ಆ್ಯಪ್ನಗರ

ಕೋಹ್ಲಿ ಡಿಕ್ಲೇರ್ ಘೋಷಿಸಿದಾಗ ಲಂಕಾ ಆಟಗಾರರಿಂದ ಗೇಲಿ!

ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಣ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಹೈಡ್ರಾಮಾ ಸೃಷ್ಟಿಯಾಗಿತ್ತು.

Vijaya Karnataka Web 3 Dec 2017, 6:26 pm
ಹೊಸದಿಲ್ಲಿ: ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಣ ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಹೈಡ್ರಾಮಾ ಸೃಷ್ಟಿಯಾಗಿತ್ತು.
Vijaya Karnataka Web srilankan players animating while virat kohli declares indian innings
ಕೋಹ್ಲಿ ಡಿಕ್ಲೇರ್ ಘೋಷಿಸಿದಾಗ ಲಂಕಾ ಆಟಗಾರರಿಂದ ಗೇಲಿ!


ಊಟದ ವಿರಾಮದ ಬಳಿಕ ಮುಖಕ್ಕೆ ಮಾಸ್ಕ್ ಧರಿಸಿ ಮೈದಾನಕ್ಕಿಳಿದಿದ್ದ ಲಂಕಾ ಆಟಗಾರರು ವಾಯು ಮಾಲಿನ್ಯ ಕಾರಣವೊಡ್ಡಿ ಪಂದ್ಯಕ್ಕೆ ಅಡಚಣೆಯನ್ನುಂಟು ಮಾಡಿದರು.

ಬಳಿಕ ಪಂದ್ಯ ಮುಂದುವರಿಸಿದರೂ ಪಂದ್ಯದ 125ನೇ ಹಾಗೂ 127ನೇ ಓವರ್‌ನಲ್ಲಿ ಗಾಯಾಳು ವೇಗಿಗಳಾದ ಲಹಿರು ಗಮನೆ ಹಾಗೂ ಸುರಂಗ ಲಕ್ಮಲ್ ಸೇವೆಯಿಂದ ವಂಚಿತವಾಯಿತು.

ಇದರಿಂದಾಗಿ ಪದೇ ಪದೇ ಅಂಪೈರ್ ಬಳಿ ತೆರಳಿದ ಲಂಕಾ ನಾಯಕ ನೆಪವೊಡ್ಡಿದ್ದರು. ಅಷ್ಟೇ ಯಾಕೆ ಲಂಕಾ ತಂಡವು ಆನ್ ಫೀಲ್ಡ್‌ನಲ್ಲಿ ಓರ್ವ ಆಟಗಾರನ ಕೊರತೆಯನ್ನು ಎದುರಿಸಿತ್ತು.

ಈ ಸಂದರ್ಭದಲ್ಲಿ ಭಾರತ ಕೋಚ್ ರವಿಶಾಸ್ತ್ರಿ ಅಂಪೈರ್‌ಗಳ ಜತೆ ಸಮಾಲೋಚನೆ ನಡೆಸುವುದು ಕಂಡುಬಂದಿತ್ತು. ಲಂಕಾ ವರ್ತನೆಯಿಂದ ಬೆಸೆತ್ತ ಕೋಹ್ಲಿ ಡಿಕ್ಲೇರ್ ಘೋಷಣೆಯ ನಿರ್ಧಾರ ಮಾಡಿದರು.



ಆದರೆ ಪೆವಿಲಿಯನ್‌ಗೆ ಮರಳುತ್ತಿದ್ದ ಲಂಕಾ ಆಟಗಾರರು ಹಾಸ್ಯ ಚಟಾಕಿ ಹಾರಿಸುವುದು ಮತ್ತಷ್ಟು ವಿವಾದಗಳಿಗೆ ಕಾರಣವೊಡ್ಡಿದೆ. ಆಗಲೇ ಕೋಹ್ಲಿ ಡಬಲ್ ಸೆಂಚುರಿಯಿಂದ ಸುಸ್ತಾಗಿ ಹೋಗಿರುವ ಲಂಕಾ ಉದ್ದೇಶಪೂರ್ವಕವಾಗಿ ಮಾಡಿರುವ ಕೃತ್ಯ ಇದುವೇ ಎಂಬುದು ಸಂಶಯಕ್ಕೀಡು ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌