ಆ್ಯಪ್ನಗರ

ತವರಿನಲ್ಲಿ 250 ಟೆಸ್ಟ್‌ ವಿಕೆಟ್‌, ಕುಂಬ್ಳೆ, ಹರ್ಭಜನ್‌ ಸಾಲಿಗೆ ಸೇರಿದ ರವಿಚಂದ್ರನ್‌ ಅಶ್ವಿನ್‌

ಭಾರತ ತಂಡದ ಸ್ಪಿನ್‌ ದಾಳಿಯ ಮುಂದಾಳು ರವಿಚಂದ್ರನ್‌ ಅಶ್ವಿನ್‌, ಇಲ್ಲಿ ನಡೆಯುತ್ತಿರುವ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯ ಪ್ರಥಮ ಪಂದ್ಯದ ಮೊದಲ ದಿನದಾಟದಲ್ಲಿ ತಾಯ್ನಾಡಿನಲ್ಲಿ 250 ಟೆಸ್ಟ್‌ ವಿಕೆಟ್‌ಗಳನ್ನು ಪಡೆದ ಸಾಧನೆ ಮೆರೆದಿದ್ದಾರೆ.

Vijaya Karnataka Web 14 Nov 2019, 2:32 pm
ಇಂದೋರ್‌: ಭಾರತ ತಂಡದ ಸ್ಪಿನ್‌ ದಾಳಿಯ ಮುಂದಾಳು ರವಿಚಂದ್ರನ್‌ ಅಶ್ವಿನ್‌, ಇಲ್ಲಿ ನಡೆಯುತ್ತಿರುವ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯ ಪ್ರಥಮ ಪಂದ್ಯದ ಮೊದಲ ದಿನದಾಟದಲ್ಲಿ ತಾಯ್ನಾಡಿನಲ್ಲಿ 250 ಟೆಸ್ಟ್‌ ವಿಕೆಟ್‌ಗಳನ್ನು ಪಡೆದ ಸಾಧನೆ ಮೆರೆದಿದ್ದಾರೆ.
Vijaya Karnataka Web Ravichandran Ashwin 250th wicket in india 2019


ಈ ಮೂಲಕ ಭಾರತದ ಸ್ಪಿನ್‌ ದಿಗ್ಗಜರಾದ ಅನಿಲ್‌ ಕುಂಬ್ಳೆ ಮತ್ತು ಹರ್ಭಜನ್‌ ಸಿಂಗ್‌ ಅವರ ನಂತರ ಈ ಸಾಧನೆ ಮೆರೆದ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅಶ್ವಿನ್‌, ತಮ್ಮ ಟೆಸ್ಟ್‌ ವೃತ್ತಿ ಬದುಕಿನಲ್ಲಿ 350 ವಿಕೆಟ್‌ಗಳ ಗಡಿ ದಾಟಿದ್ದರು. ಇದೀಗ ಮತ್ತೊಂದು ಸಾಧನೆಯ ಗರಿಯನ್ನು ತಮ್ಮ ಕಿರೀಟಕ್ಕೆ ಏರಿಸಿಕೊಂಡಿದ್ದಾರೆ.

ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿ ಬಾಂಗ್ಲಾ; ಟೀ ವಿರಾಮಕ್ಕೆ 140/7

ಇಲ್ಲಿನ ಹೋಳ್ಕರ್‌ ಕ್ರೀಡಾಂಗಣದಲ್ಲಿ ಗುರುವಾರ (ನ.14ರಂದು) ಆರಂಭವಾದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಬಾಂಗ್ಲಾ ತಂಡ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಅಂತೆಯೇ ತಂಡಕ್ಕೆ ಬೃಹತ್‌ ಮೊತ್ತ ತಂದುಕೊಡುವ ದಿಟ್ಟತನದೊಂದಿಗೆ 37 ರನ್‌ಗಳನ್ನು ಗಳಿಸಿ ಬ್ಯಾಟ್‌ ಮಾಡುತ್ತಿದ್ದ ಪ್ರವಾಸಿ ತಂಡದ ನಾಯಕ ಮೊಮಿನುಲ್ ಹಕ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದ ಅಶ್ವಿನ್‌, ತಾಯ್ನಾಡಿನಲ್ಲಿ ತಮ್ಮ 250ನೇ ವಿಕೆಟ್‌ನ ಸಂಭ್ರಮ ಆಚರಿಸಿದರು.

ದಾದಾ ದಾಖಲೆಯ ಮುರಿಯುವ ಹೊಸ್ತಿಲಲ್ಲಿ ಕಿಂಗ್ ಕೊಹ್ಲಿ

ಪಂದ್ಯದ ಮೊದಲ ದಿನದ ಪ್ರಥಮ ಅವಧಿಯಲ್ಲಿ (ಭೋಜನ ವಿರಾಮಕ್ಕೂ ಮುನ್ನ) ವೇಗದ ಬೌಲರ್‌ಗಳ ದರ್ಬಾರ್‌ ಮೆರೆದ ಹಿನ್ನೆಲೆಯಲ್ಲಿ ಅಶ್ವಿನ್‌ಗೆ ಕೇವಲ 4 ಓವರ್‌ಗಳನ್ನು ಎಸೆಯುವ ಅವಕಾಶ ಮಾತ್ರವೇ ಲಭ್ಯವಾಯಿತು. ಆದರೂ ಮೊದಲ ಅವಧಿಯಲ್ಲಿನ ತಮ್ಮ 4 ಓವರ್‌ಗಳ ಸ್ಪೆಲ್‌ನಲ್ಲೇ ವಿಕೆಟ್‌ ಪಡೆಯುವ ಅವಕಾಶವಿತ್ತು. ಮೊಮಿನುಲ್ ಹಕ್‌ ಅವರ ಕ್ಯಾಚ್‌ ಪಡೆಯುವಲ್ಲಿ ಸ್ಪಿಲ್‌ ಫೀಲ್ಡರ್‌ ಅಜಿಂಕ್ಯ ರಹಾನೆ ವಿಫಲರಾದ್ದರಿಂದ ಇದು ಸಾಧ್ಯವಾಗಲಿಲ್ಲ.

ಭಾರತ vs ಬಾಂಗ್ಲಾದೇಶ ಪ್ರಥಮ ಟೆಸ್ಟ್‌ ಸ್ಕೋರ್‌ ಕಾರ್ಡ್‌

ಇದಕ್ಕೂ ಮುನ್ನ ವೇಗದ ಬೌಲರ್‌ಗಳಾದ ಇಶಾಂತ್‌ ಶರ್ಮಾ, ಉಮೇಶ್‌ ಯಾದವ್‌ ಮತ್ತು ಮೊಹಮ್ಮದ್‌ ಶಮಿ ಭರ್ಜರಿ ದಾಳಿ ಸಂಘಟಿಸಿ ತಲಾ ಒಂದು ವಿಕೆಟ್‌ ಪಡೆದು ಭಾರತ ತಂಡಕ್ಕೆ ಅತ್ಯುತ್ತಮ ಆರಂಭ ಒದಗಿಸಿ ಕೊಟ್ಟರು.

ಮಗದೊಂದು ಸ್ಮರಣೀಯ ಮೈಲುಗಲ್ಲು ತಲುಪಿದ ರೋಹಿತ್ ಶರ್ಮಾ

ಬ್ಯಾಟಿಂಗ್‌ಗೆ ಉತ್ತಮವಾಗಿದ್ದ ಪಿಚ್‌ನಲ್ಲಿ ಬಾಂಗ್ಲಾ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡು ಉತ್ತಮ ನಿರ್ಧಾರ ತೆಗೆದುಕೊಂಡಿತ್ತು. ಅದಕ್ಕೆ ತಕ್ಕಂತೆ ಆರಂಭಿಕ ಬ್ಯಾಟ್ಸ್‌ಮನ್‌ಗಳ ಹೊಸ ಚೆಂಡನ್ನು ನಿರ್ವಹಿಸಬೇಕಿತ್ತಷ್ಟೆ. ಆದರೆ, ಉಮೇಶ್‌ ಯಾದವ್‌ ದಕ್ಷಿಣ ಆಫ್ರಿಕಾ ವಿರುದ್ಧದ ಲಯವನ್ನು ಕಾಯ್ದುಕೊಳ್ಳುವ ಮೂಲಕ ಆರಂಭಕಾರ ಇಮ್ರುಲ್‌ ಕಾಯೆಸ್‌ (6) ಅವರನ್ನು ಪೆವಿಲಿಯನ್‌ಗೆ ಸೇರಿಸಿದರು, ಶದ್ಮಾನ್‌ ಇಸ್ಲಾಮ್‌ (6) ಅವರನ್ನು ಇಶಾಂತ್‌ ಶರ್ಮಾ ಪೆವಿಲಿಯನ್‌ಗೆ ಅಟ್ಟಿದರು. ನಂತರ ದಾಳಿಗಿಳಿದ ಸ್ಟ್ರೈಕ್‌ ಬೌಲರ್‌ ಮೊಹಮ್ಮದ್‌ ಶಮಿ, 13 ರನ್‌ ಗಳಿಸಿ ಎಚ್ಚರಿಕೆಯ ಬ್ಯಾಟಿಂಗ್‌ ನಡೆಸುತ್ತಿದ್ದ ಮೊಹಮ್ಮದ್‌ ಮಿಥುನ್‌ ಅವರನ್ನು ಎಲ್‌ಬಿಡಬ್ಲ್ಯು ಬಲಗೆ ಕೆಡವಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌