ಅಪ್ರತಿಮ ಗುರು ಅಚ್ರೇಕರ್ಗೆ ಕ್ರಿಕೆಟ್ ಲೋಕದ ನಮನ
ದೇಶ ಕಂಡ ಅಪ್ರತಿಮ ಕ್ರಿಕೆಟ್ ಕೋಚ್ ರಮಾಕಾಂತ್ ಅಚ್ರೇಕರ್ ನಿಧನಕ್ಕೆ ಸಂತಾಪವನ್ನು ಸೂಚಿಸಿ ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಭಾವನಾತ್ಮಕ ಸಂದೇಶವನ್ನು ಹಂಚಿಕೊಳ್ಳುವ ಮೂಲಕ ನಮನವನ್ನು ಸಲ್ಲಿಸಿದ್ದಾರೆ.
Vijaya Karnataka Web 3 Jan 2019, 6:11 am
ಹೈಲೈಟ್ಸ್:
ಸಚಿನ್ ಬಾಲ್ಯದ ಕೋಚ್ ಅಚ್ರೇಕರ್ ನಿಧನ.
ಅಪ್ರತಿಮ ಕೋಚ್ಗೆ ಕ್ರಿಕೆಟ್ ಲೋಕದಿಂದ ಗೌರವ.
ಸಚಿನ್ ಯಶಸ್ಸಿನಲ್ಲಿ ಅಚ್ರೇಕರ್ ಪಾತ್ರ ಮಹತ್ವದ್ದು.
ಹೈಲೈಟ್ಸ್ ಮಾತ್ರವೇ ಓದಲು ಆ್ಯಪ್ ಡೌನ್ಲೋಡ್ ಮಾಡಿಅಪ್ರತಿಮ ಕೋಚ್ಗೆ ಕ್ರಿಕೆಟ್ ಲೋಕದಿಂದ ಗೌರವ.
ಸಚಿನ್ ಯಶಸ್ಸಿನಲ್ಲಿ ಅಚ್ರೇಕರ್ ಪಾತ್ರ ಮಹತ್ವದ್ದು.
ಸಿಡ್ನಿ: ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ದೇವರು ಎಂದು ಕೊಂಡಾಡುತ್ತಾರೆ. ಆದರೆ ಗುರು ಆದವರು ಶಿಷ್ಯನ ಪ್ರತಿಭೆಯನ್ನು ಅರಿತು ಶ್ರೇಷ್ಠ ಪ್ರದರ್ಶನವನ್ನು ಹೊರತರುವಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತಾರೆ. ಅಂತದ್ದರಲ್ಲಿ ದೇಶ ಕಂಡ ಅಪ್ರತಿಮ ಕ್ರಿಕೆಟ್ ಗುರು ರಮಾಕಾಂತ್ ಅಚ್ರೇಕರ್ (87) ಒಬ್ಬರು. ಭಾರತಕ್ಕೆ ಸಚಿನ್ ಸೇರಿದಂತೆ ಅನೇಕ ಖ್ಯಾತ ಕ್ರಿಕೆಟಿಗರನ್ನು ನೀಡುವಲ್ಲಿ ಅಚ್ರೇಕರ್ ಮಹತ್ವದ ಪಾತ್ರ ವಹಿಸಿದ್ದಾರೆ.
ಅಚ್ರೇಕರ್ ಗರಡಿಯಲ್ಲಿ ಪಳಗಿದವರ ಪಟ್ಟಿಯಲ್ಲಿ ವಿನೋದ್ ಕಾಂಬ್ಳಿ, ಪ್ರವೀಣ್ ಆಮ್ರೆ, ಅಜಿತ್ ಅಗರ್ಕರ್, ರಮೇಶ್ ಪೊವಾರ್ ಹೀಗೆ ಅನೇಕ ಆಟಗಾರರು ಸೇರಿದ್ದಾರೆ.
ಇದೀಗ ಮುಂಬಯಿಯಲ್ಲಿ ಮಂಗಳವಾರ ರಾತ್ರಿ ಕೊನೆಯುಸಿರೆಳೆದಿರುವ ಅಚ್ರೇಕರ್ಗೆ ಇಡೀ ಕ್ರಿಕೆಟ್ ಲೋಕವೇ ಭಾವನಾತ್ಮಕ ಸಂದೇಶವನ್ನು ಹಂಚಿಕೊಳ್ಳುವ ಮೂಲಕ ನಮನವನ್ನು ಸಲ್ಲಿಸಿದೆ.
''ಅಚ್ರೇಕರ್ ಅವರ ಉಪಸ್ಥಿತಿಯಲ್ಲಿ ಸ್ವರ್ಗದಲ್ಲೂ ಕ್ರಿಕೆಟ್ ರಂಗೇರಲಿದೆ. ಬಹುತೇಕ ಕ್ರಿಕೆಟಿಗರಂತೆ ಆಟದ ಎ.ಬಿ.ಸಿ.ಡಿಯನ್ನು ಅಚ್ರೇಕರ್ ಸರ್ ಬಳಿ ಕಲಿತೆ. ನನ್ನ ಜೀವನದಲ್ಲಿ ಅವರ ಕೊಡುಗೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ'' ಎಂದು ಸಚಿನ್ ತೆಂಡೂಲ್ಕರ್ ಅಗಲಿದ ಗುರುವಿಗೆ ಭಾವನಾತ್ಮಕ ವಿದಾಯ ಹೇಳಿದ್ದಾರೆ.
ಅತ್ತ ವಿನೋದ್ ಕಾಂಬ್ಳಿ ಸಹ ತಮಗೆ ಕ್ರಿಕೆಟ್ ಕೆರಿಯರ್ ರೂಪಿಸಿಕೊಟ್ಟ ಗುರು ಅಚ್ರೇಕರ್ ಅವರನ್ನು ಸ್ಮರಿಸಿದ್ದಾರೆ. ಈ ಸಂಬಂಧ ಕ್ರಿಕೆಟ್ ಬಾಲಪಾಠಗಳನ್ನು ಹೇಳಿಕೊಡುತ್ತಿರುವ ಅಚ್ರೇಕರ್ ಚಿತ್ರವನ್ನು ಹಂಚಿದ್ದಾರೆ.
ಅತ್ತ ಟೀಮ್ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸುವ ಮೂಲಕ ಅಚ್ರೇಕರ್ ಅವರಿಗೆ ಗೌರವ ಸೂಚಿಸಿದ್ದಾರೆ.
ಅಚ್ರೇಕರ್ ಗರಡಿಯಲ್ಲಿ ಪಳಗಿದವರ ಪಟ್ಟಿಯಲ್ಲಿ ವಿನೋದ್ ಕಾಂಬ್ಳಿ, ಪ್ರವೀಣ್ ಆಮ್ರೆ, ಅಜಿತ್ ಅಗರ್ಕರ್, ರಮೇಶ್ ಪೊವಾರ್ ಹೀಗೆ ಅನೇಕ ಆಟಗಾರರು ಸೇರಿದ್ದಾರೆ.
ಇದೀಗ ಮುಂಬಯಿಯಲ್ಲಿ ಮಂಗಳವಾರ ರಾತ್ರಿ ಕೊನೆಯುಸಿರೆಳೆದಿರುವ ಅಚ್ರೇಕರ್ಗೆ ಇಡೀ ಕ್ರಿಕೆಟ್ ಲೋಕವೇ ಭಾವನಾತ್ಮಕ ಸಂದೇಶವನ್ನು ಹಂಚಿಕೊಳ್ಳುವ ಮೂಲಕ ನಮನವನ್ನು ಸಲ್ಲಿಸಿದೆ.
''ಅಚ್ರೇಕರ್ ಅವರ ಉಪಸ್ಥಿತಿಯಲ್ಲಿ ಸ್ವರ್ಗದಲ್ಲೂ ಕ್ರಿಕೆಟ್ ರಂಗೇರಲಿದೆ. ಬಹುತೇಕ ಕ್ರಿಕೆಟಿಗರಂತೆ ಆಟದ ಎ.ಬಿ.ಸಿ.ಡಿಯನ್ನು ಅಚ್ರೇಕರ್ ಸರ್ ಬಳಿ ಕಲಿತೆ. ನನ್ನ ಜೀವನದಲ್ಲಿ ಅವರ ಕೊಡುಗೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ'' ಎಂದು ಸಚಿನ್ ತೆಂಡೂಲ್ಕರ್ ಅಗಲಿದ ಗುರುವಿಗೆ ಭಾವನಾತ್ಮಕ ವಿದಾಯ ಹೇಳಿದ್ದಾರೆ.
ಅತ್ತ ವಿನೋದ್ ಕಾಂಬ್ಳಿ ಸಹ ತಮಗೆ ಕ್ರಿಕೆಟ್ ಕೆರಿಯರ್ ರೂಪಿಸಿಕೊಟ್ಟ ಗುರು ಅಚ್ರೇಕರ್ ಅವರನ್ನು ಸ್ಮರಿಸಿದ್ದಾರೆ. ಈ ಸಂಬಂಧ ಕ್ರಿಕೆಟ್ ಬಾಲಪಾಠಗಳನ್ನು ಹೇಳಿಕೊಡುತ್ತಿರುವ ಅಚ್ರೇಕರ್ ಚಿತ್ರವನ್ನು ಹಂಚಿದ್ದಾರೆ.
ಅತ್ತ ಟೀಮ್ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸುವ ಮೂಲಕ ಅಚ್ರೇಕರ್ ಅವರಿಗೆ ಗೌರವ ಸೂಚಿಸಿದ್ದಾರೆ.