ದಿನೇಶ್ ಸಿಕ್ಸರ್ ಹೊಡೆದಾಗ ರೋಹಿತ್ ಶರ್ಮಾ ಎಲ್ಲಿದ್ದರು?
ಕೊಲಂಬೋದ ಆರ್.ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ನಿದಹಾಸ್ ಟ್ರೋಪಿಯ ಅಂತಿಮ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರ ಅಂತಿಮ ಸಿಕ್ಸರ್ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ತಂಡದ ನಾಯಕ ರೋಹಿತ್ ಶರ್ಮಾ ಮಾತ್ರಾ ಈ ಹೊಡೆತವನ್ನು ನೋಡೇ ಇಲ್ಲವಂತೆ!
TNN 19 Mar 2018, 4:15 pm
ಹೊಸದಿಲ್ಲಿ: ಕೊಲಂಬೋದ ಆರ್.ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ನಿದಹಾಸ್ ಟ್ರೋಪಿಯ ಅಂತಿಮ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರ ಅಂತಿಮ ಸಿಕ್ಸರ್ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ತಂಡದ ನಾಯಕ ರೋಹಿತ್ ಶರ್ಮಾ ಮಾತ್ರಾ ಈ ಹೊಡೆತವನ್ನು ನೋಡೇ ಇಲ್ಲವಂತೆ!
ಹೌದು! ಭಾನುವಾರ ನಡದ ನಿದಾಹಾಸ್ ಟ್ರೋಫಿಯ ಅಂತಿಮ ಓವರ್ಗಳಲ್ಲಿ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಮೋಡಿ ಪಂದ್ಯದ ಗತಿಯನ್ನೇ ಬದಲಿಸಿಬಿಟ್ಟಿತ್ತು. ಸೌಮ್ಯಾ ಸರ್ಕಾರ್ನ ಕೊನೆಯ ಓವರ್ಗೆ ವಿಜಯ್ ಶಂಕರ್ ವಿಕೆಟ್ ಒಪ್ಪಿಸಿದಾಗ ಭಾರತಕ್ಕೆ 5ರನ್ಗಳ ಅವಶ್ಯಕತೆಯಿತ್ತು. ಈ ಹೊತ್ತಿಗೆ ದಿನೇಶ್ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿ ಟೀಂ ಇಂಡಿಯಾ ಗೆಲುವಿಗೆ ಕಾರಣವಾದರು. ಆದರೆ ಪಂದ್ಯ ಟೈ ಆಗಬಹುದು ಎಂಬ ಆಲೋಚನೆಯಿಂದಿದ್ದ ರೋಹಿತ್ ಡ್ರೆಸ್ಸಿಂಗ್ ರೂಂ ಸೇರಿಕೊಂಡಿದ್ದರು.
ಈ ವಿಚಾರವನ್ನು ಸ್ವತಃ ರೋಹಿತ್ ಮಾಧ್ಯಮದವರೊಂದಿಗೆ ಹೇಳಿಕೊಂಡಿದ್ದು ದಿನೇಶ್ ಕಾರ್ತಿಕ್ರ ಕೊನೆ ಹೊಡೆತವನ್ನು ನೋಡದ ಅನೇಕ ಕ್ರಿಕೆಟ್ ಅಭಿಮಾನಿಗಳು ಬೇಸರ ಪಟ್ಟಿದ್ದಾರೆ. ಇವರಲ್ಲಿ ನಾನು ಒಬ್ಬ, ಏಕೆಂದರೆ ಪಂದ್ಯ ಟೈ ಆಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ನಾನು ಪಂದ್ಯ ಟೈ ಆದಲ್ಲಿ ಸೂಪರ್ ಓವರ್ ಆಡಬೇಕಾಗುತ್ತದೆ ಎಂದುಕೊಂಡು ಪ್ಯಾಡ್ ಕಟ್ಟಲು ಡ್ರೆಸ್ಸಿಂಗ್ ರೂಮಿಗೆ ಹೋಗಿದ್ದೆ ಎಂದು ಹೇಳಿದ್ದಾರೆ.
ಪಂದ್ಯದ ಅಂತಿಮ ಕ್ಷಣಕ್ಕೆ ಹೋಲಿಸಿದರೆ ಕೊನೆ ಚೆಂಡಿಗೆ 5 ರನ್ ಗಳಿಸೋದು ಸವಾಲಿನ ಕೆಲಸವಾಗಿತ್ತು. ಹೀಗಾಗಿ ಪ್ಯಾಡ್ಕಟ್ಟಲು ಡ್ರೆಸ್ಸಿಂಗ್ ರೂಂಗೆ ತೆರಳಿದ್ದ ನನಗೆ ದಿನೇಶ್ ಕಾರ್ತಿಕ್ನ ಕೊನೆ ಹೊಡೆತ ಮಿಸ್ ಆಯ್ತು ಎಂದು ಹೇಳಿದ್ದಾರೆ.
ಇದೇ ವೇಳೆ ದಿನೇಶ್ ಬ್ಯಾಟಿಂಗ್ ಶಕ್ತಿಯನ್ನು ಹೊಗಳಿರುವ ರೋಹಿತ್, ಮುಂಬಯಿ ಇಂಡಿಯನ್ಸ್ನಂತಹ ತಂಡಗಳಲ್ಲಿ ಬ್ಯಾಟಿಂಗ್ ನಡೆಸಿರುವ ದಿನೇಶ್ ಕುರಿತು ನನಗೆ ಚೆನ್ನಾಗಿಯೇ ಅರಿವಿದೆ. ತೀವ್ರ ಪೈಪೋಟಿ ಸಂದರ್ಭದಲ್ಲೂ ಬ್ಯಾಟಿಂಗ್ ಮಾಡುವ ಅವರ ಸಾಮರ್ಥ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ರೋಹಿತ್ ಹೇಳಿದ್ದಾರೆ.
ಹೌದು! ಭಾನುವಾರ ನಡದ ನಿದಾಹಾಸ್ ಟ್ರೋಫಿಯ ಅಂತಿಮ ಓವರ್ಗಳಲ್ಲಿ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಮೋಡಿ ಪಂದ್ಯದ ಗತಿಯನ್ನೇ ಬದಲಿಸಿಬಿಟ್ಟಿತ್ತು. ಸೌಮ್ಯಾ ಸರ್ಕಾರ್ನ ಕೊನೆಯ ಓವರ್ಗೆ ವಿಜಯ್ ಶಂಕರ್ ವಿಕೆಟ್ ಒಪ್ಪಿಸಿದಾಗ ಭಾರತಕ್ಕೆ 5ರನ್ಗಳ ಅವಶ್ಯಕತೆಯಿತ್ತು. ಈ ಹೊತ್ತಿಗೆ ದಿನೇಶ್ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿ ಟೀಂ ಇಂಡಿಯಾ ಗೆಲುವಿಗೆ ಕಾರಣವಾದರು. ಆದರೆ ಪಂದ್ಯ ಟೈ ಆಗಬಹುದು ಎಂಬ ಆಲೋಚನೆಯಿಂದಿದ್ದ ರೋಹಿತ್ ಡ್ರೆಸ್ಸಿಂಗ್ ರೂಂ ಸೇರಿಕೊಂಡಿದ್ದರು.
ಈ ವಿಚಾರವನ್ನು ಸ್ವತಃ ರೋಹಿತ್ ಮಾಧ್ಯಮದವರೊಂದಿಗೆ ಹೇಳಿಕೊಂಡಿದ್ದು ದಿನೇಶ್ ಕಾರ್ತಿಕ್ರ ಕೊನೆ ಹೊಡೆತವನ್ನು ನೋಡದ ಅನೇಕ ಕ್ರಿಕೆಟ್ ಅಭಿಮಾನಿಗಳು ಬೇಸರ ಪಟ್ಟಿದ್ದಾರೆ. ಇವರಲ್ಲಿ ನಾನು ಒಬ್ಬ, ಏಕೆಂದರೆ ಪಂದ್ಯ ಟೈ ಆಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ನಾನು ಪಂದ್ಯ ಟೈ ಆದಲ್ಲಿ ಸೂಪರ್ ಓವರ್ ಆಡಬೇಕಾಗುತ್ತದೆ ಎಂದುಕೊಂಡು ಪ್ಯಾಡ್ ಕಟ್ಟಲು ಡ್ರೆಸ್ಸಿಂಗ್ ರೂಮಿಗೆ ಹೋಗಿದ್ದೆ ಎಂದು ಹೇಳಿದ್ದಾರೆ.
ಪಂದ್ಯದ ಅಂತಿಮ ಕ್ಷಣಕ್ಕೆ ಹೋಲಿಸಿದರೆ ಕೊನೆ ಚೆಂಡಿಗೆ 5 ರನ್ ಗಳಿಸೋದು ಸವಾಲಿನ ಕೆಲಸವಾಗಿತ್ತು. ಹೀಗಾಗಿ ಪ್ಯಾಡ್ಕಟ್ಟಲು ಡ್ರೆಸ್ಸಿಂಗ್ ರೂಂಗೆ ತೆರಳಿದ್ದ ನನಗೆ ದಿನೇಶ್ ಕಾರ್ತಿಕ್ನ ಕೊನೆ ಹೊಡೆತ ಮಿಸ್ ಆಯ್ತು ಎಂದು ಹೇಳಿದ್ದಾರೆ.
ಇದೇ ವೇಳೆ ದಿನೇಶ್ ಬ್ಯಾಟಿಂಗ್ ಶಕ್ತಿಯನ್ನು ಹೊಗಳಿರುವ ರೋಹಿತ್, ಮುಂಬಯಿ ಇಂಡಿಯನ್ಸ್ನಂತಹ ತಂಡಗಳಲ್ಲಿ ಬ್ಯಾಟಿಂಗ್ ನಡೆಸಿರುವ ದಿನೇಶ್ ಕುರಿತು ನನಗೆ ಚೆನ್ನಾಗಿಯೇ ಅರಿವಿದೆ. ತೀವ್ರ ಪೈಪೋಟಿ ಸಂದರ್ಭದಲ್ಲೂ ಬ್ಯಾಟಿಂಗ್ ಮಾಡುವ ಅವರ ಸಾಮರ್ಥ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ರೋಹಿತ್ ಹೇಳಿದ್ದಾರೆ.