ಆ್ಯಪ್ನಗರ

'ಗಮನ ಕ್ರಿಕೆಟ್‌ ಕಡೆಗಿರಲಿ' ಎಂದು ಉಮರ್‌ಗೆ ಕೋಚ್‌ ಮಿಸ್ಬಾ ಉಲ್ ಹಕ್ ಉಪದೇಶ

ಮ್ಯಾಚ್‌ ಫಿಕ್ಸಿಂಗ್‌ ಸಲುವಾಗಿ ಬುಕ್ಕಿಗಳು ಸಂಪರ್ಕಿಸಿದ್ದ ವಿಚಾರವನ್ನು ಪಿಸಿಬಿ ಗಮನಕ್ಕೆ ತರದೇ ಮಾಡಿದ ಎಡವಟ್ಟಿನಿಂದಾಗಿ ಉಮರ್‌ ಅಕ್ಮಲ್‌ ಆಜೀವ ನಿಷೇಧ ಶಿಕ್ಷೆಗೆ ಗುರಿಯಾಗುವ ಆತಂಕ ಎದುರಿಸಿದ್ದಾರೆ.

Vijaya Karnataka Web 31 Mar 2020, 11:02 pm
ಕರಾಚಿ: ಹಳಿ ತಪ್ಪಿರುವ ಕ್ರಿಕೆಟ್‌ ವೃತ್ತಿ ಬದುಕನ್ನು ಮತ್ತೆ ಸರಿದಾರಿಗೆ ತರಬೇಕಾದರೆ ಕರೆತರಬೇಕಾದರೆ ಶಿಸ್ತಿನಿಂದ ಕ್ರಿಕೆಟ್‌ ಕಡೆಗಷ್ಟೇ ಗಮನ ನೀಡಬೇಕು ಎಂದು ಪಾಕಿಸ್ತಾನದ ವಿವಾದಿತ ಕ್ರಿಕೆಟಿಗ ಉಮರ್‌ ಅಕ್ಮಲ್‌ಗೆ ಪಾಕ್‌ ತಂಡದ ಪ್ರಧಾನ ಕೋಚ್‌ ಮತ್ತು ಸೆಲೆಕ್ಟರ್‌ ಮಿಸ್ಬಾ ಉಲ್‌ ಹಕ್‌ ಸಲಹೆ ನೀಡಿದ್ದಾರೆ.
Vijaya Karnataka Web Misbah ul haq on umar akmal


ಪಾಕಿಸ್ತಾನದ ಭವಿಷ್ಯದ ತಾರೆ ಎಂದೆಲ್ಲಾ ಹೆಸರು ಮಾಡಿದ್ದ 29 ವರ್ಷದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌, ಪಾಕಿಸ್ತಾನ್‌ ಸೂಪರ್‌ ಲೀಗ್‌ ಟೂರ್ನಿಗೂ ಮುನ್ನ ಮ್ಯಾಚ್‌ ಫಿಕ್ಸಿಂಗ್‌ ಸಲುವಾಗಿ ಬುಕ್ಕಿಗಳು ತಮ್ಮನ್ನು ಸಂಪರ್ಕಿಸಿದ್ದ ವಿಚಾರವನ್ನು ಪಾಕ್ ಕ್ರಿಕೆಟ್‌ ಮಂಡಳಿಯ (ಪಿಸಿಬಿ) ಗಮನಕ್ಕೆ ತರದೆ ಭಷ್ಟ್ರಾಚಾರ ತಡೆ ನೀತಿ ನಿಯಮಗಳ ಉಲ್ಲಂಘನೆ ಮಾಡಿದ್ದರು.

ಇದೇ ಪ್ರಕರಣ ಸಂಬಂಧ ಫೆ.20ರಿಂದ ಅಮಾನತ್ತಿನಲ್ಲಿರುವ ಉಮರ್‌ ಅಕ್ಮಲ್‌ ಉದ್ದೇಶ ಪೂರ್ವಕವಾಗಿ ಬುಕ್ಕೀ ಜೊತೆಗಿನ ಸಂಪರ್ಕವನ್ನು ಪಿಸಿಬಿ ಗಮನಕ್ಕೆ ತರದೇ ಹೋಗಿರುವುದು ಸಾಬೀತಾದರೆ ಕ್ರಿಕೆಟ್‌ನಿಂದ ಆಜೀವ ನಿಷೇಧ ಎದುರಿಸುವ ಸಾಧ್ಯತೆಯೂ ಇದೆ.

ಶೆಹಝಾದ್‌ಗೆ ಫುಲ್‌ ರೋಸ್ಟ್‌ ಮಾಡಿದ ಪೀಟರ್ಸನ್!

ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಮಿಸ್ಬಾ ಉಲ್‌ ಹಕ್, "ಉಮರ್‌ ಭವಿಷ್ಯ ಅವನ ಕೈಯಲ್ಲೇ ಇದೆ. ತಾನು ಹೀಗೆಯೇ ಇರಬೇಕೊ ಅಥವಾ ಬೇಡೋ ಎಂಬ ನಿರ್ಧಾರವನ್ನು ಅವರೇ ತೆಗೆದುಕೊಳ್ಳಬೇಕು. ಆತ ಉತ್ತಮ ಪ್ರದರ್ಶನ ನೀಡಿದ್ದಾನೆ. ಆದರೆ, ಫಿಟ್ನೆಸ್‌ ಕಡೆಗೆ ಮತ್ತಷ್ಟು ಗಮನ ಕೊಡಬೇಕು. ಶಿಸ್ತನ್ನು ಮೂಗೂಡಿಸಿಕೊಂಡು ಸಾಧಿಸಬೇಕೆಂಬ ಬದ್ಧತೆ ರೂಢಿಸಿಕೊಳ್ಳಬೇಕು," ಎಂದಿದ್ದಾರೆ.

ಪಾಕಿಸ್ತಾನ ಪರ ಅದ್ಭುತ ರೀತಿಯಲ್ಲಿ ವೃತ್ತಿ ಬದುಕು ಆರಂಭಿಸಿದ್ದ ಉಮರ್‌ ಅಕ್ಮಲ್‌, 2009ರಲ್ಲಿ ತಮ್ಮ ಪದಾರ್ಪಣೆಯ ಪಂದ್ಯದಲ್ಲೇ ನ್ಯೂಜಿಲೆಂಡ್‌ ವಿರುದ್ಧ ಶತಕ ಬಾರಿಸಿದ್ದರು. ಆದರೆ, ಆಗಾಗ ನಿಯಮ ಮುಲ್ಲಂಘಿಸಿ ಶಿಸ್ತು ಕ್ರಮ ಎದುರಿಸುವ ಮೂಲಕ ಸದಾ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರುತ್ತಿದ್ದ ಉಮರ್‌ ಬಳಿಕ ರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನ ಕಳೆದುಕೊಂಡರು.

ಪಾಕಿಸ್ತಾನಕ್ಕೆ ನೆರವಾಗಿ ಎಂದ ಯುವಿ ವಿರುದ್ಧ ಅಭಿಮಾನಿಗಳು ಗರಂ

2014ರಲ್ಲಿ ಟ್ರಾಫಿಕ್‌ ನಿಯಮ ಉಲ್ಲಂಘಿಸಿ ಪೊಲೀಸರ ಅತಿಥಿಯಾಗಿದ್ದ ಉಮರ್‌, ಫಿಟ್ನೆಸ್‌ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದ ಕಾರಣ ಇಂಗ್ಲೆಂಡ್‌ ಪ್ರವಾಸದಿಂದ ಅರ್ಧದಲ್ಲೇ ತಾಯ್ನಾಡಿಗೆ ದಬ್ಬಲ್ಲಪಟ್ಟಿದ್ದರು. ಇದೀಗ ಮ್ಯಾಚ್‌ ಫಿಕ್ಸಿಂಗ್‌ ಆರೋಪದಲ್ಲಿ ಸಿಲುಕಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌