ಆ್ಯಪ್ನಗರ

ಕಟ್ಟಾಭಿಮಾನಿಗೆ ಸಚಿನ್ ಮಾಡಿದ ಸಹಾಯವೇನು?

ಸುಧೀರ್ ಕುಮಾರ್ ಎಂದಾಕ್ಷಣ 'ಸಚಿನ್ ಫ್ಯಾನ್' ಎಂದು ಕ್ರಿಕೆಟ್ ಜಗತ್ತು ಉತ್ತರ ನೀಡುತ್ತದೆ. ಈ ಕಟ್ಟಾಭಿಮಾನಿಗೆ ಸಚಿನ್ ಮಾಡುತ್ತಿರುವ ಸಹಾಯವೇನು ಗೊತ್ತೆ?

ಏಜೆನ್ಸೀಸ್ 27 May 2017, 2:34 pm
ಹೊಸದಿಲ್ಲಿ: ಸುಧೀರ್ ಕುಮಾರ್ ಎಂದಾಕ್ಷಣ 'ಸಚಿನ್ ಫ್ಯಾನ್' ಎಂದು ಕ್ರಿಕೆಟ್ ಜಗತ್ತು ಉತ್ತರ ನೀಡುತ್ತದೆ. ಟೀಮ್ ಇಂಡಿಯಾ ಮತ್ತು 'ಕ್ರಿಕೆಟ್ ದೇವರು' ಸಚಿನ್ ಮೇಲೆ ಹೊಂದಿರುವ ಅಪಾರ ಅಭಿಮಾನದಿಂದಲೇ ಪ್ರಸಿದ್ಧರಾಗಿರಾಗಿದ್ದಾರೆ. ಈ ಕಟ್ಟಾಭಿಮಾನಿಗೆ ಸಚಿನ್ ಮಾಡುತ್ತಿರುವ ಸಹಾಯವೇನು ಗೊತ್ತೆ?
Vijaya Karnataka Web sachin tendulkar helped his ardent fan
ಕಟ್ಟಾಭಿಮಾನಿಗೆ ಸಚಿನ್ ಮಾಡಿದ ಸಹಾಯವೇನು?


ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕಾಗಿ ಇಂಗ್ಲೆಂಡ್‌‌ಗೆ ಪ್ರಯಾಣಿಸುತ್ತಿರುವ ಟೀಮ್ ಇಂಡಿಯಾ ಜತೆಗೆ ಪ್ರಯಾಣಿಸಲು ವೀಆಸಾ ದೊರಕಿಸಿಕೊಡಲು ಸ್ವತಃ ಸಚಿನ್ ಸಹಾಯ ಮಾಡಿದ್ದಾರೆ.

ಸುಧೀರ್ ಕುಮಾರ್ ಚೌದರಿ ಎಂಬ ಈ ಕಟ್ಟಾ ಕ್ರಿಕೆಟ್ ಅಭಿಮಾನಿ ವಿಶ್ವದ ಯಾವ ಭಾಗದಲ್ಲೇ ಟೀಮ್ ಇಂಡಿಯಾ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿ, ಅಲ್ಲೆಲ್ಲ ಉಪಸ್ಥಿತರಿದ್ದು, ತಂಡವನ್ನು ಉತ್ತೇಜಿಸುತ್ತಾರೆ. ಸ್ವಂತ ಹಣದಿಂದಲೇ ಟೀಮ್ ಇಂಡಿಯಾ ಜತೆ ಸುತ್ತಾಡುವುದು ಸುಧೀರ್ ಹೆಚ್ಚುಗಾರಿಕೆ.

ಕಳೆದ ತಿಂಗಳು 26,000 ರೂ. ಪಾವತಿಸಿ ಯುಕೆ ವಿಸಾ ಪಡೆದಿರುವ ಸುಧೀರ್ ಜತೆಗೆ ಸಚಿನ್ ಬರೆದ ಪತ್ರವನ್ನು ವೀಸಾ ಕಚೇರಿಗೆ ನೀಡಿದ್ದರು.

ಸುಧೀರ್ ಕುಮಾರ್ ಚೌದರಿ ಭಾರತ ಕ್ರಿಕೆಟ್ ತಂಡದ ಕಟ್ಟಾ ಅಭಿಮಾನಿ. ಟೀಂ ಇಂಡಿಯಾ ಗೆಲುವಲ್ಲಿ ಸುಧೀರ್‌ ಬೆಂಬಲಕ್ಕೂ ಪಾಲಿದೆ. ಅಪಾರ ಅಭಿಮಾನ ಖುಷಿ ನೀಡುತ್ತದೆ. ಆತನಿಗೆ ವೀಸಾ ನೀಡುವಂತೆ ಬಹಳ ಖುಷಿಯಿಂದ ಪತ್ರ ಬರೆಯುತ್ತೇನೆ. ಪ್ರಯಾಣಕ್ಕಾಗಲಿ, ಇತರೆ ಯಾವುದೇ ಖರ್ಚಿಗಾಗಲಿ ಟೀಮ್ ಇಂಡಿಯಾದ ಯಾವ ಸದಸ್ಯರ ಸಹಾಯವನ್ನು ಪಡೆಯದೆ, ಸ್ವತಃ ಖರ್ಚಿನಲ್ಲಿ ತಂಡವನ್ನು ಸದಾ ಬೆಂಬಲಿಸುತ್ತಿರುವುದು ಸುಧೀರ್ ಹೆಚ್ಚುಗಾರಿಕೆ ಎಂದು ಸಚಿನ್ ತಿಳಿಸಿದ್ದಾರೆ.

ಸದ್ಯ ಇಂಗ್ಲೆಂಡ್‌ನಲ್ಲಿ ಸುಧೀರ್‌ ವೆಚ್ಚಗಳನ್ನು ಫಿವರ್ 104 ಎಫ್ಎಂ ರೆಡಿಯೋ ಭರಿಸುತ್ತಿದೆ.

ಸಚಿನ್ ತೆಂಡೂಲ್ಕರ್ ಅವರ ಜೀವನಾಧಾರಿತ ಚಿತ್ರದ ಪ್ರೀಮಿಯರ್‌ ಶೋನಲ್ಲಿ ಭಾಗವಹಿಸಿದ್ದ ಸುಧೀರ್, ಇದೊಂದು ಅದ್ಭುತ ಚಿತ್ರ ಎಂದಿದ್ದಾರೆ. ಶುಕ್ರವಾರ ಸಚಿನ್ ಚಿತ್ರ ಬಿಡುಗಡೆಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌