಅಂತಿಮ ದಿನ ನೀರಸ ಪ್ರದರ್ಶನದೊಂದಿಗೆ ಡ್ರಾ ಕಡೆಗೆ ಮುಖ ಮಾಡಿದ್ದ ಪಂದ್ಯದಲ್ಲಿ ಕೆ.ಗೌತಮ್ (30ಕ್ಕೆ 6) ಅವರ ಮಿಂಚಿನ ಬೌಲಿಂಗ್ ದಾಳಿಯಿಂದ ಅಬ್ಬರಿಸಿದ ಕರ್ನಾಟಕ, ರೈಲ್ವೇಸ್ ವಿರುದ್ಧ ಗೆಲುವು ದಕ್ಕಿಸಿಕೊಂಡಿತು.
ಇಲ್ಲಿನ ನವುಲೆ ಕ್ರೀಡಾಂಗಣದಲ್ಲಿ ನಡೆದ ರಣಜಿ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ 16 ಓವರ್ಗಳಲ್ಲಿ 1ವಿಕೆಟ್ ನಷ್ಟಕ್ಕೆ 44ರನ್ ಕಲೆಹಾಕಿದ್ದ ರೈಲ್ವೇಸ್ ತಂಡ, ಅಂತಿಮ ದಿನವಾದ ಮಂಗಳವಾರ, ಸೌರಭ್ ವಕಾಸ್ಕರ್(43), ನಿತಿನ್ ಭಿಲ್ಲೆ (39) ಹಾಗೂ ಪ್ರಥಮ್ ಸಿಂಗ್(48) ಅವರ ಮಂದಗತಿಯ ಬ್ಯಾಟಿಂಗ್ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಸೂಚನೆ ನೀಡಿತ್ತು. ಇದಕ್ಕೆ ಬ್ರೇಕ್ ನೀಡಿದ ಕೆ. ಗೌತಮ್ ಕರ್ನಾಟಕ ತಂಡವು ಗೆಲುವಿನ ನಗೆ ಬೀರುವಂತೆ ಮಾಡಿದರು.
ಗುಜರಾತ್ ವಿರುದ್ಧದ ಪಂದ್ಯದಲ್ಲಿ ಗೆಲುವನ್ನು ಕೈಚೆಲ್ಲಿ ಡ್ರಾಗೆ ತೃಪ್ತಿಪಟ್ಟ ಕರ್ನಾಟಕ ತಂಡಕ್ಕೆ ಇದೀಗ ರೈಲ್ವೇಸ್ ವಿರುದ್ಧ ಸಿಕ್ಕಂತಹ ಯಶಸ್ಸು ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಗೆಲುವಿನೊಂದಿಗೆ ಸಂಪೂರ್ಣ ಆರು ಅಂಕಗಳನ್ನು ಪಡೆದುಕೊಂಡ ಕರ್ನಾಟಕ ತಂಡ ಒಟ್ಟು 21 ಅಂಕಗಳೊಂದಿಗೆ ನಾಕ್ಔಟ್ ಹಾದಿಯಲ್ಲಿ ಉಳಿಯುವಲ್ಲಿ ಯಶಸ್ವಿಯಾಗಿದೆ.
ಪಲ್ಟಿ ಹೊಡೆದ ರೈಲ್ವೆ : ಚಹಾ ವಿರಾಮದ ವೇಳೆ ನಾಲ್ಕು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದ್ದ ರೈಲ್ವೇಸ್, ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಸಕಲ ಯೋಜನೆ ರೂಪಿಸಿತ್ತು. ನಂತರ ಕೆ.ಗೌತಮ್ ಸ್ಪಿನ್ ಜಾದುವಿಗೆ ಪಲ್ಟಿ ಹೊಡೆದ ರೈಲ್ವೇಸ್ ಅಂತಿಮವಾಗಿ 185 ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಳ್ಳುವ ಮೂಲಕ 176 ರನ್ಗಳ ಅಂತರದ ಸೋಲು ಕಂಡಿತು.
ಎರಡನೇ ಇನಿಂಗ್ಸ್ನಲ್ಲಿ 24 ಓವರ್ ಬೌಲಿಂಗ್ ಮಾಡಿದ ಗೌತಮ್, 30 ರನ್ ನೀಡಿ 6 ವಿಕೆಟ್ ಕಬಳಿಸಿ ರೈಲ್ವೇಸ್ ತಂಡವನ್ನು ಕೇವಲ 185 ರನ್ಗೆ ಗಂಟುಮೂಟೆ ಕಟ್ಟುವಂತೆ ಮಾಡಿದರು. ಮತ್ತೊಬ್ಬ ಸ್ಪಿನ್ ಬೌಲರ್ ಶ್ರೇಯಸ್ ಗೋಪಾಲ್ 2 ವಿಕೆಟ್ ಪಡೆದು ರೈಲ್ವೆಸ್ ಲೆಕ್ಕಚಾರವನ್ನು ತಲೆಕೆಳಗಾಗಿಸಿದರು. ಒಟ್ಟಾರೆ ಸ್ಪಿನ್ನರ್ಗಳ ಮೋಡಿಯಿಂದ ಕರ್ನಾಟಕ ತಂಡವು ಪ್ರಸಕ್ತ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ 2ನೇ ಜಯದ ಸಂಭ್ರಮ ಅನುಭವಿಸುವಂತೆ ಮಾಡಿತು.
ಕೋಟ್..
ರೈಲ್ವೇಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿ ಗೆಲ್ಲುವ ವಿಶ್ವಾಸ ಹೊಂದಿದ್ದೆವು. ಅಂತಿಮ ದಿನ ಎದುರಾಳಿ ತಂಡ ಉತ್ತಮ ಪ್ರದರ್ಶನ ನೀಡುವ ಮೂಲಕ ಪಂದ್ಯ ಡ್ರಾ ಕಡೆಗೆ ಸಾಗಿತ್ತು. ಆದರೂ ನಾವು ಗೆಲುವಿನ ನಂಬಿಕೆ ಹೊತ್ತು ಆಟವಾಡಿದೆವು.
- ಕೆ.ಗೌತಮ್
ಕರ್ನಾಟಕ ತಂಡದ ಆಟಗಾರ
ಸ್ಕೋರ್
ಕರ್ನಾಟಕ: ಮೊದಲ ಇನಿಂಗ್ಸ್ 214
ರೈಲ್ವೇಸ್: ಮೊದಲ ಇನಿಂಗ್ಸ್ 143
ಕರ್ನಾಟಕ: 2ನೇ ಇನಿಂಗ್ಸ್ 84 ಓವರ್ಗಳಲ್ಲಿ 290/2 ಡಿ.
ರೈಲ್ವೇಸ್: ಎರಡನೇ ಇನಿಂಗ್ಸ್ 86 ಓವರ್ಗಳಲ್ಲಿ 185/10
ಕರ್ನಾಟಕದ ಮುಂದಿನ ಪಂದ್ಯ
ಎದುರಾಳಿ: ಛತ್ತೀಸ್ಗಢ
ಪಂದ್ಯ ಆರಂಭ: ಡಿ.30 (ಬೆಂಗಳೂರು)
ಗಣೇಶ್ ತಮ್ಮಡಿಹಳ್ಳಿ
ಶಿವಮೊಗ್ಗ : ಅಂತಿಮ ದಿನ ನೀರಸ ಪ್ರದರ್ಶನದೊಂದಿಗೆ ಡ್ರಾ ಕಡೆಗೆ ಮುಖ ಮಾಡಿದ್ದ ಪಂದ್ಯದಲ್ಲಿ ಕೆ.ಗೌತಮ್ (30ಕ್ಕೆ 6) ಅವರ ಮಿಂಚಿನ ಬೌಲಿಂಗ್ ದಾಳಿಯಿಂದ ಅಬ್ಬರಿಸಿದ ಕರ್ನಾಟಕ, ರೈಲ್ವೇಸ್ ವಿರುದ್ಧ ಗೆಲುವು ದಕ್ಕಿಸಿಕೊಂಡಿತು.
ಇಲ್ಲಿನ ನವುಲೆ ಕ್ರೀಡಾಂಗಣದಲ್ಲಿ ನಡೆದ ರಣಜಿ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ 16 ಓವರ್ಗಳಲ್ಲಿ 1ವಿಕೆಟ್ ನಷ್ಟಕ್ಕೆ 44ರನ್ ಕಲೆಹಾಕಿದ್ದ ರೈಲ್ವೇಸ್ ತಂಡ, ಅಂತಿಮ ದಿನವಾದ ಮಂಗಳವಾರ, ಸೌರಭ್ ವಕಾಸ್ಕರ್(43), ನಿತಿನ್ ಭಿಲ್ಲೆ (39) ಹಾಗೂ ಪ್ರಥಮ್ ಸಿಂಗ್(48) ಅವರ ಮಂದಗತಿಯ ಬ್ಯಾಟಿಂಗ್ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಸೂಚನೆ ನೀಡಿತ್ತು. ಇದಕ್ಕೆ ಬ್ರೇಕ್ ನೀಡಿದ ಕೆ. ಗೌತಮ್ ಕರ್ನಾಟಕ ತಂಡವು ಗೆಲುವಿನ ನಗೆ ಬೀರುವಂತೆ ಮಾಡಿದರು.
ಗುಜರಾತ್ ವಿರುದ್ಧದ ಪಂದ್ಯದಲ್ಲಿ ಗೆಲುವನ್ನು ಕೈಚೆಲ್ಲಿ ಡ್ರಾಗೆ ತೃಪ್ತಿಪಟ್ಟ ಕರ್ನಾಟಕ ತಂಡಕ್ಕೆ ಇದೀಗ ರೈಲ್ವೇಸ್ ವಿರುದ್ಧ ಸಿಕ್ಕಂತಹ ಯಶಸ್ಸು ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಗೆಲುವಿನೊಂದಿಗೆ ಸಂಪೂರ್ಣ ಆರು ಅಂಕಗಳನ್ನು ಪಡೆದುಕೊಂಡ ಕರ್ನಾಟಕ ತಂಡ ಒಟ್ಟು 21 ಅಂಕಗಳೊಂದಿಗೆ ನಾಕ್ಔಟ್ ಹಾದಿಯಲ್ಲಿ ಉಳಿಯುವಲ್ಲಿ ಯಶಸ್ವಿಯಾಗಿದೆ.
ಪಲ್ಟಿ ಹೊಡೆದ ರೈಲ್ವೆ : ಚಹಾ ವಿರಾಮದ ವೇಳೆ ನಾಲ್ಕು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದ್ದ ರೈಲ್ವೇಸ್, ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಸಕಲ ಯೋಜನೆ ರೂಪಿಸಿತ್ತು. ನಂತರ ಕೆ.ಗೌತಮ್ ಸ್ಪಿನ್ ಜಾದುವಿಗೆ ಪಲ್ಟಿ ಹೊಡೆದ ರೈಲ್ವೇಸ್ ಅಂತಿಮವಾಗಿ 185 ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಳ್ಳುವ ಮೂಲಕ 176 ರನ್ಗಳ ಅಂತರದ ಸೋಲು ಕಂಡಿತು.
ಎರಡನೇ ಇನಿಂಗ್ಸ್ನಲ್ಲಿ 24 ಓವರ್ ಬೌಲಿಂಗ್ ಮಾಡಿದ ಗೌತಮ್, 30 ರನ್ ನೀಡಿ 6 ವಿಕೆಟ್ ಕಬಳಿಸಿ ರೈಲ್ವೇಸ್ ತಂಡವನ್ನು ಕೇವಲ 185 ರನ್ಗೆ ಗಂಟುಮೂಟೆ ಕಟ್ಟುವಂತೆ ಮಾಡಿದರು. ಮತ್ತೊಬ್ಬ ಸ್ಪಿನ್ ಬೌಲರ್ ಶ್ರೇಯಸ್ ಗೋಪಾಲ್ 2 ವಿಕೆಟ್ ಪಡೆದು ರೈಲ್ವೆಸ್ ಲೆಕ್ಕಚಾರವನ್ನು ತಲೆಕೆಳಗಾಗಿಸಿದರು. ಒಟ್ಟಾರೆ ಸ್ಪಿನ್ನರ್ಗಳ ಮೋಡಿಯಿಂದ ಕರ್ನಾಟಕ ತಂಡವು ಪ್ರಸಕ್ತ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ 2ನೇ ಜಯದ ಸಂಭ್ರಮ ಅನುಭವಿಸುವಂತೆ ಮಾಡಿತು.
ಕೋಟ್..
ರೈಲ್ವೇಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿ ಗೆಲ್ಲುವ ವಿಶ್ವಾಸ ಹೊಂದಿದ್ದೆವು. ಅಂತಿಮ ದಿನ ಎದುರಾಳಿ ತಂಡ ಉತ್ತಮ ಪ್ರದರ್ಶನ ನೀಡುವ ಮೂಲಕ ಪಂದ್ಯ ಡ್ರಾ ಕಡೆಗೆ ಸಾಗಿತ್ತು. ಆದರೂ ನಾವು ಗೆಲುವಿನ ನಂಬಿಕೆ ಹೊತ್ತು ಆಟವಾಡಿದೆವು.
- ಕೆ.ಗೌತಮ್
ಕರ್ನಾಟಕ ತಂಡದ ಆಟಗಾರ
ಸ್ಕೋರ್
ಕರ್ನಾಟಕ: ಮೊದಲ ಇನಿಂಗ್ಸ್ 214
ರೈಲ್ವೇಸ್: ಮೊದಲ ಇನಿಂಗ್ಸ್ 143
ಕರ್ನಾಟಕ: 2ನೇ ಇನಿಂಗ್ಸ್ 84 ಓವರ್ಗಳಲ್ಲಿ 290/2 ಡಿ.
ರೈಲ್ವೇಸ್: ಎರಡನೇ ಇನಿಂಗ್ಸ್ 86 ಓವರ್ಗಳಲ್ಲಿ 185/10
ಕರ್ನಾಟಕದ ಮುಂದಿನ ಪಂದ್ಯ
ಎದುರಾಳಿ: ಛತ್ತೀಸ್ಗಢ
ಪಂದ್ಯ ಆರಂಭ: ಡಿ.30 (ಬೆಂಗಳೂರು)