ಆ್ಯಪ್ನಗರ

ರಿಷಬ್ ಪಂತ್ ಭವಿಷ್ಯದ ಬಗ್ಗೆ ನಿರ್ಣಾಯಕ ಹೇಳಿಕೆ ಕೊಟ್ಟ ಟೀಮ್ ಇಂಡಿಯಾ ಗುರು ರವಿ ಶಾಸ್ತ್ರಿ

ಅತೀವ ಒತ್ತಡದಲ್ಲಿರುವ ಉದಯೋನ್ಮುಖ ರಿಷಬ್ ಪಂತ್ ಬಗ್ಗೆ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ನಿರ್ಣಾಯಕ ಹೇಳಿಕೆಯನ್ನು ನೀಡಿದ್ದಾರೆ. ಅಲ್ಲದೆ ವಿಶ್ವದರ್ಜೆಯ ಪಂತ್‌ಗೆ ಎಲ್ಲ ರೀತಿಯ ಬೆಂಬಲವನ್ನು ನೀಡಲಾಗುತ್ತಿದೆ ಎಂದಿದ್ದಾರೆ.

Vijaya Karnataka Web 26 Sep 2019, 4:14 pm
ಮುಂಬಯಿ: ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಯುವ ಪ್ರತಿಭಾವಂತ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಭವಿಷ್ಯದ ಬಗ್ಗೆ ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ನಿರ್ಣಾಯಕ ಹೇಳಿಕೆಯನ್ನು ನೀಡಿದ್ದಾರೆ.
Vijaya Karnataka Web ravi-shastri-rishabh-pant


ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಮುನ್ನ ಪಂತ್ ಕೆಟ್ಟ ಶಾಟ್ ಆಯ್ಕೆಯನ್ನು ಉಲ್ಲೇಖಿಸುತ್ತಾ ರವಿಶಾಸ್ತ್ರಿ ಪರೋಕ್ಷ ಎಚ್ಚರಿಕೆಯನ್ನು ರವಾನಿಸಿದ್ದರು. ಇದು ಯುವ ವಿಕೆಟ್ ಕೀಪರ್ ಮೇಲೆ ಹೆಚ್ಚಿನ ಒತ್ತಡ ಸೃಷ್ಟಿ ಮಾಡಲು ಕಾರಣವಾಗಿದೆಯೆಂಬ ಆರೋಪ ಕೇಳಿ ಬಂದಿದ್ದವು. ಪ್ರಸ್ತುತ ಹೇಳಿಕೆ ನೀಡಿರುವ ರವಿಶಾಸ್ತ್ರಿ, 21ರ ಹರೆಯದ ರಿಷಬ್ ಪಂತ್ ವಿಶ್ವ ದರ್ಜೆಯ ಬ್ಯಾಟ್ಸ್‌ಮನ್ ಎಂದು ಹಾಡಿ ಹೊಗಳಿದ್ದಾರೆ.

ವೃದ್ಧಿಮಾನ್ ಸಹಾ ಮೊದಲ ಆಯ್ಕೆ; ರಿಷಬ್ ಪಂತ್‌ಗೆ ಟೆಸ್ಟ್ ವಿಕೆಟ್ ಕೀಪರ್ ಸ್ಥಾನವೂ ನಷ್ಟವಾಗಲಿದೆಯೇ?

ಪಂತ್ ವಿಭಿನ್ನ. ವಿಶ್ವ ದರ್ಜೆಯ ಭಯಾನಕ ಮ್ಯಾಚ್ ವಿನ್ನರ್ ಆಟಗಾರ. ಅವರಂತಹ ಆಟಗಾರರು ವಿಶ್ವ ಕ್ರಿಕೆಟ್‌ನಲ್ಲಿ ಅತಿ ವಿರಳ. ನಾವು ಅವರೊಂದಿಗೆ ಅತ್ಯಂತ ತಾಳ್ಮೆಯಿಂದ ಇದ್ದೇವೆ. ಆದರೆ ಎಲ್ಲ ಮಾಧ್ಯಮ ವರದಿಗಳನ್ನು ಬರೆಯುತ್ತಾರೆ. ಆದರೆ ಭಾರತೀಯ ತಂಡದಲ್ಲಿ ಉತ್ತಮ ಕಾಲಾವಕಾಶದಲ್ಲಿದ್ದಾರೆ ಎಂದರು.

ತಜ್ಞರಿಗೆ ಮಾತನಾಡುವುದೇ ಕೆಲಸ. ಆದರೆ ಪಂತ್ ವಿಶೇಷ ಪ್ರತಿಭೆಯಾಗಿದ್ದು, ಈಗಾಗಲೇ ಬೇಕಾದಷ್ಟು ನಿರ್ವಹಣೆಯನ್ನು ನೀಡಿದ್ದಾರೆ. ಅಲ್ಲದೆ ಮತ್ತಷ್ಟು ಉತ್ತಮ ನಿರ್ವಹಣೆ ನೀಡುವ ಇರಾದೆಯಲ್ಲಿದ್ದಾರೆ. ಅವರು ಮತ್ತಷ್ಟು ಪಾಠಗಳನ್ನು ಕಲಿಕೆಯ ಹಂತದಲ್ಲಿದ್ದಾರೆ. ಈ ಟೀಮ್ ಮ್ಯಾನೇಜ್‌ಮೆಂಟ್ ಯುವ ಆಟಗಾರನನ್ನು ಬೆಂಬಲಿಸಲಿದೆ ಎಂದರು.

ಅತೀವ ಒತ್ತಡದಲ್ಲಿರುವ ರಿಷಬ್ ಪಂತ್‌ಗೆ ಅಮೂಲ್ಯ ಟಿಪ್ಸ್ ನೀಡಿದ ವೀರೇಂದ್ರ ಸೆಹ್ವಾಗ್

ಈ ಹಿಂದೆ ಪಂತ್ ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡಬೇಕು ಎಂಬ ಹೇಳಿಕೆ ನೀಡಿದ್ದರು. ಈ ಬಗ್ಗೆ ಕೇಳಿದಾಗ ಟೀಮ್ ಮ್ಯಾನೇಜ್‌ಮೆಂಟ್ ಎಂದು ಹೇಳಬೇಡಿ. ಇದು ನನ್ನ ವೈಯಕ್ತಿಕ ಹೇಳಿಕೆಯಾಗಿದ್ದು, ತಂಡದ ಯಾವನೇ ಆಟಗಾರ ಹಿನ್ನಡೆ ಅನುಭವಿಸಿದರೆ ನೆರವಾಗಬೇಕು ಎಂದರು.

ನಾನೇನು ತಬಲಾ ಬಾರಿಸಲು ಇದ್ದೇನೆಯೇ? ಈ ಹುಡುಗ ವಿಶ್ವ ದರ್ಜೆಯ ಆಟಗಾರನಾಗಿದ್ದು, ಅತ್ಯಂತ ಅಪಾಯಕಾರಿ ಹಾಗೂ ವಿನಾಶಕಾರಿಯಾಗಬಲ್ಲರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರಿಗೆ ಬೇಕಾದ ಎಲ್ಲ ರೀತಿಯ ಬೆಂಬಲವನ್ನು ನೀಡಲಿದ್ದೇವೆ ಎಂದು ಸೇರಿಸಿದರು.

ಈ ಹಿಂದೆ ರವಿಶಾಸ್ತ್ರಿ ಹೇಳಿಕೆ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದರು. ಮಾಜಿ ದಿಗ್ಗಜರಾದ ಸುನಿಲ್ ಗವಾಸ್ಕರ್, ಯುವರಾಜ್ ಸಿಂಗ್, ಗೌತಮ್ ಗಂಭೀರ್ ಸೇರಿದಂತೆ ಅನೇಕ ಪ್ರಮುಖ ಆಟಗಾರರು ಪಂತ್‌ರನ್ನು ಬೆಂಬಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌