ಆ್ಯಪ್ನಗರ

ಕೊಹ್ಲಿ-ರೋಹಿತ್ ನಡುವಣ ಭಿನ್ನಾಭಿಪ್ರಾಯ ಸಂಪೂರ್ಣ ಅಸಂಬದ್ಧ

ವಿಶ್ವಕಪ್ ಸೋಲಿನ ಬೆನ್ನಲ್ಲೇ ಭಾರತ ತಂಡದಲ್ಲಿ ಬಣ ರೂಪುಗೊಂಡಿದ್ದು, ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ಬಗ್ಗೆ ವದಂತಿಗಳು ಹಬ್ಬಿದ್ದವು. ಈ ಎಲ್ಲ ಆರೋಪಗಳು ಸಂಪೂರ್ಣ ಅಸಂಬದ್ಧ ಎಂಬುದನ್ನು ಮೂಲಗಳು ತಿಳಿಸಿವೆ.

Vijaya Karnataka Web 18 Jul 2019, 4:44 pm
ಹೊಸದಿಲ್ಲಿ: ಏಕದಿನ ವಿಶ್ವಕಪ್‌ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿರುವಂತೆಯೇ ಟೀಮ್ ಇಂಡಿಯಾದಲ್ಲಿ ಬಣ ರೂಪುಗೊಂಡಿದ್ದು, ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬುದರ ಬಗ್ಗೆ ವರದಿಗಳು ಹಬ್ಬಿದ್ದವು.
Vijaya Karnataka Web kohli-rohit-01


ಆದರೆ ಈ ಎಲ್ಲ ಆರೋಪಗಳು ಸಂಪೂರ್ಣ ಅಸಂಬದ್ಧ ಎಂದು ತಂಡಕ್ಕೆ ಹತ್ತಿರವಾದ ಮೂಲಗಳು ತಿಳಿಸಿವೆ. ಅಲ್ಲದೆ ವಿಶ್ವಕಪ್ ಸೋಲಿನ ಬೆನ್ನಲ್ಲೇ ಕೆಲವರು ತಮ್ಮ ಬೆಳೆಯನ್ನು ಬೇಯಿಸಲು ಬಯಸುತ್ತಿದೆ ಎಂಬುದು ವ್ಯಕ್ತವಾಗಿದೆ.

ಭಾರತ ತಂಡದ ಕೆಲವು ಆಟಗಾರರು ಮುಖ್ಯ ತರಬೇತುದಾರ ರವಿಶಾಸ್ತ್ರಿ ನೇತೃತ್ವದ ಕೋಚಿಂಗ್ ಸ್ಟಾಫ್‌ಗಳ ಬಗ್ಗೆ ಅಸಮಾಧಾನವನ್ನು ತೋಡಿಕೊಂಡಿದ್ದಾರೆ ಎಂಬುದರ ಬಗ್ಗೆಯೂ ವರದಿಗಳು ಹಬ್ಬಿದ್ದವು. ಈ ಎಲ್ಲದರ ಬಗ್ಗೆ ಉಂಟಾಗಿರುವ ವದಂತಿಗಳ ಬಗ್ಗೆ ಹಿರಿಯ ಆಟಗಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಏತನ್ಮಧ್ಯೆ ಶುಕ್ರವಾರ ಸಭೆ ಸೇರಲಿರುವ ಬಿಸಿಸಿಐ ಆಯ್ಕೆ ಸಮಿತಿಯು ವೆಸ್ಟ್‌ಇಂಡೀಸ್ ಸರಣಿಗಾಗಿನ ಟೀಮ್ ಇಂಡಿಯಾವನ್ನು ಆರಿಸಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌