ಬೆಂಗಳೂರು: 2019-2020ನೇ ಸಾಲಿನ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಲು ಕರ್ನಾಟಕಕ್ಕೆ 149 ರನ್ಗಳ ಅವಶ್ಯಕತೆಯಿದೆ.
ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬರೋಡಾ ವಿರುದ್ಧ ನಡೆಯುತ್ತಿರುವ ಎಲೈಟ್ 'ಎ' ಮತ್ತು 'ಬಿ' ಗುಂಪಿನ ಗೆಲ್ಲಲೇಬೇಕಾದ ಅಂತಿಮ ಲೀಗ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿರುವ ಕರ್ನಾಟಕ ತಂಡವು ಎದುರಾಳಿ ತಂಡವನ್ನು ಎರಡನೇ ಇನ್ನಿಂಗ್ಸ್ನಲ್ಲೂ 296 ರನ್ಗಳಿಗೆ ಕಟ್ಟಿ ಹಾಕಿದೆ.
ಎರಡನೇ ದಿನದಂತ್ಯಕ್ಕೆ ಐದು ವಿಕೆಟ್ ನಷ್ಟಕ್ಕೆ 208 ರನ್ ಪೇರಿಸಿರುವ ಬರೋಡಾ ಮತ್ತಷ್ಟು 88 ರನ್ ಪೇರಿಸಿರುವ ಉಳಿದಿರುವ ಐದು ವಿಕೆಟ್ಗಳನ್ನು ಕಳೆದುಕೊಂಡಿತು. ಕರ್ನಾಟಕ ಪರ ನಾಲ್ಕು ವಿಕೆಟ್ ಕಬಳಿಸಿದ ಪ್ರಸಿದ್ಧ ಕೃಷ್ಣ ಮಿಂಚಿದರು. ಇವರಿಗೆ ತಕ್ಕ ಸಾಥ್ ನೀಡಿದ ರೋನಿತ್ ಮೋರೆ ಮೂರು, ಕೃಷ್ಣಪ್ಪ ಗೌತಮ್ ಎರಡು ಮತ್ತು ಅಭಿಮನ್ಯು ಮಿಥುನ್ ಒಂದು ವಿಕೆಟ್ ಕಬಳಿಸಿದರು.
ಆರ್ಸಿಬಿ ನಾಡಿಮಿಡಿತ 'ಬೆಂಗಳೂರು'; ಕನ್ನಡಿಗರ ಮನಮೆಚ್ಚಿದ ಹೊಸ ಲೋಗೋದಲ್ಲಿ ಏನಿದೆ ವಿಶೇಷ?
ಬರೋಡಾ ಪರ ದಿಟ್ಟ ಹೋರಾಟ ನೀಡಿದ ಅಭಿಮನ್ಯು ರಜಪೂತ್ ಅರ್ಧಶತಕ (52) ಹಾಗೂ ಪಾರ್ತ್ ಕೊಹ್ಲಿ 42 ರನ್ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು .ಇವರಿಬ್ಬರು ಆರನೇ ವಿಕೆಟ್ಗೆ 52 ರನ್ಗಳ ಅಮೂಲ್ಯ ಇನ್ನಿಂಗ್ಸ್ ಕಟ್ಟಿದರು. ಆದರೆ ಈ ಜೋಡಿಯನ್ನು ರೋನಿತ್ ಮೋರೆ ಬೇರ್ಪಡಿಸುವುದರೊಂದಿಗೆ ಕರ್ನಾಟಕ ಪಂದ್ಯದಲ್ಲಿ ಹಿಡಿತ ಸಾಧಿಸಿತ್ತು. ಅಲ್ಲದೆ ಕೊನೆಯ ಐದು ವಿಕೆಟ್ಗಳನ್ನು 47 ರನ್ ಅಂತರದಲ್ಲಿ ಪಡೆಯುವಲ್ಲಿ ಯಶಸ್ವಿಯಾಯಿತು.
ಈ ಮೊದಲು ಬರೋಡಾದ 85 ರನ್ನಿಗೆ ಉತ್ತರವಾಗಿ ಕರ್ನಾಟಕ ತಂಡವು ಮೊದಲ ಇನ್ನಿಂಗ್ಸ್ನಲ್ಲಿ ನಾಯಕ ಕರುಣ್ ನಾಯರ್ (47) ಹಾಗೂ ಅಭಿಮನ್ಯು ಮಿಥುನ್ (40) ಉಪಯುಕ್ತ ಇನ್ನಿಂಗ್ಸ್ ನೆರವಿನಿಂದ 233 ರನ್ ಪೇರಿಸಿತ್ತು. ಈ ಮೂಲಕ ಮೊದಲ ಇನ್ನಿಂಗ್ಸ್ನಲ್ಲಿ 148 ರನ್ಗಳ ಮಹತ್ವದ ಮುನ್ನಡೆ ದಾಖಲಿಸಿತ್ತು. ಬರೋಡಾ ಪರ ಸೊಯೆಬ್ ಸೊಪಾರಿಯಾ 83 ರನ್ನಿಗೆ ಐದು ವಿಕೆಟ್ ಕಿತ್ತು ಮಿಂಚಿದರು.
ಕರ್ನಾಟಕ ಗೆಲುವಿನತ್ತ ದಾಪುಗಾಲು; ಬರೋಡಾಗೆ 60 ರನ್ ಮುನ್ನಡೆ
ಇದಕ್ಕೂ ಮುನ್ನ ಮೊದಲ ದಿನದಾಟದಲ್ಲಿ ಅಭಿಮನ್ಯು ಮಿಥುನ್ (26ಕ್ಕೆ 3 ವಿಕೆಟ್), ಕೃಷ್ಣಪ್ಪ ಗೌತಮ್ (25ಕ್ಕೆ 3 ವಿಕೆಟ್) ಹಾಗೂ ಪ್ರಸಿದ್ಧ ಕೃಷ್ಣ (7ಕ್ಕೆ 2 ವಿಕೆಟ್) ಮಾರಕ ದಾಳಿಗೆ ತತ್ತರಿಸಿದ ಬರೋಡಾ ಕೇವಲ 85 ರನ್ನಿಗೆ ಸರ್ವಪತನವನ್ನು ಕಂಡಿತ್ತು.
ನಿಮ್ಮ ಮಾಹಿತಿಗಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಕರ್ನಾಟಕ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬರೋಡಾ ವಿರುದ್ಧ ನಡೆಯುತ್ತಿರುವ ಎಲೈಟ್ 'ಎ' ಮತ್ತು 'ಬಿ' ಗುಂಪಿನ ಗೆಲ್ಲಲೇಬೇಕಾದ ಅಂತಿಮ ಲೀಗ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿರುವ ಕರ್ನಾಟಕ ತಂಡವು ಎದುರಾಳಿ ತಂಡವನ್ನು ಎರಡನೇ ಇನ್ನಿಂಗ್ಸ್ನಲ್ಲೂ 296 ರನ್ಗಳಿಗೆ ಕಟ್ಟಿ ಹಾಕಿದೆ.
ಎರಡನೇ ದಿನದಂತ್ಯಕ್ಕೆ ಐದು ವಿಕೆಟ್ ನಷ್ಟಕ್ಕೆ 208 ರನ್ ಪೇರಿಸಿರುವ ಬರೋಡಾ ಮತ್ತಷ್ಟು 88 ರನ್ ಪೇರಿಸಿರುವ ಉಳಿದಿರುವ ಐದು ವಿಕೆಟ್ಗಳನ್ನು ಕಳೆದುಕೊಂಡಿತು. ಕರ್ನಾಟಕ ಪರ ನಾಲ್ಕು ವಿಕೆಟ್ ಕಬಳಿಸಿದ ಪ್ರಸಿದ್ಧ ಕೃಷ್ಣ ಮಿಂಚಿದರು. ಇವರಿಗೆ ತಕ್ಕ ಸಾಥ್ ನೀಡಿದ ರೋನಿತ್ ಮೋರೆ ಮೂರು, ಕೃಷ್ಣಪ್ಪ ಗೌತಮ್ ಎರಡು ಮತ್ತು ಅಭಿಮನ್ಯು ಮಿಥುನ್ ಒಂದು ವಿಕೆಟ್ ಕಬಳಿಸಿದರು.
ಆರ್ಸಿಬಿ ನಾಡಿಮಿಡಿತ 'ಬೆಂಗಳೂರು'; ಕನ್ನಡಿಗರ ಮನಮೆಚ್ಚಿದ ಹೊಸ ಲೋಗೋದಲ್ಲಿ ಏನಿದೆ ವಿಶೇಷ?
ಬರೋಡಾ ಪರ ದಿಟ್ಟ ಹೋರಾಟ ನೀಡಿದ ಅಭಿಮನ್ಯು ರಜಪೂತ್ ಅರ್ಧಶತಕ (52) ಹಾಗೂ ಪಾರ್ತ್ ಕೊಹ್ಲಿ 42 ರನ್ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು .ಇವರಿಬ್ಬರು ಆರನೇ ವಿಕೆಟ್ಗೆ 52 ರನ್ಗಳ ಅಮೂಲ್ಯ ಇನ್ನಿಂಗ್ಸ್ ಕಟ್ಟಿದರು. ಆದರೆ ಈ ಜೋಡಿಯನ್ನು ರೋನಿತ್ ಮೋರೆ ಬೇರ್ಪಡಿಸುವುದರೊಂದಿಗೆ ಕರ್ನಾಟಕ ಪಂದ್ಯದಲ್ಲಿ ಹಿಡಿತ ಸಾಧಿಸಿತ್ತು. ಅಲ್ಲದೆ ಕೊನೆಯ ಐದು ವಿಕೆಟ್ಗಳನ್ನು 47 ರನ್ ಅಂತರದಲ್ಲಿ ಪಡೆಯುವಲ್ಲಿ ಯಶಸ್ವಿಯಾಯಿತು.
ಈ ಮೊದಲು ಬರೋಡಾದ 85 ರನ್ನಿಗೆ ಉತ್ತರವಾಗಿ ಕರ್ನಾಟಕ ತಂಡವು ಮೊದಲ ಇನ್ನಿಂಗ್ಸ್ನಲ್ಲಿ ನಾಯಕ ಕರುಣ್ ನಾಯರ್ (47) ಹಾಗೂ ಅಭಿಮನ್ಯು ಮಿಥುನ್ (40) ಉಪಯುಕ್ತ ಇನ್ನಿಂಗ್ಸ್ ನೆರವಿನಿಂದ 233 ರನ್ ಪೇರಿಸಿತ್ತು. ಈ ಮೂಲಕ ಮೊದಲ ಇನ್ನಿಂಗ್ಸ್ನಲ್ಲಿ 148 ರನ್ಗಳ ಮಹತ್ವದ ಮುನ್ನಡೆ ದಾಖಲಿಸಿತ್ತು. ಬರೋಡಾ ಪರ ಸೊಯೆಬ್ ಸೊಪಾರಿಯಾ 83 ರನ್ನಿಗೆ ಐದು ವಿಕೆಟ್ ಕಿತ್ತು ಮಿಂಚಿದರು.
ಕರ್ನಾಟಕ ಗೆಲುವಿನತ್ತ ದಾಪುಗಾಲು; ಬರೋಡಾಗೆ 60 ರನ್ ಮುನ್ನಡೆ
ಇದಕ್ಕೂ ಮುನ್ನ ಮೊದಲ ದಿನದಾಟದಲ್ಲಿ ಅಭಿಮನ್ಯು ಮಿಥುನ್ (26ಕ್ಕೆ 3 ವಿಕೆಟ್), ಕೃಷ್ಣಪ್ಪ ಗೌತಮ್ (25ಕ್ಕೆ 3 ವಿಕೆಟ್) ಹಾಗೂ ಪ್ರಸಿದ್ಧ ಕೃಷ್ಣ (7ಕ್ಕೆ 2 ವಿಕೆಟ್) ಮಾರಕ ದಾಳಿಗೆ ತತ್ತರಿಸಿದ ಬರೋಡಾ ಕೇವಲ 85 ರನ್ನಿಗೆ ಸರ್ವಪತನವನ್ನು ಕಂಡಿತ್ತು.
ನಿಮ್ಮ ಮಾಹಿತಿಗಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಕರ್ನಾಟಕ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.