ಆ್ಯಪ್ನಗರ

ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿಗೆ ಟೀಮ್‌ ಇಂಡಿಯಾ ಪ್ರಕಟ, ಟಿ20 ತಂಡದಲ್ಲೂ ಬದಲಾವಣೆ!

ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನಲ್ಲಿ ನಡೆದ 3ನೇ ಏಕದಿನ ಪಂದ್ಯದ ವೇಳೆ ಭುಜದ ಗಾಯದ ಸಮಸ್ಯೆಗೆ ತುತ್ತಾದ ಭಾರತ ತಂಡದ ಸ್ಟಾರ್‌ ಓಪನರ್‌, ನ್ಯೂಜಿಲೆಂಡ್‌ ಪ್ರವಾಸದಲ್ಲಿನ ಟಿ20 ಮತ್ತು ಏಕದಿನ ಸರಣಿಗಳಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನದಲ್ಲಿ ಭಾರತ ಟಿ20 ತಂಡಕ್ಕೆ ಸಂಜು ಸ್ಯಾಮ್ಸನ್‌ ಮತ್ತು ಏಕದಿನ ತಂಡಕ್ಕೆ ಪೃಥ್ವಿ ಶಾ ಅವರನ್ನು ಬಿಸಿಸಿಐ ಮಂಗಳವಾರ ಆಯ್ಕೆ ಮಾಡಿದೆ.

ಧವನ್‌ ಗಾಯದ ಸಮಸ್ಯೆ ಗಂಭೀರವಾಗಿರುವ ಕಾರಣ ಕಿವೀಸ್‌ ವಿರುದ್ಧ ಜ.24ರಂದು ಶುರುವಾಗಲಿರುವ 5 ಪಂದ್ಯಗಳ ಟಿ20-ಐ ಮತ್ತು 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯಿಂದ ಹೊರಗುಳಿಯುವಂತಾಗಿದೆ. ಟಿ20 ತಂಡದಲ್ಲಿ ಧವನ್‌ ಬದಲಿಗೆ ಸಹಜವಾಗಿಯೇ ಸಂಜು ಸ್ಯಾಮ್ಸನ್‌ ಅವಕಾಶ ಪಡೆದಿದ್ದು, ಇತ್ತೀಚೆಗಷ್ಟೇ ಕಿವೀಸ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 100 ಎಸೆತಗಳಲ್ಲಿ 150 ರನ್‌ ಚಚ್ಚಿದ ಪೃಥ್ವಿ ಶಾ ಮೊತ್ತ ಮೊದಲ ಬಾರಿ ಏಕದಿನ ಕ್ರಿಕೆಟ್‌ ತಂಡಕ್ಕೆ ಬುಲಾವ್‌ ಪಡೆದಿದ್ದಾರೆ.

"ಶಿಖರ್‌ ಧವನ್‌ ಅವರ ಭುಜದ ಎಮ್‌ಆರ್‌ಐ ಸ್ಕ್ಯಾನ್‌ ವರದಿ ಬಂದಿದ್ದು, ಗಾಯದ ಸಮಸ್ಯೆ ಕೊಂಚ ಗಂಭೀರವಾಗಿರುವ ಕಾರಣ ಕೆಲ ಕಾಲ ವಿಶ್ರಾಂತಿಗೆ ಸೂಚಿಸಲಾಗಿದೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಯಲ್ಲಿ ಫೆಬ್ರವರಿಯ ಮೊದಲ ವಾರದಲ್ಲಿ ಶಿಖರ್‌ ಪುನರ್‌ ವಸತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ," ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಟಿ20 ಸರಣಿ ಜ.24ರಂದು ಆಕ್ಲೆಂಡ್‌ನಲ್ಲಿ ಶುರುವಾಗಲಿದೆ.

Vijaya Karnataka Web 21 Jan 2020, 10:07 pm
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನಲ್ಲಿ ನಡೆದ 3ನೇ ಏಕದಿನ ಪಂದ್ಯದ ವೇಳೆ ಭುಜದ ಗಾಯದ ಸಮಸ್ಯೆಗೆ ತುತ್ತಾದ ಭಾರತ ತಂಡದ ಸ್ಟಾರ್‌ ಓಪನರ್‌, ನ್ಯೂಜಿಲೆಂಡ್‌ ಪ್ರವಾಸದಲ್ಲಿನ ಟಿ20 ಮತ್ತು ಏಕದಿನ ಸರಣಿಗಳಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನದಲ್ಲಿ ಭಾರತ ಟಿ20 ತಂಡಕ್ಕೆ ಸಂಜು ಸ್ಯಾಮ್ಸನ್‌ ಮತ್ತು ಏಕದಿನ ತಂಡಕ್ಕೆ ಪೃಥ್ವಿ ಶಾ ಅವರನ್ನು ಬಿಸಿಸಿಐ ಮಂಗಳವಾರ ಆಯ್ಕೆ ಮಾಡಿದೆ.
Vijaya Karnataka Web sanju samson and prithvi replaces injured shikhar dhawan in upcoming t20i and odi series vs new zealand
ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿಗೆ ಟೀಮ್‌ ಇಂಡಿಯಾ ಪ್ರಕಟ, ಟಿ20 ತಂಡದಲ್ಲೂ ಬದಲಾವಣೆ!


ಧವನ್‌ ಗಾಯದ ಸಮಸ್ಯೆ ಗಂಭೀರವಾಗಿರುವ ಕಾರಣ ಕಿವೀಸ್‌ ವಿರುದ್ಧ ಜ.24ರಂದು ಶುರುವಾಗಲಿರುವ 5 ಪಂದ್ಯಗಳ ಟಿ20-ಐ ಮತ್ತು 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯಿಂದ ಹೊರಗುಳಿಯುವಂತಾಗಿದೆ. ಟಿ20 ತಂಡದಲ್ಲಿ ಧವನ್‌ ಬದಲಿಗೆ ಸಹಜವಾಗಿಯೇ ಸಂಜು ಸ್ಯಾಮ್ಸನ್‌ ಅವಕಾಶ ಪಡೆದಿದ್ದು, ಇತ್ತೀಚೆಗಷ್ಟೇ ಕಿವೀಸ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ 100 ಎಸೆತಗಳಲ್ಲಿ 150 ರನ್‌ ಚಚ್ಚಿದ ಪೃಥ್ವಿ ಶಾ ಮೊತ್ತ ಮೊದಲ ಬಾರಿ ಏಕದಿನ ಕ್ರಿಕೆಟ್‌ ತಂಡಕ್ಕೆ ಬುಲಾವ್‌ ಪಡೆದಿದ್ದಾರೆ.

"ಶಿಖರ್‌ ಧವನ್‌ ಅವರ ಭುಜದ ಎಮ್‌ಆರ್‌ಐ ಸ್ಕ್ಯಾನ್‌ ವರದಿ ಬಂದಿದ್ದು, ಗಾಯದ ಸಮಸ್ಯೆ ಕೊಂಚ ಗಂಭೀರವಾಗಿರುವ ಕಾರಣ ಕೆಲ ಕಾಲ ವಿಶ್ರಾಂತಿಗೆ ಸೂಚಿಸಲಾಗಿದೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಯಲ್ಲಿ ಫೆಬ್ರವರಿಯ ಮೊದಲ ವಾರದಲ್ಲಿ ಶಿಖರ್‌ ಪುನರ್‌ ವಸತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ," ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಟಿ20 ಸರಣಿ ಜ.24ರಂದು ಆಕ್ಲೆಂಡ್‌ನಲ್ಲಿ ಶುರುವಾಗಲಿದೆ.

ಟಿ20 ಸರಣಿಗೆ ಭಾರತ ತಂಡ, ಸ್ಯಾಮ್ಸನ್‌ ಇನ್‌

ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪನಾಯಕ), ಸಂಜು ಸ್ಯಾಮ್ಸನ್‌ (ಹೊಸ ಸೇರ್ಪಡೆ), ಕೆಎಲ್‌ ರಾಹುಲ್‌, ಶ್ರೇಯಸ್‌ ಅಯ್ಯರ್‌, ಮನೀಶ್‌ ಪಾಂಡೆ, ರಿಷಭ್‌ ಪಂತ್‌ (ವಿಕೆಟ್‌ಕೀಪರ್‌), ಶಿವಂ ದುಬೇ, ಕುಲ್ದೀಪ್‌ ಯಾದವ್‌, ಯುಜ್ವೇಂದ್ರ ಚಹಲ್‌, ವಾಷಿಂಗ್ಟನ್‌ ಸುಂದರ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ, ನವದೀಪ್‌ ಸೈನಿ, ರವೀಂದ್ರ ಜಡೇಜಾ ಮತ್ತು ಶಾರ್ದೂಲ್‌ ಠಾಕೂರ್‌.

ಒಡಿಐ ಸರಣಿಗೆ ಭಾರತ ತಂಡ ಹೀಗಿದೆ, ಪೃಥ್ವಿಗೆ ಬುಲಾವ್‌

ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪನಾಯಕ), ಪೃಥ್ವಿ ಶಾ (ಹೊಸ ಸೇರ್ಪಡೆ), ಕೆಎಲ್‌ ರಾಹುಲ್‌, ಶ್ರೇಯಸ್‌ ಅಯ್ಯರ್‌, ಮನೀಶ್‌ ಪಾಂಡೆ, ರಿಷಭ್‌ ಪಂತ್‌, ಶಿವಂ ದುಬೇ, ಕುಲ್ದೀಪ್‌ ಯಾದವ್‌, ಯುಜ್ವೇಂದ್ರ ಚಹಲ್‌, ರವೀಂದ್ರ ಜಡೇಜಾ, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ, ನವದೀಪ್‌ ಸೈನಿ, ಶಾರ್ದೂಲ್‌ ಠಾಕೂರ್‌ ಮತ್ತು ಕೇದಾರ್‌ ಜಾಧವ್‌.

​​ಆಕ್ಲೆಂಡ್‌ ತಲುಪಿದ ಭಾರತ ತಂಡ

ಕಿವೀಸ್‌ ಪ್ರವಾಸದಲ್ಲಿ ಭಾರತ ತಂಡದ ಮೊದಲಿಗೆ 5 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯನ್ನಾಡಲಿದ್ದು, ಮೊದಲ ಪಂದ್ಯ ಜ.24ರಂದು (ಶುಕ್ರವಾರ) ಆಕ್ಲೆಂಡ್‌ನಲ್ಲಿ ನಡೆಯಲಿದೆ. ಈ ಸಲುವಾಗಿ ಸೋಮವಾರ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಿಂಗಾಪುರ ಮಾರ್ಗವಾಗಿ ನ್ಯೂಜಿಲೆಂಡ್‌ ಪ್ರಯಾಣ ಬೆಳೆಸಿದ್ದ ಭಾರತ ತಂಡ ಮಂಗಳವಾರ ಆಕ್ಲೆಂಡ್‌ಗೆ ಕಾಲಿಟ್ಟಿದೆ.


ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆ ಮೂಲಕ ಆಕ್ಲೆಂಡ್‌ಗೆ ಕಾಲಿಟ್ಟ ವಿಚಾರವನ್ನು ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ. ವಿರಾಟ್‌ ಹಂಚಿಕೊಂಡ ಫೋಟೊದಲ್ಲಿ ಯುವ ಆಟಗಾರಾದ ಶಾರ್ದೂಲ್‌ ಠಾಕೂರ್‌ ಮತ್ತು ಶ್ರೇಯಸ್‌ ಅಯ್ಯರ್‌ ಪೋಸ್‌ ನೀಡಿದ್ದಾರೆ.

​ಟೆಸ್ಟ್‌ ತಂಡದಿಂದ ಇಶಾಂತ್‌ ಹೊರಗುಳಿವ ಸಾಧ್ಯತೆ

ಇದೇ ವೇಳೆ ಟೀಮ್‌ ಇಂಡಿಯಾದ ಅನುಭವಿ ವೇಗದ ಬೌಲರ್‌ ಇಶಾಂತ್‌ ಶರ್ಮಾ, ಫೆ.24ರಂದು ವೆಲ್ಲಿಂಗ್ಟನ್‌ನಲ್ಲಿ ಶುರುವಾಗಲಿರುವ ನ್ಯೂಜಿಲೆಂಡ್‌ ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಗೆ ಅಲಭ್ಯರಾಗುವ ಸಾಧ್ಯತೆ ಇದೆ. ರಣಜಿ ಟ್ರೋಫಿಯಲ್ಲಿ ದಿಲ್ಲಿ ತಂಡದ ಪರ ಆಡುವ ಇಶಾಂತ್‌, ವಿದರ್ಭ ವಿರುದ್ಧದ ಪಂದ್ಯದಲ್ಲಿ ಸೋಮವಾರ ಪಾದದ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಗಾಯದ ಸಮಸ್ಯೆಯಿಂದ ಹೊರಬರಲು 6 ವಾರಗಳ ವಿಶ್ರಾಂತಿಯ ಸಲಹೆ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಇಶಾಂತ್‌ ಟೆಸ್ಟ್‌ ಸರಣಿ ಆಡುವುದು ಅನುಮಾನವಾಗಿದೆ.

Twitter-NEWS: India’s ODI squad against New Zealand announ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌