ಆ್ಯಪ್ನಗರ

ಸಿದ್ದಾರ್ಥ್‌ಗೆ ಭುಜ ಬಲ ತೋರಿದ ಉತ್ತಪ್ಪಗೆ ಯುವಿ ಬುದ್ಧಿವಾದ

ಕ್ರಿಕೆಟ್ ಮೈದಾನದಲ್ಲಿ ಕಾವೇರಿದ ಕ್ಷಣದಲ್ಲಿ ಆಟಗಾರರ ಮಧ್ಯೆ ಸಣ್ಣ-ಪುಟ್ಟ ವಾಗ್ವಾದಗಳು ಸಂಭವಿಸುವುದು ಸಾಮಾನ್ಯವಾದ ಸಂಗತಿ. ಆದರೆ ಅನುಭವಿ ಆಟಗಾರರೇ ಕ್ರೀಡಾ ಸ್ಫೂರ್ತಿ ಮರೆತು ಇಂತಹ ಎಡವಟ್ಟು ಮಾಡುವುದು ಎಷ್ಟು ಸರಿ ಎಂಬುದು ಪ್ರಶ್ನೆಯ ವಿಚಾರವಾಗಿದೆ.

ಏಜೆನ್ಸೀಸ್ 30 Apr 2017, 11:42 pm
ಹೈದರಾಬಾದ್: ಕ್ರಿಕೆಟ್ ಮೈದಾನದಲ್ಲಿ ಕಾವೇರಿದ ಕ್ಷಣದಲ್ಲಿ ಆಟಗಾರರ ಮಧ್ಯೆ ಸಣ್ಣ-ಪುಟ್ಟ ವಾಗ್ವಾದಗಳು ಸಂಭವಿಸುವುದು ಸಾಮಾನ್ಯವಾದ ಸಂಗತಿ. ಆದರೆ ಅನುಭವಿ ಆಟಗಾರರೇ ಕ್ರೀಡಾ ಸ್ಫೂರ್ತಿ ಮರೆತು ಇಂತಹ ಎಡವಟ್ಟು ಮಾಡುವುದು ಎಷ್ಟು ಸರಿ ಎಂಬುದು ಪ್ರಶ್ನೆಯ ವಿಚಾರವಾಗಿದೆ.
Vijaya Karnataka Web shoulder to shoulder robin uthappa and siddarth kaul
ಸಿದ್ದಾರ್ಥ್‌ಗೆ ಭುಜ ಬಲ ತೋರಿದ ಉತ್ತಪ್ಪಗೆ ಯುವಿ ಬುದ್ಧಿವಾದ


ಹೈದರಾಬಾದ್‌ನಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಬಿರುಸಿನ ಅರ್ಧಶತಕ ಬಾರಿಸಿದ್ದರು.

ಬಳಿಕ ಪಂದ್ಯದ ಎರಡನೇ ಅವಧಿಯಲ್ಲಿ ಪರಿಸ್ಥಿತಿ ಮತ್ತಷ್ಟು ರೋಚಕ ಹಣಾಹಣಿಗೆ ಒಳಗಾಗಿತ್ತು. ಈ ನಡುವೆ ಸನ್‌ರೈಸರ್ಸ್ ವೇಗಿ ಸಿದ್ಧಾರ್ಥ್ ಕೌಲ್‌ಗೆ ರಾಬಿನ್ ಉತ್ತಪ್ಪ ಭುಜ ಬಲ ತೋರಿರುವುದು ವಿವಾದಕ್ಕೀಡು ಮಾಡಿದೆ.


ಪ್ರಸ್ತುತ ಐಪಿಎಲ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿರುವ ಉತ್ತಪ್ಪ, ಸಿದ್ದಾರ್ಥ್ ಭುಜಕ್ಕೆ ಢಿಕ್ಕಿ ಹೊಡೆದಿದ್ದರು. ಇದು ಪಂದ್ಯದಲ್ಲಿ ಕಾವೇರಿದ ಕ್ಷಣ ಸೃಷ್ಟಿ ಮಾಡಿತ್ತು.

ಬಳಿಕ ಉತ್ತಪ್ಪ ಬಳಿಕ ತೆರಳಿದ ಸನ್‌ರೈಸರ್ಸ್ ತಂಡದ ಹಿರಿಯ ಆಲ್‌ರೌಂಡರ್ ಆಟಗಾರ ಯುವರಾಜ್ ಸಿಂಗ್ ಬುದ್ಧಿ ಮಾತು ಹೇಳಿಕೊಟ್ಟರು. ಪರಿಣಾಮ ಪರಿಸ್ಥಿತಿ ಶಾಂತವಾಯಿತು.

ಮಳೆಯಿಂದಾಗಿ ಪಂದ್ಯ ಅಡಚಣೆಗೊಂಡಾಗ ಆಟಗಾರರು ಪೆವಿಲಿಯನ್‌ನತ್ತ ಮರಳುತ್ತಿರುವಾಗ ಮತ್ತೆ ಉತ್ತಪ್ಪ ಬಳಿ ತೆರಳಿ ಹೆಗಲ ಮೇಲೆ ಕೈಯಿಟ್ಟು ಯುವಿ ಬುದ್ಧಿವಾದ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌