ಆ್ಯಪ್ನಗರ

ಶ್ರೀಶಾಂತ್ ಬೇರೆ ದೇಶದ ಪರ ಆಡಲು ಸಾಧ್ಯವಿಲ್ಲ: ಬಿಸಿಸಿಐ ಖಡಕ್ ನುಡಿ

ಆಜೀವ ನಿಷೇಧ ಶಿಕ್ಷೆ ಜಾರಿಯಲ್ಲಿರುವ ಕೇರಳ ವೇಗಿ ಎಸ್. ಶ್ರೀಶಾಂತ್ ಬೇರೆ ದೇಶದ ಪರ ಆಡಲು ಸಾಧ್ಯವಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಖಡಕ್ ಮಾತುಗಳನ್ನಾಡಿದೆ.

ಟೈಮ್ಸ್ ಆಫ್ ಇಂಡಿಯಾ 21 Oct 2017, 3:09 pm
ಹೊಸದಿಲ್ಲಿ: ಆಜೀವ ನಿಷೇಧ ಶಿಕ್ಷೆ ಜಾರಿಯಲ್ಲಿರುವ ಕೇರಳ ವೇಗಿ ಎಸ್. ಶ್ರೀಶಾಂತ್ ಬೇರೆ ದೇಶದ ಪರ ಆಡಲು ಸಾಧ್ಯವಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಖಡಕ್ ಮಾತುಗಳನ್ನಾಡಿದೆ.
Vijaya Karnataka Web sreesanth cannot play for any other country bcci
ಶ್ರೀಶಾಂತ್ ಬೇರೆ ದೇಶದ ಪರ ಆಡಲು ಸಾಧ್ಯವಿಲ್ಲ: ಬಿಸಿಸಿಐ ಖಡಕ್ ನುಡಿ


2013 ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಸಂಬಂಧ ಬಿಸಿಸಿಐನಿಂದ ಶ್ರೀಶಾಂತ್, ಆಜೀವ ನಿಷೇಧಕ್ಕೊಳಗಾಗಿದ್ದರು. ಬಳಿಕ ಶ್ರೀಶಾಂತ್ ತಾತ್ಕಾಲಿಕ ಗೆಲುವು ದಾಖಲಿಸಿದರೂ ಕೇರಳ ಹೈಕೋರ್ಟ್ ನೀಡಿರುವ ನಿರ್ಣಾಯಕ ತೀರ್ಪಿನಲ್ಲಿ ಬಿಸಿಸಿಐ ಆಜೀವ ನಿಷೇಧ ತೀರ್ಪನ್ನು ಎತ್ತಿ ಹಿಡಿದಿತ್ತು.

ಇದರಿಂದ ತೀರಾ ನಿರಾಸೆಗೊಳಗಾಗಿದ್ದ ಶ್ರೀಶಾಂತ್ ತಾವು ವಿದೇಶಕ್ಕೆ ಹೋಗಿ ಬೇರೆ ದೇಶದ ಪರ ಆಡಲಿದ್ದೇನೆಂದು ಹೇಳಿದ್ದರು.

ಬಿಸಿಸಿಐ ನಾಮಂಕಿತ ಅಧ್ಯಕ್ಷ ಸಿಕೆ ಖನ್ನಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಐಸಿಸಿ ನಿಯಮಾನುಸಾರವಾಗಿ ಶ್ರೀಶಾಂತ್ ಬೇರೆ ದೇಶದ ಪರ ಆಡಲು ಸಾಧ್ಯವಿಲ್ಲ. ಐಸಿಸಿ ನಿಯದನ್ವಯ ಮಾತೃ ಮಂಡಳಿಯಿಂದ ನಿಷೇಧಕ್ಕೊಳಗಾಗಿರುವ ಯಾವುದೇ ಆಟಗಾರ ಬೇರೆ ಸದಸ್ಯ ರಾಷ್ಟ್ರದ ಪರವಾಗಿಯೂ ಆಡಲು ಸಾಧ್ಯವಿಲ್ಲ. ನಿಮಯಗಲು ಮತ್ತು ಕಾನೂನು ಕ್ರಮಗಳು ತುಂಬಾನೇ ಸ್ಪಷ್ಟವಾಗಿದೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌