ಆ್ಯಪ್ನಗರ

ರಿಷಬ್ ಪಂತ್ ಸ್ಥಾನಕ್ಕೆ ಮತ್ತಷ್ಟು 3 ವಿಕೆಟ್‌ ಕೀಪರ್‌ಗಳನ್ನು ಹೆಸರಿಸಿದ ಆಯ್ಕೆ ಸಮಿತಿ

ರಿಷಬ್ ಪಂತ್ ಮೇಲಿನ ಕೆಲಸದೊತ್ತಡವನ್ನು ನಿಭಾಯಿಸುವ ನಿಟ್ಟಿನಲ್ಲಿ ಮತ್ತಷ್ಟು ಮೂವರು ಯುವ ವಿಕೆಟ್ ಕೀಪರ್‌ಗಳನ್ನು ಬೆಳೆಸುವ ಯೋಜನೆಯನ್ನು ಟೀಮ್ ಇಂಡಿಯಾ ಆಯ್ಕೆ ಸಮಿತಿಯು ಹೊಂದಿದೆ.

Vijaya Karnataka Web 21 Sep 2019, 1:14 pm
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಉದಯೋನ್ಮುಖ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಸದ್ಯ ಕೆಟ್ಟ ಫಾರ್ಮ್‌ನಿಂದ ಬಳಲುತ್ತಿದ್ದು, ಅತೀವ ಒತ್ತಡದಲ್ಲಿದ್ದಾರೆ. ಈ ನಡುವೆ ಪಂತ್ ಮೇಲಿನ ಕೆಲಸದೊತ್ತಡವನ್ನು ನಿಭಾಯಿಸುವ ನಿಟ್ಟಿನಲ್ಲಿ ಆಯ್ಕೆ ಸಮಿತಿಯು ಮತ್ತಷ್ಟು ಮೂವರು ವಿಕೆಟ್‌ ಕೀಪರ್‌ಗಳನ್ನು ಬೆಳೆಸಲು ಯೋಜನೆ ಇರಿಸಿಕೊಂಡಿದೆ.
Vijaya Karnataka Web rishabh-pant


ಈ ಸಂಬಂಧ ಟೀಮ್ ಇಂಡಿಯಾ ಯೋಜನೆಯನ್ನು ಆಯ್ಕೆ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ವಿವರಿಸಿದ್ದಾರೆ. ನಾನು ಈಗಾಗಲೇ ಸ್ಪಷ್ಟಪಡಿಸಿದ್ದು, ವಿಶ್ವಕಪ್ ಬಳಿಕ ರಿಷಬ್ ಪಂತ್ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದೆ. ಪಂತ್ ಅತೀವ ಪ್ರತಿಭೆಯನ್ನು ಪರಿಗಣಿಸಿ ನಾವು ಮತ್ತಷ್ಟು ತಾಳ್ಮೆಯಿಂದಿರಬೇಕಿದೆ ಎಂದು ವಿವರಿಸಿದರು.

ಏಕದಿನ ಬಳಿಕ ಟಿ20ನಲ್ಲೂ 'ಚೇಸ್ ಮಾಸ್ಟರ್' ಎಂಬುದನ್ನು ಸಾಬೀತು ಮಾಡಿದ ಕಿಂಗ್ ಕೊಹ್ಲಿ

ಈ ನಡುವೆ ಪಂತ್ ಕೆಲಸದೊತ್ತಡವನ್ನು ನಿಭಾಯಿಸಲು ಹೆಚ್ಚುವರಿ ವಿಕೆಟ್ ಕೀಪರ್‌ಗಳತ್ತವೂ ಗಮನ ಹರಿಸಲಾಗುತ್ತಿದೆ ಎಂದಿದ್ದಾರೆ. ರಿಷಬ್ ಪಂತ್ ಮೇಲಿನ ಕೆಲಸದೊತ್ತಡವನ್ನು ಪರಿಶೀಲಿಸುತ್ತಿದ್ದೇವೆ. ಹಾಗಾಗಿ ಎಲ್ಲ ಪ್ರಕಾರದ ಕ್ರಿಕೆಟ್‌ನಲ್ಲೂ ಯುವ ವಿಕೆಟ್ ಕೀಪರ್‌ಗಳತ್ತ ಗಮನ ಹರಿಸಿದ್ದೇವೆ ಎಂದರು.

ದೀರ್ಘ ಕ್ರಿಕೆಟ್‌ನಲ್ಲಿ ಭಾರತ ಎ ಪರ ಕೆಎಸ್ ಭರತ್ ಉತ್ತಮ ನಿರ್ವಹಣೆ ನೀಡುತ್ತಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸಂಜು ಸ್ಯಾಮನ್ಸ್ ಹಾಗೂ ಇಶಾನ್ ಕಿಶನ್ ದೇಶೀಯ ಕ್ರಿಕೆಟ್‌ನಲ್ಲಿ ಪ್ರಭಾವಿ ಎನಿಸಿಕೊಂಡಿದ್ದಾರೆ ಎಂದು ಯುವ ವಿಕೆಟ್ ಕೀಪರ್‌ಗಳನ್ನು ಹೆಸರಿಸಿದರು.

ಅಂಕಿ ಅಂಶಗಳೇ ಸಾರುತ್ತಿದೆ ರಿಷಬ್ ಪಂತ್ ಕೆಟ್ಟ ಫಾರ್ಮ್; ಇನ್ನೆಷ್ಟು ಚಾನ್ಸ್?

ಅದೇ ಹೊತ್ತಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್‌ಗೆ ಪಂತ್ ಮೊದಲ ಆಯ್ಕೆಯಾಗಬೇಕೇ ಬೇಡವೇ ಎಂಬುದನ್ನು ಟೀಮ್ ಮ್ಯಾನೇಜ್‌ಮೆಂಟ್‌ಗೆ ಬಿಟ್ಟ ವಿಚಾರ ಎಂಬುದನ್ನು ಪ್ರಸಾದ್ ಸ್ಪಷ್ಟಪಡಿಸಿದರು. ತಾಂತ್ರಿಕವಾಗಿ ಪಂತ್‌ಗಿಂತಲೂ ಹೆಚ್ಚು ಪ್ರಭಾವಿ ಎನಿಸಿಕೊಂಡಿರುವ ವೃದ್ಧಿಮಾನ್ ಸಹಾ ಪುನರಾಗಮನದೊಂದಿಗೆ ಟೆಸ್ಟ್‌ನಲ್ಲೂ ಪಂತ್ ಸ್ಥಾನಕ್ಕೆ ಕುತ್ತು ಬರುವ ಸಂಭವವಿದೆ.

ಏಕದಿನ ವಿಶ್ವಕಪ್ ಬಳಿಕ ಮಹೇಂದ್ರ ಸಿಂಗ್ ಧೋನಿ ವಿರಾಮವನ್ನು ತೆಗೆದುಕೊಂಡಿದ್ದಾರೆ. ಆದರೆ ನಿರೀಕ್ಷಿತ ಮಟ್ಟದ ಪ್ರದರ್ಶನವನ್ನು ನೀಡುವಲ್ಲಿ ರಿಷಬ್ ಪಂತ್ ಯಶಸ್ವಿಯಾಗಲಿಲ್ಲ. ಇದು ಯುವ ಆಟಗಾರನ ಮೇಲೆ ಹೆಚ್ಚಿನ ಒತ್ತಡ ಬೀರುವಲ್ಲಿ ಕಾರಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌