ಆ್ಯಪ್ನಗರ

ವಿಜಯ್‌ ಹಝಾರೆ ಟ್ರೋಫಿ ಫೈನಲ್‌ನಲ್ಲಿ ಮಾಡಿದ ಎಡವಟ್ಟಿಗೆ ದಂಡ ತೆರಲಿದ್ದಾರೆ ರವಿಚಂದ್ರನ್‌ ಅಶ್ವಿನ್‌!

ಅನುಭವಿ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌, ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿಕರ್ನಾಟಕ ತಂಡದ ವಿರುದ್ಧ ತಮಿಳುನಾಡಿಗೆ ಗೆಲುವು ತಂದುಕೊಡುವ ಅತಿಯಾದ ಆತ್ಮವಿಶ್ವಾಸದಲ್ಲೊಂದು ಎಡವಟ್ಟು ಮಾಡಿಕೊಂಡಿದ್ದಾರೆ.

Vijaya Karnataka Web 25 Oct 2019, 7:34 pm
ಬೆಂಗಳೂರು: ಟೀಮ್‌ ಇಂಡಿಯಾದ ಅನುಭವಿ ಸ್ಪಿನ್ ಬೌಲರ್‌ ರವಿಚಂದ್ರನ್‌ ಅಶ್ವಿನ್‌ ಮಾಡಿಕೊಂಡ ಎಡವಟ್ಟಿನಿಂದಾಗಿ ಇದೀಗ ದಂಡ ತೆರುವಂತಾಗಿದೆ. ಶುಕ್ರವಾರ ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯ ಕರ್ನಾಟಕ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಆರ್‌. ಅಶ್ವಿನ್‌ ಬಿಸಿಸಿಐ ಲೋಗೊ ಹೊಂದಿರುವ ಹೆಲ್ಮೆಟ್‌ ಬಳಕೆ ಮಾಡಿ ನಿಯಮ ಉಲ್ಲಂಘಿಸಿದ್ದಾರೆ.
Vijaya Karnataka Web R ashwin fined for bcci helmet use in vijay hazare final


ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ತಮಿಳುನಾಡು ತಂಡ ತನ್ನ ಪಾಲಿನ 49.5 ಓವರ್‌ಗಳಲ್ಲಿ 252 ರನ್‌ಗಳಿಗೆ ಆಲ್‌ಔಟ್‌ ಆಯಿತು. ಕರ್ನಾಟಕದ ಅನುಭವಿ ವೇಗಿ ಅಭಿಮನ್ಯು ಮಿಥುನ್‌ ತಮ್ಮ ಹುಟ್ಟುಹಬ್ಬದ ದಿನದಂದು ಹ್ಯಾಟ್ರಿಕ್‌ ಒಳಗೊಂಡಂತೆ 5 ವಿಕೆಟ್‌ ಪಡೆದು ಅಬ್ಬರಿಸಿದರು.

ತಮಿಳುನಾಡು ಮಣಿಸಿ 4ನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಬಗಲಿಗೇರಿಸಿದ ಕರ್ನಾಟಕ

ಬಳಿಕ ಗುರಿ ಬೆನ್ನತ್ತಿದ ಕರ್ನಾಟಕ ತಂಡ 23 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 146 ರನ್‌ ಗಳಿಸಿದ್ದಾಗ ಸುರಿದ ಧಾರಾಕಾರ ಮಳೆಯಿಂದಾಗಿ ಪಂದ್ಯವನ್ನು ನಿಲ್ಲಿಸಲಾಯಿತು. ವಿ ಜಯದೇವನ್‌ (ವಿಜೆಡಿ) ನಿಯಮದ ಅನ್ವಯ ಕರ್ನಾಟಕ ತಂಡ 1 ವಿಕೆಟ್‌ ನಷ್ಟಕ್ಕೆ ಕನಿಷ್ಠ 87 ರನ್‌ ಗಳಿಸಿರಬೇಕಿತ್ತು. ಹೀಗಾಗಿ ಒಟ್ಟು 60 ರನ್‌ಗಳ ಭಾರಿ ಮುನ್ನಡೆಯಲ್ಲಿದ್ದ ಕರ್ನಾಟಕ ತಂಡಕ್ಕೆ ನಾಲ್ಕನೇ ಬಾರಿ ಪ್ರಶಸ್ತಿ ಎತ್ತಿ ಹಿಡಿಯುವ ಅದೃಷ್ಟ ಒಲಿಯಿತು.

ಇದಕ್ಕೂ ಮುನ್ನ ಮೊದಲು ಬ್ಯಾಟ್‌ ಮಾಡಿದ ತಮಿಳುನಾಡು ತಂಡ ಅಚ್ಚರಿಯ ಬೆಳವಣಿಗೆ ಎಂಬಂತೆ ರವಿ ಅಶ್ವಿನ್‌ ಅವರನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿತ್ತು. ಆದರೆ, ತಮಿಳುನಾಡಿನ ಈ ತಂತ್ರ ಯಶಸ್ಸು ಕಾಣಲಿಲ್ಲ. 13 ಎಸೆತಗಳನ್ನು ಎದುರಿಸಿ ಕೇವಲ 8 ರನ್‌ಗಳ ಸಂಪಾದನೆಯೊಂದಿಗೆ ಪೆವಿಲಿಯನ್‌ ಸೇರಿದ್ದರು. ಈ ಸಂದರ್ಭದಲ್ಲಿ 33 ವರ್ಷದ ಅನುಭವಿ ಆಟಗಾರ ಅಶ್ವಿನ್‌ ಭಾರತ ಕ್ರಿಕೆಟ್‌ ತಂಡದ ಹೆಲ್ಮೆಟ್‌ ಧರಿಸಿ ಆಡಿದ್ದು ಸಮಸ್ಯೆ ತಂದೊಡ್ಡಿದೆ.

ಬರ್ತ್ ಡೇ ಬಾಯ್ ಅಭಿಮನ್ಯು ಮಿಥುನ್ 'ಹ್ಯಾಟ್ರಿಕ್' ಸಾಧನೆ ನೋಡಲು ಮರೆಯದಿರಿ!

ಬಿಸಿಸಿಐನ ನಿಯಮಗಳ ಅನ್ವಯ ಟೀಮ್‌ ಇಂಡಿಯಾ ಲೋಗೊ ಹೊಂದಿರುವ ಸಮವಸ್ತ್ರ, ಕ್ಯಾಪ್‌ ಅಥವಾ ಹೆಲ್ಮೆಟ್‌ ಯಾವುದನ್ನೂ ದೇಶಿ ಟೂರ್ನಿಗಳಲ್ಲಾಗಲಿ ಅಥವಾ ಯಾವುದೇ ಲೀಗ್‌ಗಳಲ್ಲಿ ಬಳಕೆ ಮಾಡುವಂತಿಲ್ಲ. ಬಳಕೆ ಮಾಡಿದರೂ ಲೋಗೊ ಕಾಣದಂತೆ ಅದನ್ನು ಮುಚ್ಚಬೇಕಾಗುತ್ತದೆ.

"ದೇಶಿ ಟೂರ್ನಿಗಳಲ್ಲಿ ಟೀಮ್‌ ಇಂಡಿಯಾಗೆ ಬಳಕೆ ಮಾಡುವ ಹೆಲ್ಮೆಟ್‌ ಉಪಯೋಗಿಸುವಾಗ ಬಿಸಿಸಿಐ ಲೋಗೊ ಮುಚ್ಚಬೇಕು ಎಂದು ನಿಯಮ ಸ್ಪಷ್ಟವಾಗಿ ಹೇಳುತ್ತದೆ. ಈ ಬಗ್ಗೆ ಮ್ಯಾಚ್‌ ರೆಫ್ರಿ ಮತ್ತು ಆಟಗಾರರಿಗೆ ಹಲವು ವರ್ಷಗಳಿಂದ ತಿಳಿ ಹೇಳಲಾಗಿದೆ. ಹೀಗಿರುವಾಗ ಆಟಗಾರರು ತಪ್ಪೆಸಗಿದರೆ ಮ್ಯಾಚ್‌ ರೆಫ್ರಿ ಆತನ ವಿರುದ್ಧ ದಂಡ ವಿಧಿಸಬಹುದಾಗಿದೆ," ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಭಾರತ 'ಎ' ತಂಡದ ಪರ ಬ್ಯಾಟ್‌ ಬೀಸಲಿರುವ ಕರ್ನಾಟಕದ ಯುವ ತಾರೆ ದೇವದತ್‌ ಪಡಿಕ್ಕಲ್‌!

ವಿಜಯ್‌ ಹಝಾರೆ ಟ್ರೋಫಿ ಫೈನಲ್‌ನಲ್ಲಿ ಆಡಿದ ಟೀಮ್‌ ಇಂಡಿಯಾ ಆಟಗಾರರಾದ ಕೆ.ಎಲ್‌ ರಾಹುಲ್‌ ಮತ್ತು ಮಯಾಂಕ್‌ ಅಗರ್ವಾಲ್‌ ಕೂಡ ಅದೇ ಹೆಲ್ಮೆಟ್‌ ಬಳಕೆ ಮಾಡಿದ್ದರು. ಆದರೆ, ಟೇಪ್‌ ಮೂಲಕ ಲೋಗೊ ಕಾಣದಂತೆ ಮುಚ್ಚಿ ನಿಯಮಾನುಸಾರ ನಡೆದುಕೊಂಡಿದ್ದರು. ಇದೀಗ ಅಶ್ವಿನ್‌ಗೆ ವಿಧಿಸಲಾಗುವ ದಂಡವನ್ನು ಪಂದ್ಯದ ರೆಫ್ರಿ ಚಿನ್ಮಯ್‌ ಶರ್ಮಾ ನಿರ್ಧರಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌