ಆ್ಯಪ್ನಗರ

ಪಂತ್, ರಾಯುಡುಗೆ ಈಗಲೂ ವಿಶ್ವಕಪ್ ಆಡುವ ಅವಕಾಶವಿದೆ; ಹೇಗೆ ಅಂತೀರಾ?

ಮುಂಬರುವ ಏಕದಿನ ವಿಶ್ವಕಪ್‌ಗಾಗಿನ ಭಾರತ ತಂಡದ ಹೆಚ್ಚುವರಿ ಮೀಸಲು ಆಟಗಾರರಾಗಿ ರಿಷಬ್ ಪಂತ್, ಅಂಬಟಿ ರಾಯುಡು ಹಾಗೂ ನವದೀಪ್ ಸೈನಿ ಅವರನ್ನು ಹೆಸರಿಸಲಾಗಿದೆ. ಹಾಗಾಗಿ ತಂಡದಲ್ಲಿ ಯಾರಾದರೂ ಗಾಯಗೊಂಡರೆ ಇಂಗ್ಲೆಂಡ್ ಪ್ರಯಾಣ ಬೆಳೆಸುವ ಅವಕಾಶ ಸಿಗಲಿದೆ

TOI.in 17 Apr 2019, 4:24 pm
ಹೊಸದಿಲ್ಲಿ: ಮುಂಬರುವ ಐಸಿಸಿ ಏಕದಿನ ವಿಶ್ವಕಪ್‌ಗಾಗಿನ 15 ಸದಸ್ಯ ಬಲದ ಭಾರತ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದೆ. ಆದರೆ ತಂಡದಿಂದ ರಿಷಬ್ ಪಂತ್ ಹಾಗೂ ಅಂಬಟಿ ರಾಯುಡು ಅವರನ್ನು ಕೈಬಿಟ್ಟಿರುವುದು ವ್ಯಾಪಕ ಟೀಕೆಗಳಿಗೆ ಎಡೆ ಮಾಡಿಕೊಟ್ಟಿದೆ.
Vijaya Karnataka Web pant-rayudu


ಇದರೊಂದಿಗೆ ರಿಷಬ್ ಪಂತ್ ಹಾಗೂ ಅಂಬಟಿ ರಾಯುಡು ವಿಶ್ವಕಪ್ ಕನಸು ಭಗ್ನಗೊಂಡಿದೆ. ಹಾಗಿದ್ದರೂ ಒಂದು ವೇಳೆ ಅದೃಷ್ಟ ಸಾಥ್ ಕೊಟ್ಟರೆ ಪಂತ್ ಹಾಗೂ ರಾಯುಡುಗೆ ಈಗಲೂ ವಿಶ್ವಕಪ್‌ಗಾಗಿ ಇಂಗ್ಲೆಂಡ್ ಪ್ರಯಾಣ ಬೆಳೆಸುವ ಅವಕಾಶವಿದೆ.

ಅದು ಹೇಗೆಂದರೆ ಪ್ರಸ್ತುತ ತಂಡದಲ್ಲಿರುವ ಆಟಗಾರರು ಗಾಯಗೊಂಡರೆ ಬದಲಿ ಆಟಗಾರನಾಗಿ ಪಂತ್ ಹಾಗೂ ರಾಯುಡು ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ.

ಈ ಬಗ್ಗೆ ಬಿಸಿಸಿಐ ಸ್ಪಷ್ಟನೆಯನ್ನು ನೀಡಿದ್ದು, ಪಂತ್, ರಾಯುಡು ಜತೆಗೆ ನವದೀಪ್ ಸೈನಿ ಮೀಸಲು ಆಟಗಾರರಾಗಲಿದ್ದಾರೆ ಎಂಬುದನ್ನು ತಿಳಿಸಿದೆ.

ಬಹುನಿರೀಕ್ಷಿತ ವಿಶ್ವಕಪ್‌ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯ ವಹಿಸುತ್ತಿದ್ದು, ಮೇ 30ರಿಂದ ಆರಂಭವಾಗಲಿದೆ. ಅತ್ತ ನೆಟ್ಸ್ ಬೌಲರ್ ರೂಪದಲ್ಲಿ ಖಲೀಲ್ ಅಹ್ಮದ್, ಅವೇಶ್ ಖಾನ್ ಹಾಗೂ ದೀಪಕ್ ಚಹರ್ ಸಹ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌