ಹೊಸದಿಲ್ಲಿ: ಪ್ರಾವಾಸಿ ಟೀಮ್ ಇಂಡಿಯಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಸೋತು ಗಾಯಗೊಂಡ ಹುಲಿಯಂತ್ತಾಗಿರುವ ಆತಿಥೇಯ ಶ್ರೀಲಂಕಾ ತಂಡ ಈಗ ಮೂರು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯಲ್ಲಿ ತಿರುಗೇಟು ನೀಡುವ ತವಕದಲ್ಲಿದೆ. ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯ ಭಾನುವಾರ ನಡೆಯಲಿದ್ದು, ಈ ಬಗ್ಗೆ ಮಾತನಾಡಿರುವ ಶ್ರೀಲಂಕಾದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಸನತ್ ಜಯ ಸೂರ್ಯ, ತಂಡಕ್ಕೆ ಜಯ ತಂದುಕೊಡುವ ಸಾಮರ್ಥ್ಯವಿರುವ ಪರ್ಫೆಕ್ಟ್ ಪ್ಲೇಯಿಂಗ್ ಇಲೆವೆನ್ ಕಟ್ಟಿದ್ದಾರೆ.
ಏಕದಿನ ಕ್ರಿಕೆಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ ಜಯ ತಂದುಕೊಟ್ಟ ಆಟಗಾರರನ್ನು ಬುತೇಕ ಉಳಿಸಿಕೊಂಡಿರುವ ಜಯಸೂರ್ಯ, ರಮೇಶ್ ಮೆಂಡಿಸ್ ಸ್ಥಾನದಲ್ಲಿ ಆಲ್ರೌಂಡರ್ ವಾನಿಂದು ಹಸರಂಗ ಆಡಬೇಕು ಎಂದು ಹೇಳಿದ್ದಾರೆ. 3ನೇ ಒಡಿಐನಲ್ಲಿ ಗಾಯದ ಸಮಸ್ಯೆ ಕಾರಣ ಹಸರಂಗ ಆಡಿರಲಿಲ್ಲ.
ಸೂರ್ಯಕುಮಾರ್ ಯಾದವ್ ಸೇರಿದಂತೆ ಮೂವರಿಗೆ ಇಂಗ್ಲೆಂಡ್ ಟಿಕೆಟ್!
ಇದೇ ವೇಳೆ ಎಡಗೈ ವೇಗದ ಬೌಲರ್ ಇಸುರು ಉದಾನ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಅನುಮಾನ ಎಂದು 52 ವರ್ಷದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಅಭಿಪ್ರಾಯ ಪಟ್ಟಿದ್ದಾರೆ. ಏಕದಿನ ಸರಣಿಯಲ್ಲಿ ಶ್ರೀಲಂಕಾದ ಬೌಲಿಂಗ್ ವಿಭಾಗ ಶಿಸ್ತಿನ ಪ್ರದರ್ಶನ ನೀಡಿದ್ದು, ಟೀಮ್ ಮ್ಯಾನೇಜ್ಮೆಂಟ್ ಅದನ್ನೇ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.
ಈ ವರ್ಷ ಯುಎಇನಲ್ಲಿ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಇದಕ್ಕೆ ಸೂಕ್ತ ಆಟಗಾರರನ್ನು ಗುರುತಿಸುವ ಪ್ರಯತ್ನದಲ್ಲಿ ಇರುವ ಟೀಮ್ ಇಂಡಿಯಾಗೆ ಶ್ರೀಲಂಕಾ ವಿರುದ್ಧದ ಸರಣಿ ಅತ್ಯಂತ ಮಹತ್ವದ್ದಾಗಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡದ ಪರ ಕೆಲ ಯುವ ಪ್ರತಿಭೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಆಟಗಾರ-ಕೋಚ್ ಆಗಿ ಮಾತ್ರವಲ್ಲ, ದ್ರಾವಿಡ್ ಅದ್ಭುತ ವ್ಯಕ್ತಿ ಎಂಬುದಕ್ಕೆ ಇದೇ ಸಾಕ್ಷಿ!
ಭಾರತ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಸನತ್ ಜಯಸೂರ್ಯ ಆಯ್ಕೆ ಮಾಡಿದ ಶ್ರೀಲಂಕಾ ತಂಡ ಸಂಭಾವ್ಯ ಇಲೆವೆನ್ ಹೀಗಿದೆ.
1. ಅವಿಷ್ಕಾ ಫರ್ನಾಂಡೊ (ಓಪನರ್)
2. ಮಿನೋದ್ ಭಾನುಕ (ಓಪನರ್/ವಿಕೆಟ್ಕೀಪರ್)
3. ಧನಂಜಯ ಡಿ'ಸಿಲ್ವಾ (ಬ್ಯಾಟ್ಸ್ಮನ್)
4. ಚರಿತ್ ಅಸಲಂಕ (ಬ್ಯಾಟ್ಸ್ಮನ್)
5. ಅಶೆನ್ ಬಂಡಾರ (ಬ್ಯಾಟ್ಸ್ಮನ್)
6. ದಸುನ್ ಶನಕ (ಆಲ್ರೌಂಡರ್/ನಾಯಕ)
7. ವಾನಿಂದು ಹಸರಂಗ (ಆಲ್ರೌಂಡರ್)
8. ಚಮಿಕ ಕರುಣಾರತ್ನೆ (ಆಲ್ರೌಂಡರ್)
9. ದುಶ್ಮಾಂತ ಚಾಮೀರ (ಬೌಲರ್)
10. ಅಖಿಲ ಧನಂಜಯ (ಸ್ಪಿನ್ನರ್)
11. ಪ್ರವೀಣ್ ಜಯವಿಕ್ರಮ
ಭಾರತ ತಂಡದ ಸಂಭಾವ್ಯ ಇಲೆವೆನ್ಭಾರತ: ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ಇಶಾನ್ ಕಿಶನ್ (ವಿಕೆಟ್ಕೀಪರ್), ಸೂರ್ಯಕುಮಾರ್ ಯಾದವ್, ನಿತೀಶ್ ರಾಣಾ, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ರಾಹುಲ್ ಚಹರ್, ಯುಜ್ವೇಂದ್ರ ಚಹಲ್ ಅಥವಾ ವರುಣ್ ಚಕ್ರವರ್ತಿ.
ಏಕದಿನ ಕ್ರಿಕೆಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ತಂಡಕ್ಕೆ ಜಯ ತಂದುಕೊಟ್ಟ ಆಟಗಾರರನ್ನು ಬುತೇಕ ಉಳಿಸಿಕೊಂಡಿರುವ ಜಯಸೂರ್ಯ, ರಮೇಶ್ ಮೆಂಡಿಸ್ ಸ್ಥಾನದಲ್ಲಿ ಆಲ್ರೌಂಡರ್ ವಾನಿಂದು ಹಸರಂಗ ಆಡಬೇಕು ಎಂದು ಹೇಳಿದ್ದಾರೆ. 3ನೇ ಒಡಿಐನಲ್ಲಿ ಗಾಯದ ಸಮಸ್ಯೆ ಕಾರಣ ಹಸರಂಗ ಆಡಿರಲಿಲ್ಲ.
ಸೂರ್ಯಕುಮಾರ್ ಯಾದವ್ ಸೇರಿದಂತೆ ಮೂವರಿಗೆ ಇಂಗ್ಲೆಂಡ್ ಟಿಕೆಟ್!
ಇದೇ ವೇಳೆ ಎಡಗೈ ವೇಗದ ಬೌಲರ್ ಇಸುರು ಉದಾನ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಅನುಮಾನ ಎಂದು 52 ವರ್ಷದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಅಭಿಪ್ರಾಯ ಪಟ್ಟಿದ್ದಾರೆ. ಏಕದಿನ ಸರಣಿಯಲ್ಲಿ ಶ್ರೀಲಂಕಾದ ಬೌಲಿಂಗ್ ವಿಭಾಗ ಶಿಸ್ತಿನ ಪ್ರದರ್ಶನ ನೀಡಿದ್ದು, ಟೀಮ್ ಮ್ಯಾನೇಜ್ಮೆಂಟ್ ಅದನ್ನೇ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.
ಈ ವರ್ಷ ಯುಎಇನಲ್ಲಿ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಇದಕ್ಕೆ ಸೂಕ್ತ ಆಟಗಾರರನ್ನು ಗುರುತಿಸುವ ಪ್ರಯತ್ನದಲ್ಲಿ ಇರುವ ಟೀಮ್ ಇಂಡಿಯಾಗೆ ಶ್ರೀಲಂಕಾ ವಿರುದ್ಧದ ಸರಣಿ ಅತ್ಯಂತ ಮಹತ್ವದ್ದಾಗಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡದ ಪರ ಕೆಲ ಯುವ ಪ್ರತಿಭೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಆಟಗಾರ-ಕೋಚ್ ಆಗಿ ಮಾತ್ರವಲ್ಲ, ದ್ರಾವಿಡ್ ಅದ್ಭುತ ವ್ಯಕ್ತಿ ಎಂಬುದಕ್ಕೆ ಇದೇ ಸಾಕ್ಷಿ!
ಭಾರತ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಸನತ್ ಜಯಸೂರ್ಯ ಆಯ್ಕೆ ಮಾಡಿದ ಶ್ರೀಲಂಕಾ ತಂಡ ಸಂಭಾವ್ಯ ಇಲೆವೆನ್ ಹೀಗಿದೆ.
1. ಅವಿಷ್ಕಾ ಫರ್ನಾಂಡೊ (ಓಪನರ್)
2. ಮಿನೋದ್ ಭಾನುಕ (ಓಪನರ್/ವಿಕೆಟ್ಕೀಪರ್)
3. ಧನಂಜಯ ಡಿ'ಸಿಲ್ವಾ (ಬ್ಯಾಟ್ಸ್ಮನ್)
4. ಚರಿತ್ ಅಸಲಂಕ (ಬ್ಯಾಟ್ಸ್ಮನ್)
5. ಅಶೆನ್ ಬಂಡಾರ (ಬ್ಯಾಟ್ಸ್ಮನ್)
6. ದಸುನ್ ಶನಕ (ಆಲ್ರೌಂಡರ್/ನಾಯಕ)
7. ವಾನಿಂದು ಹಸರಂಗ (ಆಲ್ರೌಂಡರ್)
8. ಚಮಿಕ ಕರುಣಾರತ್ನೆ (ಆಲ್ರೌಂಡರ್)
9. ದುಶ್ಮಾಂತ ಚಾಮೀರ (ಬೌಲರ್)
10. ಅಖಿಲ ಧನಂಜಯ (ಸ್ಪಿನ್ನರ್)
11. ಪ್ರವೀಣ್ ಜಯವಿಕ್ರಮ
ಭಾರತ ತಂಡದ ಸಂಭಾವ್ಯ ಇಲೆವೆನ್ಭಾರತ: ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ಇಶಾನ್ ಕಿಶನ್ (ವಿಕೆಟ್ಕೀಪರ್), ಸೂರ್ಯಕುಮಾರ್ ಯಾದವ್, ನಿತೀಶ್ ರಾಣಾ, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ರಾಹುಲ್ ಚಹರ್, ಯುಜ್ವೇಂದ್ರ ಚಹಲ್ ಅಥವಾ ವರುಣ್ ಚಕ್ರವರ್ತಿ.