ಆ್ಯಪ್ನಗರ

ರವಿ ಶಾಸ್ತಿ ಜತೆಗೆ ಎಲ್ಲವೂ ಸರಿಯಿಲ್ಲವೇ; ದಾದಾ ಹೇಳಿದ್ದೇನು?

ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ರವಿ ಶಾಸ್ತ್ರಿ ಜತೆ ಯಾವುದೇ ರೀತಿಯ ವೈಮನಸ್ಸಿಲ್ಲ, ಇವೆಲ್ಲವೂ ಗಾಳಿ ಸುದ್ದಿ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ.

Vijaya Karnataka Web 7 Dec 2019, 12:35 pm
ಕೋಲ್ಕೊತಾ: ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ವಿರುದ್ಧ ಯಾವುದೇ ಮುನಿಸಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸೌರವ್ ಗಂಗೂಲಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
Vijaya Karnataka Web ರವಿ ಶಾಸ್ತಿ ಜತೆಗೆ ಎಲ್ಲವೂ ಸರಿಯಿಲ್ಲವೇ; ದಾದಾ ಹೇಳಿದ್ದೇನು?


ಶುಕ್ರವಾರ ಕೋಲ್ಕೊತಾದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರ ವೇಳೆ ಮಾತನಾಡಿದ ಗಂಗೂಲಿ, ಮುನಿಸಿನ ವಂತಿ ಕಪೋಕಲ್ಪಿತ. ವ್ಯಕ್ತಿಯನ್ನು ಆತನ ಕೆಲಸದಿಂದ ಮಾತ್ರ ಅಳೆಯಲು ಸಾಧ್ಯ ಎಂದರು.

2016ರಲ್ಲಿ ಭಾರತ ತಂಡದ ಕೋಚ್ ಹುದ್ದೆ ಆಯ್ಕೆ ಸಂದರ್ಭದಲ್ಲಿ ರವಿ ಶಾಸ್ತ್ರಿ ಹಾಗೂ ನಡುವೆ ಮನಸ್ತಾಪ ಉಂಟಾಗಿತ್ತು. ಈ ವೇಳೆ ಕ್ರಿಕೆಟ್ ಸಲಹಾ ಸಮಿತಿಯಲ್ಲಿದ್ದ ಗಂಗೂಲಿ ಕೋಚ್ ಹುದ್ದೆ ಅನಿಲ್ ಕುಂಬ್ಳೆಗೆ ಸಿಗುವಂತೆ ನೋಡಿಕೊಂಡಿದ್ದರು. ಅದಕ್ಕೆ ಸಾಸ್ತ್ರಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಕಿರಿಕ್ ಕೊಹ್ಲಿ; ತಮ್ಮ ತಂಟೆಗೆ ಬಂದ ವಿಲಿಯಮ್ಸ್‌ಗೆ ತಕ್ಕ ಪಾಠ

ಆ ಕೋಪವನ್ನು ಗಂಗೂಲಿ ಈಗ ತೀರಿಸಿಕೊಳ್ಳುತ್ತಾರೆ ಎನ್ನುವ ಸುದ್ದಿ ಹಬ್ಬಿರುವ ಹಿನ್ನೆಲೆಯಲ್ಲಿ ಭಾರತ ತಂಡದ ಮಾಜಿ ನಾಯಕ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ರೀತಿಯ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರವಿಲ್ಲ. ಯಾಕೆಂದರೆ ಅದು ಗಾಳಿ ಸುದ್ದಿ. ಹುದ್ದೆಯನ್ನು ಸರಿಯಾಗಿ ನಿರ್ವಹಿಸಿದರೆ ಅವರೇ ಮುಂದುವರಿಯುತ್ತಾರೆ. ನಿರ್ವಹಣೆ ಸರಿಯಾಗದಿದ್ದರೆ ಆ ಜಾಗಕ್ಕೆ ಇನ್ನೊಬ್ಬರು ಬರುವುದು ಸಾಮಾನ್ಯ ಪ್ರಕ್ರಿಯೆ ಎಂದರು.

ಕಿಂಗ್ ಕೊಹ್ಲಿ ದಾಖಲೆಗಳ ಸರದಾರ; ಭಾರತ ಗರಿಷ್ಠ ರನ್ ಬೇಟೆ

ವಿರಾಟ್ ಅದ್ಭುತ ಆಟಗಾರ:
ವಿರಾಟ್ ಕೊಹ್ಲಿ ಆದರ್ಶ ಆಟಗಾರ. ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಅವರಿಗೆ ಬಿಸಿಸಿಐ ಕಡೆಯಿಂದ ಎಲ್ಲ ರೀತಿಯ ಬೆಂಲವೂ ದೊರೆಯಲಿದೆ. ರವಿ ಶಾಸ್ತ್ರಿ ಸೇರಿದಂತೆ ಎಲ್ಲರಿಗೂ ಅಗತ್ಯವಿರುವ ಸಹಕಾರ ದೊರೆಯುತ್ತದೆ. ಆದರೆ, ಉತ್ತಮ ಫಲಿತಾಂಶ ನಮ್ಮ ನಿರೀಕ್ಷೆಯಾಗಿದೆ ಎಂದು ಗಂಗೂಲಿ ಹೇಳಿದರು.

ಕೆಎಲ್ ರಾಹುಲ್ ಸಹಸ್ರ ರನ್ ಸರದಾರ; ಸ್ಮರಣೀಯ ದಾಖಲೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌