ಆ್ಯಪ್ನಗರ

ಮಾನಿಸಿಕ ದಣಿವಿನಿಂದಾಗಿ ವಿರಾಟ್‌ಗೆ ವಿಶ್ರಾಂತಿ: ಶಾಸ್ತ್ರಿ ಸ್ಪಷ್ಟನೆ

ನಾಯಕ ಕೊಹ್ಲಿಗೆ ವಿಶ್ರಾಂತಿ ನೀಡಿದ್ದೇಕೆ? ಶಾಸ್ತ್ರಿ ಉತ್ತರ

TOI.in 3 Oct 2018, 11:01 am
ಹೊಸದಿಲ್ಲಿ: ಇತ್ತೀಚೆಗಷ್ಟೇ ನಡೆದ ಏಷ್ಯಾ ಕಪ್‌ನಲ್ಲಿ ಟೀಮ್ ಇಂಡಿಯಾ ಖಾಯಂ ನಾಯಕ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ಸೂಚಿಸಲಾಗಿತ್ತು. ಬಳಿಕ ವಿರಾಟ್ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ, ಟೀಮ್ ಇಂಡಿಯಾವನ್ನು ದಾಖಲೆಯ ಏಳನೇ ಬಾರಿಗೆ ಪ್ರಶಸ್ತಿಯತ್ತ ಮುನ್ನಡೆಸಿದ್ದರು.
Vijaya Karnataka Web kohli-shastri-07


ಏಷ್ಯಾ ಕಪ್‌ನಂತಹ ಪ್ರಮುಖ ಟೂರ್ನಿಯಿಂದ ವಿರಾಟ್‌ಗೆ ವಿಶ್ರಾಂತಿ ಸೂಚಿಸಿರುವುದು ಕೆಲವು ಮೂಲಗಳಿಂದ ಟೀಕೆಗೆ ಗುರಿಯಾಗಿತ್ತು. ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಕೋಚ್ ರವಿಶಾಸ್ತ್ರಿ, ಮಾನಿಸಿಕ ದಣಿವಿನಿಂದಾಗಿ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು ಎಂದಿದ್ದಾರೆ.

"ವಿರಾಟ್‌ಗೆ ಈ ವಿಶ್ರಾಂತಿ ಅತ್ಯಗತ್ಯವಾಗಿತ್ತು. ದೈಹಿಕವಾಗಿ ಅವರೊಬ್ಬ ಗೂಳಿ. ಅವರನ್ನು ಮೈದಾನದಿಂದ ಹೊರಗಿಡಲು ಸಾಧ್ಯವಿಲ್ಲ. ಹಾಗಾಗಿ ವಿರಾಟ್ ಆಡಿದರೆ ಎಷ್ಟೊಂದು ತ್ರೀವತೆಯೊಂದಿಗೆ ಆಡುತ್ತಾರೆಂಬುದು ನಿಮಗೆ ಗೊತ್ತು. ಹಾಗಾಗಿ ಇವೆಲ್ಲವೂ ಮಾನಸಿಕ ದಣಿವಿನ ವಿಚಾರ ಮಾತ್ರವಾಗಿತ್ತು. ಅವರಿಗೆ ವಿಶ್ರಾಂತಿ ನೀಡಿ, ಕ್ರಿಕೆಟ್‌ನಿಂದ ಸ್ವಲ್ಪ ಸಮಯ ದೂರವಿರಿಸಿ ಮತ್ತೆ ತಾಜಾತನದೊಂದಿಗೆ ಕಮ್‌ಬ್ಯಾಕ್ ಮಾಡಲಿದ್ದಾರೆ" ಎಂದರು.

ಹಾಗೆಯೇ ಹೆಚ್ಚಿನ ಹುಮ್ಮಸ್ಸಿನಿಂದ ಕೂಡಿರುವಂತೆ ಮಾಡಲು ಅಗತ್ಯ ಸಂದರ್ಭದಲ್ಲಿ ಆಟಗಾರರು ವಿಶ್ರಾಂತಿ ಸೂಚಿಸಲಿದ್ದೇವೆ ಎಂದು ತಿಳಿಸಿದರು.

ವೆಸ್ಟ್‌ಇಂಡೀಸ್ ಸರಣಿಯಿಂದ ಜಸ್ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ಅವರಿಗೂ ವಿಶ್ರಾಂತಿ ಸೂಚಿಸಿದ್ದೇವೆ. ಅವರಿಬ್ಬರೂ ಮುಂಬರುವ ವಿಶ್ವಕಪ್‌ನಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಹಾಗಾಗಿ ತಾಜಾತನದೊಂದಿಗೆ ಹುಮ್ಮಸ್ಸು ಕಾಪಾಡಿಕೊಳ್ಳುವುದು ಮುಖ್ಯ ಎಂದರು.

ಇನ್ನೊಂದೆಡೆ ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಕೊಹ್ಲಿ ಕಮ್‌ಬ್ಯಾಕ್ ಮಾಡಿಕೊಳ್ಳಲಿದ್ದಾರೆ. ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಅಕ್ಟೋಬರ್ ರಂದು ಆರಂಭವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌