ಆ್ಯಪ್ನಗರ

ಬಿಸಿಸಿಐ ಅಧ್ಯಕ್ಷ ಪಟ್ಟಕ್ಕೇರಿದ ಸೌರವ್‌ ಗಂಗೂಲಿ ಬಗ್ಗೆ ಮಾಜಿ ಐಪಿಎಲ್‌ ಮುಖ್ಯಸ್ಥ ಹೇಳಿದ್ದಿದು!

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ)ಯ 39ನೇ ಅಧ್ಯಕ್ಷರಾಗಿ ಟೀಮ್‌ ಇಂಡಿಯಾದ ಮಾಜಿ ನಾಯಕ ಸೌರವ್‌ ಗಂಗೂಲಿ ಆಯ್ಕೆಯಾಗಿದ್ದು ಈ ಸಂದರ್ಭದಲ್ಲಿ ಐಪಿಎಲ್‌ನ ಮಾಜಿ ಮುಖ್ಯಸ್ಥ ರಾಜೀವ್‌ ಶುಕ್ಲಾ ಮಾತಿಗಿಳಿದಿದ್ದಾರೆ.

Vijaya Karnataka Web 23 Oct 2019, 2:17 pm
ಮುಂಬೈ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ, ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ)ಯ 39ನೇ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದರು. ಇದರ ಬೆನ್ನಲ್ಲೇ ಮಾತಿಗಿಳಿದ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನ ಮಾಜಿ ಮುಖ್ಯಸ್ಥ ರಾಜೀವ್‌ ಶುಕ್ಲಾ, ಬಿಸಿಸಿಐನ ನೂತನ ಅಧ್ಯಕ್ಷ ಗಂಗೂಲಿ ಮಂಡಳಿಯ ಮುಖ್ಯ ಆಸ್ತಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
Vijaya Karnataka Web rAjiv shkula on sourav ganguly as bcci president 2019


"ಭಾರತೀಯ ಕ್ರಿಕೆಟ್‌ನಲ್ಲಿ ಇದು ಅತ್ಯಂತ ಸಂತಸದ ಕ್ಷಣ. ಸೌರವ್‌ ಗಂಗೂಲಿ ಅವರಲ್ಲಿ ಅಘಾದ ಪ್ರತಿಭೆ ಇದೆ. ಅವರು ಬಿಸಿಸಿಐನ ಬಹುದೊಡ್ಡ ಆಸ್ತಿ ಎಂಬುದನ್ನು ಸಾಬೀತು ಪಡಿಸಲಿದ್ದಾರೆ. ಇದೊಂದು ಉತ್ತಮ ಸಂಯೋಜನೆ. ಭಾರತ ಕ್ರಿಕೆಟ್‌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ನಾಯಕ ಅವರು. ಕ್ರೀಡೆಗೆ ಇನ್ಮುಂದೆ ಬಹಳ ಸಂತಸದ ದಿನಗಳು ಮೂಡಿಬರಲಿವೆ," ಎಂದು ಶುಕ್ಲಾ ಗುಣಗಾನ ಮಾಡಿದ್ದಾರೆ.

ದಾದಾಗಿರಿ; 39ನೇ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಲಿರುವ ಸೌರವ್ ಗಂಗೂಲಿ

ಕಳೆದ ವಾರ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಡೆದ ನಾಮಪತ್ರ ಸಲ್ಲಿಕೆಯಲ್ಲಿ ಸೌರವ್‌ ಗಂಗೂಲಿ ಅರ್ಜಿ ಸಲ್ಲಿಸುತ್ತಿದ್ದಂತೆಯೇ ಬಿಸಿಸಿಐನ ಅಧಿಕಾರ ದಾದಾ ಖ್ಯಾತಿಯ ಮಾಜಿ ಕ್ರಿಕೆಟಿಗನಿಗೆ ಒಲಿಯುವುದು ಖಾತ್ರಿಯಾಗಿತ್ತು. ದಾದಾ ಅಖಾಡಕ್ಕೆ ಇಳಿದಿರುವುದು ಗೊತ್ತಾದ ಕೂಡಲೇ ಬೇರಾವ ಅಭ್ಯರ್ತಿಗಳು ಕೂಡ ನಾಮಪತ್ರ ಸಲ್ಲಿಕೆಗೂ ಧೈರ್ಯ ಮಾಡದೇ ಇದ್ದ ಕಾರಣ ಅವಿರೋಧವಾಗಿ ಗಂಗೂಲಿಗೆ ಅಧ್ಯಕ್ಷ ಸ್ಥಾನ ಒಲಿದೆ.

ಗಂಗೂಲಿ ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪುತ್ರ ಜಯ ಶಾ ಬಿಸಿಸಿಐನ ನೂತನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಕೇರಳದ ಜಯೇಶ್‌ ಜಾರ್ಜ್‌ ಜಂಟಿ ಕಾರ್ಯದರ್ಶಿ ಹುದ್ದೆ ಪಡೆದುಕೊಂಡಿದ್ದಾರೆ. ಉತ್ತರಾಖಂಡ್‌ನ ಮಹಿಮ್‌ ವರ್ಮಾ ಉಪಾಧ್ಯಕ್ಷನ ಹುದ್ದೆ ಅಲಂಕಡಿಸಿದ್ದಾರೆ.

ಇದೀಗ ಅಧಿಕೃತ; ಬಿಸಿಸಿಐಯಲ್ಲಿ ದಾದಾಗಿರಿ ಆರಂಭ; ನೂತನ ಅಧ್ಯಕ್ಷ ಪದವಿ ವಹಿಸಿದ ಸೌರವ್ ಗಂಗೂಲಿ!

ಮತ್ತೊಂದೆಡೆ ಬಿಸಿಸಿಐನ ಮಾಜಿ ಅಧ್ಯಕ್ಷ ಅನುರಾಗ್‌ ಠಾಕೂರ್‌ ಅವರ ಕಿರಿಯ ಸಹೋದರ ಅರುಣ್‌ ಧುಮಾಲ್‌ ಖಜಾಂಚಿ ಹುದ್ದೆ ಪಡೆದಿದ್ದಾರೆ. ಬಿಸಿಸಿಐನ ನೂತನ ಪದಾಧಿಕಾರಿಗಳ ನೇಮಕದ ಬಳಿಕ ಬಿಸಿಸಿಐನಲ್ಲಿ ಕ್ರಿಕೆಟ್‌ ವ್ಯವಹಾರಗಳನ್ನು ನರ್ವಹಿಸಲು ಸುಪ್ರೀಂ ಕೋರ್ಟ್‌ ನೇಮಕ ಮಾಡಿದ್ದ ಕ್ರಿಕೆಟ್‌ ಆಡಳಿತ ಸಮಿತಿ (ಸಿಒಎ) ಅಧಿಕಾರ ಅವಧಿ ಅಂತ್ಯಗೊಂಡಿದೆ.

ಇಂಡೊ-ಪಾಕ್‌ ಕ್ರಿಕೆಟ್‌ ಸರಣಿ ಆಯೋಜನೆ ಬಗ್ಗೆ ತುಟಿಬಿಚ್ಚಿದ ಸೌರವ್‌ ಗಂಗೂಲಿ!

ಇನ್ನು ನವೆಂಬರ್‌ನಲ್ಲಿ ನಡೆಯಲಿರುವ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಕ್ರಿಕೆಟ್‌ ಸರಣಿಗಳ ಸಲುವಾಗಿ ಭಾರತ ತಂಡವನ್ನು ಅಕ್ಟೋಬರ್‌ 24ರಂದು (ಗುರುವಾರ) ಪ್ರಕಟಿಸಲಾಗುತ್ತಿದ್ದು, ಇದಕ್ಕೂ ಮುನ್ನ ಟೀಮ್‌ ಇಂಡಿಯಾ ಆಯ್ಕೆ ಸಮಿತಿಯೊಟ್ಟಿಗೆ ಗೌರವ್‌ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಮೊತ್ತ ಮೊದಲ ಬಾರಿ ಚರ್ಚೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಟೀಮ್‌ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ಭವಿಷ್ಯದ ಕುರಿತಾಗಿ ಚರ್ಚಿಸಲಾಗುತ್ತದೆ ಎಂದು ಈ ಮೊದಲು ಗಂಗೂಲಿ ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌