ಆ್ಯಪ್ನಗರ

ಶಾಸ್ತ್ರಿಗೆ ಕೋಚ್ ಹುದ್ದೆ: ಗವಾಸ್ಕರ್ ಅನಿಸಿಕೆ

ಭಾರತ ಕ್ರಿಕೆಟ್ ತಂಡದ ನೂತನ ಪ್ರಧಾನ ಕೋಚ್ ಹುದ್ದೆಗೆ ರವಿಶಾಸ್ತ್ರಿ ಆಯ್ಕೆಯಾಗಲಿದ್ದಾರೆ ಎಂದು ಮಾಜಿ ನಾಯಕ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ET Online 4 Jul 2017, 10:49 pm
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ನೂತನ ಪ್ರಧಾನ ಕೋಚ್ ಹುದ್ದೆಗೆ ರವಿಶಾಸ್ತ್ರಿ ಆಯ್ಕೆಯಾಗಲಿದ್ದಾರೆ ಎಂದು ಮಾಜಿ ನಾಯಕ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web ravi shastri will probably get the coach job sunil gavaskar
ಶಾಸ್ತ್ರಿಗೆ ಕೋಚ್ ಹುದ್ದೆ: ಗವಾಸ್ಕರ್ ಅನಿಸಿಕೆ


ನಾಯಕ ವಿರಾಟ್ ಕೋಹ್ಲಿ ಜೊತೆಗಿನ ಭಿನ್ನಪ್ರಾಯದ ಬಳಿಕ ಕೋಚ್ ಹುದ್ದೆಯನ್ನು ಅನಿಲ್ ಕುಂಬ್ಳೆ ತೊರೆದಿದ್ದರು. ಅತ್ತ ಶಾಸ್ತ್ರಿ ಅವರಲ್ಲಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿಯ ಮೂವರು ಸದಸ್ಯರುಗಳಲ್ಲಿ ಓರ್ವರಾಗಿರುವ ಸ್ವತ: ಸಚಿನ್ ತೆಂಡೂಲ್ಕರ್ ಸೂಚಿಸಿದ್ದರು.

ಆದರೆ ಶಾಸ್ತ್ರಿ ಆಯ್ಕೆಗೆ ಗವಾಸ್ಕರ್ ನೀಡುವ ಕಾರಣವೇ ಬೇರೆ. ಕುಂಬ್ಳೆ ಅವರ ಒಂದು ವರ್ಷದ ಅವಧಿಗೂ ಮೊದಲು 2014ರಿಂದ 2016ರ ವರಗೆ ಟೀಮ್ ಇಂಡಿಯಾ ನಿರ್ದೇಶಕರಾಗಿ ರವಿಶಾಸ್ತ್ರಿ ಕೆಲಸ ನಿರ್ವಹಿಸಿದ್ದರು. ಈ ಹಂತದಲ್ಲಿ ಭಾರತ ತಂಡವು ಅತ್ಯುತ್ತಮ ಪ್ರದರ್ಶನ ನೀಡಲು ಪ್ರಾರಂಭಿಸಿತ್ತು ಎಂದಿದ್ದಾರೆ.

ಇಂಗ್ಲೆಂಡ್ ವಿರುದ್ಧ ಸೋಲಿನ ಬಳಿಕ ನಿರ್ದೇಶಕ ಹುದ್ದೆಗೇರುವಂತೆ ಬಿಸಿಸಿಐ ನಿರ್ದೇಶ ನೀಡಿತ್ತು. ತದಾ ಬಳಿಕ ತಂಡದ ಫಲಿತಾಂಶದಲ್ಲ ಬದಲಾವಣೆ ಶುರುವಾಗಿತ್ತು. ಬಹುಶ: ಅವರಿಗೆ ಕೋಚ್ ಹುದ್ದೆ ಸಿಗಲಿದೆ ಎಂದು ತಿಳಿಸಿದ್ದಾರೆ.

ಶಾಸ್ತ್ರಿ ಮುಂದಾಳತ್ವದಲ್ಲಿ ಭಾರತ 2015 ಏಕದಿನ ಹಾಗೂ 2016 ಟ್ವೆಂಟಿ-20 ವಿಶ್ವಕಪ್‌ನಲ್ಲಿ ಅನುಕ್ರಮವಾಗಿ ಸೆಮಿಫೈನಲ್ ಹಂತದ ವರೆಗೆ ತಲುಪಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌