ಆ್ಯಪ್ನಗರ

ವಿರಾಟ್‌ ಕೋಹ್ಲಿ ನೆನಪಿಸಿದ ರಿಷಭ್‌ ಪಂತ್

ದಿಲ್ಲಿಯ 19 ವರ್ಷದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ತಂದೆಯನ್ನು ಕಳೆದುಕೊಂಡ ಮೂರೇ ದಿನಗಳ ಅಂತರದಲ್ಲಿ ಮೈದಾನದಲ್ಲಿ ಕಾಣಿಸಿಕೊಂಡು ವೃತ್ತಿಪರತೆ ಮೆರೆದರು.

ಏಜೆನ್ಸೀಸ್ 9 Apr 2017, 6:36 pm
ಬೆಂಗಳೂರು: ದಿಲ್ಲಿಯ 19 ವರ್ಷದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ತಂದೆಯನ್ನು ಕಳೆದುಕೊಂಡ ಮೂರೇ ದಿನಗಳ ಅಂತರದಲ್ಲಿ ಮೈದಾನದಲ್ಲಿ ಕಾಣಿಸಿಕೊಂಡು ವೃತ್ತಿಪರತೆ ಮೆರೆದರು.
Vijaya Karnataka Web rishabh pant wins hearts after courageous knock
ವಿರಾಟ್‌ ಕೋಹ್ಲಿ ನೆನಪಿಸಿದ ರಿಷಭ್‌ ಪಂತ್


ರಿಷಭ್‌ ಅವರ ತಂದೆ ರಾಜೇಂದ್ರ ಪಂತ್‌ ಬುಧವಾರ ಮೃತ ಪಟ್ಟಿದ್ದರು. ಗುರುವಾರ ತಂದೆಯ ಅಂತಿಮ ಸಂಸ್ಕಾರ ನೆರವೇರಿಸಿದ್ದ ರಿಷಭ್‌, ಶುಕ್ರವಾರವೇ ತಂಡ ಸೇರಿಕೊಂಡಿದ್ದರು. ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ತಂದೆಯ ಸಾವಿನ ನೋವಿನ ನಡುವೆಯೂ ಕ್ರಿಕೆಟ್‌ ಮೇಲಿನ ಬದ್ಧತೆಯನ್ನು ಪ್ರದರ್ಶಿಸಿದರು.

2006ರಲ್ಲಿ ಈಗಿನ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಕೂಡ ಇಂತದ್ದೇ ಘಟನೆಗೆ ಸಾಕ್ಷಿಯಾಗಿದ್ದರು. ದಿಲ್ಲಿಯವರೇ ಆದ ವಿರಾಟ್‌, ಕರ್ನಾಟಕ ವಿರುದ್ಧ ದಿಲ್ಲಿಯಲ್ಲಿ ರಣಜಿ ಪಂದ್ಯವಾಡುವ ವೇಳೆ ಅವರ ತಂದೆ ಪ್ರೇಮ್‌ ಕೊಹ್ಲಿ ಅಕಾಲಿಕ ನಿಧನ ಹೊಂದಿದ್ದರು. ಮಧ್ಯರಾತ್ರಿ ತಂದೆಯನ್ನು ಕಳೆದುಕೊಂಡ ಕೊಹ್ಲಿ ಮರು ದಿನ ಬೆಳಗ್ಗೆ ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಮೈದಾನಕ್ಕೆ ಆಗಮಿಸಿ 90 ರನ್‌ ಗಳಿಸುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು. ನಂತರ ಸಂಜೆ ತಂದೆಯ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದ್ದರು.

ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಏಕಾಂಕಿ ಹೋರಾಟ ನೀಡಿದ್ದ ಪಂತ್ ಕೇವಲ 36 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ನಾಲ್ಕು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 57 ರನ್ ಗಳಿಸಿದ್ದರು. ಆದರೂ ತಂಡವನ್ನು ಗೆಲುವಿನ ಗೆರೆ ದಾಟಿಸಲಾಗಿಲಿಲ್ಲ.

ತಾವು ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಗದೊಂದು ಕಡೆಯಿಂದ ಸೂಕ್ತ ಬೆಂಬಲ ದೊರಕದೆ ಹಿನ್ನಡೆ ಅನುಭವಿಸಿದರು. ಆದರೂ ಬೆಂಗಳೂರಿನ ಎಲ್ಲ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಯಶಸ್ವಿಯಾಗಿದ್ದರು.

ಇದೀಗ 19ರ ಹರೆಯದ ಈ ಉತ್ತರಾಖಂಡದ ಆಟಗಾರನ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಎಲ್ಲ ಮೂಲಗಳಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ಭವಿಷ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಸ್ಥಾನವನ್ನು ತುಂಬುವ ಭರವಸೆಯನ್ನು ಮೂಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌