ಆ್ಯಪ್ನಗರ

ಸುಜಿತ್‌ ವಿಲ್ಸನ್‌ ಸಾವಿಗೆ ಕಂಬನಿ ಮಿಡಿದ ಕ್ರಿಕೆಟರ್ಸ್‌

ಕೊಳವೆ ಬಾವಿಯೊಳಗೆ ಬಿದ್ದು 90 ಅಡಿ ಆಳದಲ್ಲಿ ಸಿಲುಕಿದ್ದ 2 ವರ್ಷದ ಬಾಲಕ ಸುಜಿತ್‌ ವಿಲ್ಸನ್‌ ಅವರನ್ನು ರಕ್ಷಿಸಲು ನಡೆಸಲಾದ ಕಾರ್ಯಾಚರಣೆ ವಿಫಲಗೊಂಡ ಹಿನ್ನೆಲೆಯಲ್ಲಿ ಕ್ರೀಡಾ ತಾರೆಯರು ಟ್ವಿಟರ್‌ ಮೂಲಕ ಕಂಬನಿ ಮಿಡಿದಿದ್ದಾರೆ.

Vijaya Karnataka Web 29 Oct 2019, 5:14 pm
ಹೊಸದಿಲ್ಲಿ: ಬೋರ್‌ವೆಲ್‌ಗೆ ಬಿದ್ದು ಮೃತಪಟ್ಟ ತಮಿಳುನಾಡು ಮೂಲದ 2 ವರ್ಷದ ಬಾಲಕ ಸುಜಿತ್‌ ವಿಲ್ಸನ್‌ ಸಾವಿಗೆ ಕ್ರೀಡಾ ಜಗತ್ತು ಗುರುವಾರ ಕಂಬನಿ ಮಿಡಿದಿದೆ.
Vijaya Karnataka Web Sujith Wilson 2019


ತಮಿಳುನಾಡಿನ ತಿರುಚನಾಪಳ್ಳಿಯ ನಡುಕಟ್ಟುಪಟ್ಟಿ ಗ್ರಾಮದ ಬೋರ್ವೆಲ್‌ ಒಂದಕ್ಕೆ ಅಕ್ಟೋಬರ್‌ 25ರ ಸಂಜೆ 5.30ಕ್ಕೆ ಬಿದ್ದ ಬಾಲಕ ಸುಜಿತ್‌ ಆರಂಭದಲ್ಲಿ 30 ಅಡಿ ಆಳದಲ್ಲಿ ಸಿಲುಕಿದ್ದ. ಬಳಿಕ 90 ಅಡಿಗಳ ವರೆಗೆ ಜಾರಿದ್ದರಿಂದ ಬರೋಬ್ಬರಿ 80 ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆ ಫಲಕಾರಿಯಾಗಲಿಲ್ಲ. ಬಳಿಕ ಸುಜಿತ್‌ ಮೃತ ದೇಹವನ್ನು ಹೊರ ತೆಗೆಯಲಾಯಿತು.

ಶಕಿಬ್‌ ಸ್ವಭಾವ ಅವರ ವೃತ್ತಿ ಬದುಕನ್ನೇ ಅಂತ್ಯಗೊಳಿಸಬಹುದು ಎಂದ ಬಾಂಗ್ಲಾ ಕ್ರಿಕೆಟ್‌ ಮುಖ್ಯಸ್ಥ

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಮೂಲಕ ಸಂತಾಪ ಹೊರಹಾಕಿರುವ ಕ್ರೀಡಾ ಪಟುಗಳ ಪೈಕಿ ತಮಿಳು ನಾಡಿನ ಸ್ಟಾರ್‌ ಬೌಲರ್‌ ಆರ್‌. ಅಶ್ವಿನ್‌ ಮುಂದಿದ್ದಾರೆ. ಅಶ್ವಿನ್‌ ತಮ್ಮ ಟ್ವಿಟರ್‌ ಖಾತೆ ಮೂಲಕ "ಸುಜಿತ್‌ ಆತ್ಮಕ್ಕೆ ಶಾಂತಿ ಸಿಗಲಿ. ಇದೊಂದು ಕೆಟ್ಟ ಮುಂಜಾನೆ. ಈ ರೀತಿಯ ದುರ್ಘಟನೆಗಳು ಮುಂದೆಂದೂ ಆಗದಂತೆ ಆಶಿಸೋಣ," ಎಂದು ಸಂತಾಪ ಹೇಳಿದ್ದಾರೆ.

"ಸುಜಿತ್‌ ಸಾವಿನ ಸುದ್ದಿಯಿಂದ ಬಹಳ ಬೇಸರವಾಗಿದೆ. ಆತನ ಕುಟುಂಬದವರಿಗೆ ಈ ನೋವು ತಡೆದುಕೊಳ್ಳುವ ಶಕ್ತಿ ಸಿಗಲಿ. ಸುಜಿತ್‌ ಆತ್ಮಕ್ಕೆ ಶಾಂತಿ ಸಿಗಲಿ," ಎಂದು ತಮಿಳುನಾಡು ಮೂಲದ ಟೀಮ್‌ ಇಂಡಿಯಾ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಟ್ವೀಟ್‌ ಮಾಡಿದ್ದಾರೆ. ಇದೇ ವೇಳೆ 2019ರ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ರನ್ನರ್‌ಅಪ್‌ ಪಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಕೂಡ ಟ್ವೀಟ್‌ ಮಾಡಿದ್ದು, "ಈ ರೀತಿಯ ದುರ್ಘಟನೆಗಳು ಮುಂದೆ ನಡೆಯದದೇ ಇರಲಿ. ಸುಜಿತ್‌ ಕ್ಷಮೆಯಿರಲಿ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ," ಎಂದು ಕಂಬನಿ ಮಿಡಿದಿದೆ.

ಬುಮ್ರಾ 'ಕಮಿಂಗ್‌ ಸೂನ್‌': ಸೋಷಿಯಲ್‌ ಮೀಡಿಯಾದಲ್ಲಿ ಸಂದೇಶ ರವಾನಿಸಿದ ಬೂಮ್‌ ಬೂಮ್‌

90 ಅಡಿ ಆಳದಿಂದ ಬಾಲಕನನ್ನು ಹೊರ ತೆಗೆಯಲು ಹರ ಸಾಹಸನ ನಡೆಯುತ್ತಿರುವಾಗಲೇ ಸುಜಿತ್‌ನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಬಳಿಕ ಇನ್ನೇನು ಕೊಳೆಯಲು ಆರಂಭಿಸಿದ್ದ ಆತನ ಮೃತ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ರಕ್ಷಣಾ ಕಾಯಾಚರಣೆಗಾಗಿ ಕೊರೆಯಲಾಗಿರುವ ಸ್ಥಳ ಮತ್ತು ಬೋರ್‌ವೆಲ್‌ ಎರಡನ್ನೂ ಮುಚ್ಚಲಾಗುವುದು ಎಂದು ಅಧಿಕಾರಿಗಳು ಇದೇ ವೇಳೆ ತಿಳಿಸಿದ್ದಾರೆ.

ಮೊದಲ ಟಿ20 ಪಂದ್ಯಕ್ಕೆ 'ಹೈ-ಅಲರ್ಟ್'; ಹಿಟ್ ಲಿಸ್ಟ್‌ನಲ್ಲಿ ವಿರಾಟ್ ಕೊಹ್ಲಿ?

ಅಕ್ಟೋಬರ್‌ 26ರಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಬಾಲಕನನ್ನು ಕೊಳವೆ ಬಾವಿಯಿಂದ ಹೊರತೆಗೆಯಲು ನಡೆಸಲಾದ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದ ಕಾರಣ ರಾಷ್ಟ್ರೋಯ ವಿಪತ್ತು ನಿರ್ವಹಣಾ ಪಡೆಗೆ ಕರೆ ನೀಡಲಾಗಿತ್ತು.




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌