ಆ್ಯಪ್ನಗರ

ಪತ್ರಕರ್ತನಿಂದ ಅವಮಾನ; ಸಿಂಧ್ ನಾಯಕತ್ವ ವಹಿಸಲು ಸರ್ಫರಾಜ್ ನಕಾರ

ಸುದ್ದಿಗೋಷ್ಠಿಯ ವೇಳೆಯಲ್ಲಿ ಪತ್ರಕರ್ತನಿಂದ ಅವಮಾನಕರ ಪ್ರಶ್ನೆಯನ್ನು ಎದುರಿಸಿರುವ ಪಾಕಿಸ್ತಾನ ನಾಯಕ ಸರ್ಫರಾಜ್ ಅಹ್ಮದ್, ನ್ಯಾಷನಲ್ ಟಿ20 ಕಪ್‌ನಲ್ಲಿ ಸಿಂಧ್ ಫ್ರಾಂಚೈಸಿಯ ನಾಯಕತ್ವವನ್ನು ವಹಿಸಲು ನಿರಾಕರಿಸಿದ್ದಾರೆ ಎಂಬುದು ವರದಿಯಾಗಿದೆ.

Vijaya Karnataka Web 16 Oct 2019, 12:37 pm
ಹೊಸದಿಲ್ಲಿ: ಸುದ್ದಿಗೋಷ್ಠಿಯ ವೇಳೆಯಲ್ಲಿ ಪತ್ರಕರ್ತನಿಂದ ಅವಮಾನಕರ ಪ್ರಶ್ನೆ ಎದುರಾಗಿರುವ ಹಿನ್ನಲೆಯಲ್ಲಿ ಮುಜುಗರಕ್ಕೊಳಗಾಗಿರುವ ಸರ್ಫರಾಜ್ ಅಹ್ಮದ್, ನ್ಯಾಷನಲ್ ಟಿ20 ಕಪ್‌ನಲ್ಲಿ ಸಿಂಧ್ ಫ್ರಾಂಚೈಸಿಯ ನಾಯಕತ್ವವನ್ನು ನಿರಾಕರಿಸಿದ್ದಾರೆ ಎಂಬುದು ತಿಳಿದು ಬಂದಿವೆ.
Vijaya Karnataka Web sarfaraz-ahmed


2017ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತವನ್ನು ಮಣಿಸಿ ಟ್ರೋಫಿ ಗೆದ್ದಿರುವುದನ್ನು ಬಿಟ್ಟರೆ ಸರ್ಫರಾಜ್ ನಾಯಕತ್ವದಡಿಯಲ್ಲಿ ಪಾಕಿಸ್ತಾನ ಹೆಚ್ಚೇನು ಸಾಧನೆ ಮಾಡಿಲ್ಲ.

ಬಿಜೆಪಿ ಸೇರುತ್ತಾರಾ ಬಂಗಾಳ ಹುಲಿ? ಅಮಿತ್ ಶಾ ಜತೆ ಮಹತ್ವದ ಭೇಟಿ!

ಅಲ್ಲಿಂದ ಬಳಿಕ ಒಂದರ ಬಳಿಕ ಒಂದರಂತೆ ಸರಣಿ ಸೋಲುಗಳ ಮುಖಭಂಗಕ್ಕೆ ಒಳಗಾಗಿದೆ. ಇದಕ್ಕೊಂದು ತಾಜಾ ಸೇರ್ಪಡೆಯೆಂಬಂತೆ ದೀರ್ಘ ಕಾಲದ ಬಳಿಕ ತವರಿನಲ್ಲಿ ನಡೆದ ಟ್ವೆಂಟಿ-20 ಸರಣಿಯಲ್ಲೂ ನಂ.1 ಆಗಿರುವ ಪಾಕಿಸ್ತಾನ, ಶ್ರೀಲಂಕಾ ವಿರುದ್ಧ ವೈಟ್‌ವಾಶ್ ಮುಖಭಂಗಕ್ಕೊಳಗಾಗಿತ್ತು.

ಇದೀಗ ನ್ಯಾಷನಲ್ ಟಿ20 ಕಪ್‌ನಲ್ಲಿ ಸರ್ಫರಾಜ್ ಸಿಂಧ್ ತಂಡವನ್ನು ಮುನ್ನಡೆಸಬೇಕಿತ್ತು. ಆದರೆ ಸುದ್ದಿಗೋಷ್ಠಿಯಲ್ಲಿ ಎದುರಾದ ಅವಮಾನಕರ ಪ್ರಶ್ನೆಯಿಂದ ಮುಜುಗರಕ್ಕೊಳಗಾಗಿ ನಾಯಕತ್ವ ತೊರೆಯಲು ಮುಂದಾಗಿದ್ದಾರೆ ಎಂದು ಹೆಸರಾಂತ ಪಾಕ್ ಪತ್ರಕರ್ತರೊಬ್ಬರು ವರದಿ ಮಾಡಿದ್ದಾರೆ.

ಸೌರವ್ ಗಂಗೂಲಿ ಬಿಸಿಸಿಐ ಬಾಸ್; ಸಚಿನ್, ಸೆಹ್ವಾಗ್, ಲಕ್ಷ್ಮಣ್ ಹೇಳಿದ್ದೇನು?

ಅಷ್ಟಕ್ಕೂ ಸರ್ಫರಾಜ್‌ಗೆ ಎದುರಾದ ಪ್ರಶ್ನೆ ಏನಾಗಿತ್ತು?
ನೀವು ಪಾಕ್ ಕ್ರಿಕೆಟ್ ಅಭಿಮಾನಿಗಳನ್ನು ನಿರಾಸೆಗೊಳಿಸಿದ್ದೀರಿ. ಅವರು ನಿಮ್ಮನ್ನು ಶಪಿಸಲು ಪ್ರಾರಂಭಿಸಿದ್ದಾರೆ. ನ್ಯಾಷನಲ್ ಟಿ20 ಕಪ್‌ನಲ್ಲಿ ನಿಮ್ಮ ಆಟ ನೋಡಲು ಯಾರು ಬರುತ್ತಾರೆ? ಎಂದು ಪತ್ರಕರ್ತ ಪ್ರಶ್ನಿಸಿದ್ದರು. ಇದರಿಂದ ಸರ್ಫರಾಜ್ ಸಾಕಷ್ಟು ಅವಮಾನಕ್ಕೊಳಗಾಗಿದ್ದಾರೆ ಎಂಬುದು ತಿಳಿದು ಬಂದಿದೆ.

90ರ ದಶಕದ ಪಾಕ್ ಮನೋಭಾವವನ್ನು ವಿರಾಟ್ ಕೊಹ್ಲಿ ಕದ್ದಿದ್ದಾರೆಯೇ?

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯಿಬ್ ಅಖ್ತರ್ ಸೇರಿದಂತೆ ಅನೇಕ ಮಾಜಿಗಳು ಸರ್ಫರಾಜ್ ನಾಯಕತ್ವವನ್ನು ಗಂಭೀರವಾಗಿೇ ಟೀಕಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌