ದಕ್ಷಿಣ ಆಫ್ರಿಕಾದಲ್ಲಿ ಇತಿಹಾಸ ನಿರ್ಮಿಸಿತೇ ಕೊಹ್ಲಿ ಪಡೆ
1992ನೇ ಇಸವಿಯಿಂದ ಆರಂಭವಾದ ದಕ್ಷಿಣ ಆಫ್ರಿಕಾ ಪ್ರಯಾಣವಿದು. ಆದರೆ 2011ರಲ್ಲೇ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ 1-1ರ ಸಮಬಲ ದಾಖಲಿಸಿದ್ದು ಬಿಟ್ಟರೆ ಟೀಮ್ ಇಂಡಿಯಾ ಯಾವತ್ತೂ ಹರಿಣಗಳ ನಾಡಲ್ಲಿ ಟೆಸ್ಟ್ ಸರಣಿ ಗೆಲುವಿನ ಸಿಹಿ ಅನುಭವಿಸಿರಲಿಲ್ಲ.
TIMESOFINDIA.COM 28 Dec 2017, 9:59 pm
ಮುಂಬೈ: 1992ನೇ ಇಸವಿಯಿಂದ ಆರಂಭವಾದ ದಕ್ಷಿಣ ಆಫ್ರಿಕಾ ಪ್ರಯಾಣವಿದು. ಆದರೆ 2011ರಲ್ಲೇ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ 1-1ರ ಸಮಬಲ ದಾಖಲಿಸಿದ್ದು ಬಿಟ್ಟರೆ ಟೀಮ್ ಇಂಡಿಯಾ ಯಾವತ್ತೂ ಹರಿಣಗಳ ನಾಡಲ್ಲಿ ಟೆಸ್ಟ್ ಸರಣಿ ಗೆಲುವಿನ ಸಿಹಿ ಅನುಭವಿಸಿರಲಿಲ್ಲ.
ಈ ಮಹತ್ತರ ಕನಸು ಕಟ್ಟಿಕೊಂಡಿರುವ ವಿರಾಟ್ ಕೊಹ್ಲಿ ಪಡೆ ತಾವೇಕೆ ಟೆಸ್ಟ್ ಕ್ರಿಕೆಟ್ನಲ್ಲಿ ಅಗ್ರ ಸ್ಥಾನದಲ್ಲಿದ್ದೇವೆ ಎಂಬುದನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾ ಪರ್ಯಟನೆಯನ್ನು ಕೈಗೊಂಡಿದೆ.
ಜನವರಿ 5ರಿಂದ ಆರಂಭವಾಗಲಿರುವ ಟೂರ್ನಿಯಲ್ಲಿ ಒಟ್ಟು ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿದೆ.
ಪ್ರಮುಖವಾಗಿಯೂ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿರುವ ಟೀಮ್ ಇಂಡಿಯಾದಲ್ಲಿರುವ ಪ್ರಮುಖ ಬ್ಯಾಟ್ಸ್ಮನ್ಗಳು ಸೇರಿದಂತೆ ಬೌಲರ್ಗಳು ಕಳೆದ ಕೆಲವು ವರ್ಷಗಳಿಂದ ಜತೆಯಾಗಿ ಆಡುತ್ತಿರುವುದು ದನಾತ್ಮಕ ಅಂಶವಾಗಿದೆ.
ಅತ್ತ ಮಾರ್ನೆ ಮಾರ್ಕೆಲ್, ಪಿಲಾಂಡರ್, ಕಗಿಸೋ ರಬಡ ಹಾಗೂ ಡೇಲ್ ಸ್ಟೈನ್ ಅವರಂತಹ ಬಿಗು ದಾಳಿಗಳನ್ನು ಎದುರಿಸಬೇಕಿದೆ.
2013ನೇ ಸಾಲಿನಲ್ಲೂ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಪ್ರಮುಖ ಆಟಗಾರರೂ ಈಗಲೂ ಟೀಮ್ ಇಂಡಿಯಾ ಭಾಗವಾಗಿರುವುದು ವಾತಾವರಣವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ನೆರವಾಗಲಿದೆ. ಕೊಹ್ಲಿ ಜತೆಗೆ ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ ಪೂಜಾರ ಕಳೆದ ಬಾರಿಯೂ ದಕ್ಷಿಣ ಆಫ್ರಿಕಾಗೆ ಸವಾಲೊಡ್ಡಿದ್ದರು.
ಇದನ್ನೇ ಉಲ್ಲೇಖ ಮಾಡಿರುವ ನಾಯಕ ಕೊಹ್ಲಿ ಸಹ ಬೌಲಿಂಗ್ ಹಾಗೂ ಬ್ಯಾಟಿಂಗ್ ಪಡೆ ಹೆಚ್ಚು ಅನುಭವ ಸಂಪತ್ತನ್ನು ಹೊಂದಿದ್ದು, ಸವಾಲುಗಳನ್ನು ಸ್ವೀಕರಿಸಲು ಸಜ್ಜಾಗಿದ್ದೇವೆ ಎಂದಿದ್ದಾರೆ.
ಸರಿಯಾದ ಮನೋಸ್ಥಿತಿ ಇಲ್ಲದಿದ್ದರೆ ಭಾರತೀಯ ಪರಿಸ್ಥಿತಿಯಲ್ಲೂ ಆಡುವುದು ಕಷ್ಟ. ಹಾಗಾಗಿ ವಾತಾವರಣ ಯಾವುದೆಂಬುದು ಮುಖ್ಯವಲ್ಲ. ಮುಂದಿನ ಸರಣಿಯನ್ನು ಎದುರು ನೋಡುತ್ತಿರುವುದು ಕೊಹ್ಲಿ ವಿವರಿಸಿದರು.
ಈ ಮಹತ್ತರ ಕನಸು ಕಟ್ಟಿಕೊಂಡಿರುವ ವಿರಾಟ್ ಕೊಹ್ಲಿ ಪಡೆ ತಾವೇಕೆ ಟೆಸ್ಟ್ ಕ್ರಿಕೆಟ್ನಲ್ಲಿ ಅಗ್ರ ಸ್ಥಾನದಲ್ಲಿದ್ದೇವೆ ಎಂಬುದನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾ ಪರ್ಯಟನೆಯನ್ನು ಕೈಗೊಂಡಿದೆ.
ಜನವರಿ 5ರಿಂದ ಆರಂಭವಾಗಲಿರುವ ಟೂರ್ನಿಯಲ್ಲಿ ಒಟ್ಟು ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿದೆ.
ಪ್ರಮುಖವಾಗಿಯೂ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿರುವ ಟೀಮ್ ಇಂಡಿಯಾದಲ್ಲಿರುವ ಪ್ರಮುಖ ಬ್ಯಾಟ್ಸ್ಮನ್ಗಳು ಸೇರಿದಂತೆ ಬೌಲರ್ಗಳು ಕಳೆದ ಕೆಲವು ವರ್ಷಗಳಿಂದ ಜತೆಯಾಗಿ ಆಡುತ್ತಿರುವುದು ದನಾತ್ಮಕ ಅಂಶವಾಗಿದೆ.
ಅತ್ತ ಮಾರ್ನೆ ಮಾರ್ಕೆಲ್, ಪಿಲಾಂಡರ್, ಕಗಿಸೋ ರಬಡ ಹಾಗೂ ಡೇಲ್ ಸ್ಟೈನ್ ಅವರಂತಹ ಬಿಗು ದಾಳಿಗಳನ್ನು ಎದುರಿಸಬೇಕಿದೆ.
2013ನೇ ಸಾಲಿನಲ್ಲೂ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಪ್ರಮುಖ ಆಟಗಾರರೂ ಈಗಲೂ ಟೀಮ್ ಇಂಡಿಯಾ ಭಾಗವಾಗಿರುವುದು ವಾತಾವರಣವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ನೆರವಾಗಲಿದೆ. ಕೊಹ್ಲಿ ಜತೆಗೆ ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ ಪೂಜಾರ ಕಳೆದ ಬಾರಿಯೂ ದಕ್ಷಿಣ ಆಫ್ರಿಕಾಗೆ ಸವಾಲೊಡ್ಡಿದ್ದರು.
ಇದನ್ನೇ ಉಲ್ಲೇಖ ಮಾಡಿರುವ ನಾಯಕ ಕೊಹ್ಲಿ ಸಹ ಬೌಲಿಂಗ್ ಹಾಗೂ ಬ್ಯಾಟಿಂಗ್ ಪಡೆ ಹೆಚ್ಚು ಅನುಭವ ಸಂಪತ್ತನ್ನು ಹೊಂದಿದ್ದು, ಸವಾಲುಗಳನ್ನು ಸ್ವೀಕರಿಸಲು ಸಜ್ಜಾಗಿದ್ದೇವೆ ಎಂದಿದ್ದಾರೆ.
ಸರಿಯಾದ ಮನೋಸ್ಥಿತಿ ಇಲ್ಲದಿದ್ದರೆ ಭಾರತೀಯ ಪರಿಸ್ಥಿತಿಯಲ್ಲೂ ಆಡುವುದು ಕಷ್ಟ. ಹಾಗಾಗಿ ವಾತಾವರಣ ಯಾವುದೆಂಬುದು ಮುಖ್ಯವಲ್ಲ. ಮುಂದಿನ ಸರಣಿಯನ್ನು ಎದುರು ನೋಡುತ್ತಿರುವುದು ಕೊಹ್ಲಿ ವಿವರಿಸಿದರು.