ಆ್ಯಪ್ನಗರ

ಲಂಕನ್ ಅಭಿಮಾನಿಗಳಿಂದ ಭಾರತಕ್ಕೆ ಬೆಂಬಲ

ನಿಧಹಸ್ ತ್ರಿಕೋನ ಟ್ವೆಂಟಿ-20 ಸರಣಿಯಲ್ಲಿ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಣ ಆಟಗಾರರ ಮಧ್ಯೆ ಭಾರಿ ವಾಗ್ವಾದ ನಡೆದಿತ್ತು.

Vijaya Karnataka Web 18 Mar 2018, 9:07 pm
ಕೊಲಂಬೊ: ನಿಧಹಸ್ ತ್ರಿಕೋನ ಟ್ವೆಂಟಿ-20 ಸರಣಿಯಲ್ಲಿ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಣ ಆಟಗಾರರ ಮಧ್ಯೆ ಭಾರಿ ವಾಗ್ವಾದ ನಡೆದಿತ್ತು.
Vijaya Karnataka Web sri lankan fans come in large numbers to support india
ಲಂಕನ್ ಅಭಿಮಾನಿಗಳಿಂದ ಭಾರತಕ್ಕೆ ಬೆಂಬಲ


ಬಾಂಗ್ಲಾದೇಶ ಆಟಗಾರರ ವರ್ತನೆ ಬಗ್ಗೆ ಭಾರಿ ಟೀಕೆಗಳು ಎದಿದ್ದವು. ಅಲ್ಲದೆ ಶಿಸ್ತಿನ ಕ್ರಮ ಕೈಗೊಂಡಿದ್ದ ಐಸಿಸಿ ಬಾಂಗ್ಲಾದೇಶ ನಾಯಕ ಶಕಿಬ್ ಅಲ್ ಹಸನ್ ಹಾಗೂ ಮೀಸಲು ಆಟಗಾರ ನುರುಲ್ ಹಸನ್ ಮೇಲೆ ಶಿಸ್ತಿನ ಕ್ರಮ ಕೈಗೊಂಡಿತ್ತು.

ಬಾಂಗ್ಲಾದೇಶ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ ಲಂಕಾ ಎರಡು ವಿಕೆಟುಗಳ ಅಂತರದ ರೋಚಕ ಸೋಲಿಗೆ ಒಳಗಾಗಿತ್ತು. ಇದರಿಂದಾಗಿ ಟೂರ್ನಿಯಿಂದಲೇ ನಿರ್ಗಮಿಸುವಂತಾಗಿತ್ತು.

ಇದು ಅಭಿಮಾನಿಗಳಲ್ಲಿ ಭಾರಿ ನಿರಾಸೆ ಕಾದಿತ್ತು. ಹಾಗಿದ್ದರೂ ಭಾನುವಾರದಂದು ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ವೀಕ್ಷಿಸಲು ಸಾವಿರಾರು ಲಂಕನ್ ಅಭಿಮಾನಿಗಳು ಆಗಮಿಸಿದ್ದರು.

ತ್ರಿವರ್ಣ ಬಾವುಟವನ್ನು ಹಿಡಿದ ಲಂಕಾ ಅಭಿಮಾನಿಗಳು ಭಾರತದ ಪರ ಜೈಕಾರ ಕೂಗಿದರು. ಅಲ್ಲದೆ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡುವಾಗ 'ರೋಹಿತ್ ರೋಹಿತ್' ಎಂದು ಕೂಗಾಡಿದರು.

ಬಾಂಗ್ಲಾ ಆಟಗಾರರ ವರ್ತನೆ ಬಗ್ಗೆ ಭಾರಿ ಟೀಕೆಗಳು ವ್ಯಕ್ತವಾಗಿದ್ದರು. ಇದರಂತೆ ಲಂಕನ್ ಅಭಿಮಾನಿಗಳು ಸಹ ಭಾರತದ ಗೆಲುವನ್ನು ಬಯಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌