ಆ್ಯಪ್ನಗರ

ಜನರು ಏನು ಹೇಳುತ್ತಾರೆಂಬುದನ್ನು ಕೇರ್ ಮಾಡಲ್ಲ: ಶಾಸ್ತ್ರಿ

ಟ್ರೋಲ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳದ ರವಿಶಾಸ್ತ್ರಿ

Times Now 2 Oct 2018, 11:49 am
ಮುಂಬಯಿ: ಕಳೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 1-4ರ ಅಂತರದ ಹೀನಾಯ ಸರಣಿ ಸೋಲಿಗೆ ಗುರಿಯಾಗಿತ್ತು. ಇದರಿಂದಾಗಿ ಕೋಚ್ ರವಿಶಾಸ್ತ್ರಿ ವಿರುದ್ಧ ವ್ಯಾಪಕ ಟೀಕೆಗಳು ಎದುರಾಗಿದ್ದವು.
Vijaya Karnataka Web kohli-shastri-06


ಅತ್ತ ಈಗಿನ ಭಾರತ ಟೆಸ್ಟ್ ತಂಡ ಕಳೆದ 15-20 ವರ್ಷಗಳಲ್ಲೇ ಶ್ರೇಷ್ಠ ತಂಡ ಎಂಬ ಶಾಸ್ತ್ರಿ ಹೇಳಿಕೆಗೆ ಸುನಿಲ್ ಗವಾಸ್ಕರ್, ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್ ಮುಂತಾದ ಮಾಜಿಗಳೇ ತೀವ್ರ ಟೀಕೆ ವ್ಯಕ್ತಪಡಿಸಿದ್ದರು.

ಇದೀಗ ತಮ್ಮ ವಿರುದ್ಧ ಎದುರಾಗುತ್ತಿರುವ ಟ್ರೋಲ್‌ಗಳನ್ನು ಲೆಕ್ಕಿಸದ ರವಿಶಾಸ್ತ್ರಿ, "ಜನರು ಏನು ಹೇಳುತ್ತಾರೆಂಬುದನ್ನು ಕೇರ್ ಮಾಡಲ್ಲ" ಎಂದಿದ್ದಾರೆ.

"ಟೀಕೆಗಳನ್ನು ಓದುವ ಸಮಯ ನನಗಿಲ್ಲ. ಖಂಡಿತವಾಗಿಯೂ ಟ್ವಿಟರ್-ಇನ್‌ಸ್ಟಾಗ್ರಾಂ ಬಳಕೆ ಮಾಡುತ್ತೇನೆ. ಆದರೆ ಅದರಲ್ಲಿ ಏನೆಲ್ಲ ಕಾಮೆಂಟ್ ಬರೆದಿರುತ್ತಾರೆ ಎಂಬುದನ್ನು ಓದುವುದಿಲ್ಲ. ಎಲ್ಲಿಯ ವರೆಗೂ ನೀವೇನು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ನಂಬಿಕೆಯಿದೆಯೋ ಅಲ್ಲಿಯ ವರೆಗೆ ನನಗೆ ಭಯವಿಲ್ಲ. ನಾನೇನು ಮಾಡುತ್ತಿದ್ದೇನೆ ಎಂಬುದರ ಬಗ್ಗೆ ಶೇಕಡ 100ರಷ್ಟು ಆತ್ಮವಿಶ್ವಾಸವನ್ನು ಹೊಂದಿದ್ದಾರೆ. ನನಗೆ ಯಾವುದೇ ರೀತಿಯ ಚಿಂತೆಯಿಲ್ಲ. ಒಂದು ವೇಳೆ ಗಾಬರಿಗೊಳ್ಳಲು ಆರಂಭಿಸಿದರೆ ಎಲ್ಲವೂ ಗೊಂದಲಕ್ಕೀಡಾಗಲಿದೆ. ನಾನು ಇವೆಲ್ಲವನ್ನು ಕಡೆಗಣಿಸುತ್ತೇನೆ" ಎಂದು ನುಡಿದರು.

2017ರಲ್ಲಿ ವಿರಾಟ್ ಕೊಹ್ಲಿ ಜೊತೆಗಿನ ಭಿನ್ನಪ್ರಾಯದಿಂದಾಗಿ ಅನಿಲ್ ಕುಂಬ್ಳೆ ಕೋಚ್ ಸ್ಥಾನವನ್ನು ತೊರೆದಿದ್ದರು. ಬಳಿಕ ಕೊಹ್ಲಿ ಅವರ ವಿಶೇಷ ಆಸಕ್ತಿಯ ಮೆರೆಗೆ ರವಿಶಾಸ್ತ್ರಿ ಅವರನ್ನು ಕೋಚ್ ಸ್ಥಾನಕ್ಕೆ ನೇಮಕಗೊಳಿಸಲಾಗಿತ್ತು. ಆದರೆ ಶಾಸ್ತ್ರಿ ಅವಧಿಯಲ್ಲಿ ಭಾರತ ವಿದೇಶ ಪ್ರವಾಸದಲ್ಲಿ ಹೀನಾಯ ಸರಣಿ ಸೋಲಿನ ಮುಖಭಂಗ ಎದುರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌