ಆ್ಯಪ್ನಗರ

ಪಿಂಕ್‌ ಬಾಲ್‌ ಟೆಸ್ಟ್‌ ವೇಳೆ ಮೂರ್ಖನಂತೆ ಕಂಡೆ ಎಂದ ಚೆಸ್‌ ಕಿಂಗ್‌ ಮ್ಯಾಗ್ನಸ್‌ ಕಾರ್ಲ್‌ಸನ್‌!

ನಾರ್ವೆಯ ಗ್ರ್ಯಾಂಡ್‌ಮಾಸ್ಟರ್‌ ಮ್ಯಾಗ್ನಸ್‌ ಕಾರ್ಲ್‌ಸನ್‌, ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ವಿರುದ್ಧದ ಡೇ-ನೈಟ್‌ ಟೆಸ್ಟ್‌ ಪಂದ್ಯ ವೀಕ್ಷಿಸಿದರ ಅನುಭವ ಹಂಚಿಕೊಂಡಿದ್ದಾರೆ. ಆದರೆ, ಚೆಸ್ಟ್‌ ಕಿಂಗ್‌ ಅನುಭವ ಮಾತ್ರ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

Vijaya Karnataka Web 25 Nov 2019, 5:47 pm
ಕೋಲ್ಕತಾ: ಹಾಲಿ ವಿಶ್ವ ಚಾಂಪಿಯನ್‌ ನಾರ್ವೆಯ ಗ್ರ್ಯಾಂಡ್‌ಮಾಸ್ಟರ್‌ ಮ್ಯಾಗ್ನಸ್‌ ಕಾರ್ಲ್‌ಸನ್‌, ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ವಿರುದ್ಧದ ಡೇ-ನೈಟ್‌ ಟೆಸ್ಟ್‌ ಪಂದ್ಯ ವೀಕ್ಷಿಸಿದರ ಅನುಭವ ಹಂಚಿಕೊಂಡಿದ್ದಾರೆ. ಆದರೆ, ಚೆಸ್ಟ್‌ ಕಿಂಗ್‌ ಅನುಭವ ಮಾತ್ರ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
Vijaya Karnataka Web Magnus Carlsen 2019


ಪಂದ್ಯದ ಎರಡನೇ ದಿನವಾದ ಶನಿವಾರ ಮಾಜಿ ವಿಶ್ವ ಚಾಂಪಿಯನ್‌ ಭಾರತದ ಗ್ರ್ಯಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್‌ ಅವರೊಟ್ಟಿಗೆ ಮ್ಯಾಗ್ನಸ್‌ ಕೂಡ ಈಡನ್‌ ಗಾರ್ಡನ್ಸ್‌ಗೆ ಆಗಮಿಸಿ ಬೆಲ್‌ ಬಾರಿಸುವ ಮೂಲಕ ದಿನದಾಟಕ್ಕೆ ಚಾಲನೆ ನೀಡಿದ್ದರು.

ಇದೀಗ ಹಿಂದು ಪತ್ರಿಕೆಗೆ ನೀಡಿರುವ ಸಂದರ್ಷನವೊಂದರಲ್ಲಿ ತಮ್ಮ ಈ ಅನುಭವವನ್ನು ಮ್ಯಾಗ್ನಸ್‌ ಹಂಚಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್‌ ಕಾಶಿಯಾಗಿರುವ ಈಡನ್‌ ಗಾರ್ಡನ್ಸ್‌ನಲ್ಲಿ ಡೇ-ನೈಟ್‌ ಟೆಸ್ಟ್‌ ಪಂದ್ಯ ವೀಕ್ಷಿಸಿ ಕ್ರಿಕೆಟ್‌ ಆಟದ ಕುರಿತಾಗಿ ಸಾಕಷ್ಟು ತಿಳಿದುಕೊಂಡಿರುವುದಾಗಿ ಹೇಳಿರುವ 28 ವರ್ಷದ ಚೆಸ್‌ ಪಟು, ಇದೇ ವೇಳೆ ಆನಂದ್‌ ಬೆಲ್‌ ಬಾರಿಸುವ ವೇಳೆ ತಾವೊಬ್ಬ ಮೂರ್ಖನಂತೆ ಪಕ್ಕದಲ್ಲಿ ನಿಂತಿದ್ದ ಅನುಭವವಾಯಿತು ಎಂದು ಹೇಳಿಕೊಂಡಿದ್ದಾರೆ.

ಚಾರಿತ್ರಿಕ ಹಗಲು-ರಾತ್ರಿ ಟೆಸ್ಟ್‌ 17 ಗಂಟೆಗಳಲ್ಲೇ ಮುಕ್ತಾಯ

"ಆಗಿದ್ದೇನೆಂದರೆ, ಆನಂದ್‌ ಅಲ್ಲಿ ಬೆಲ್‌ ಬಾರಿಸಿದರು. ನಾನು ಪಕ್ಕದಲ್ಲಿ ಮೂರ್ಖನಂತೆ ನಿಂತಿದ್ದೆ. ಇದೇ ಪಂದ್ಯದ ಹೈಲೈಟ್‌. ಆದರೂ ಕ್ರಿಕೆಟ್‌ ಆಟದ ಕುರಿತಾಗಿ ಸಾಕಷ್ಟು ಕಲಿಯುಕೊಂಡಿದ್ದೇನೆ," ಎಂದು ಮ್ಯಾಗ್ನಸ್‌ ಹೇಳಿದ್ದಾರೆ.

ಭಾರತ ತಂಡದ ಮೊತ್ತ ಮೊದಲ ಪಿಂಕ್‌ ಬಾಲ್‌ ಟೆಸ್ಟ್‌ಗೆ ಹಲವಾರು ಗಣ್ಯಾತಿ ಗಣ್ಯರಿಗೆ ಬಿಸಿಸಿಐನ ನೂತನ ಅಧ್ಯಕ್ಷ ಸೌರವ್‌ ಗಂಗೂಲಿ ಆಹ್ವಾನ ನೀಡಿದ್ದರು. ಕ್ರಿಕೆಟ್‌ ಹೊರತಾಗಿ ಹಲವು ಕ್ರೀಡಾ ತಾರೆಗಳಿಗೂ ಈ ಪಂದ್ಯ ವೀಕ್ಷಣೆಗೆ ವಿಶೇಷ ಆಹ್ವಾನ ನೀಡಲಾಗಿತ್ತು. ಇನ್ನು ಕೋಲ್ಕತಾದಲ್ಲಿ ಅದೇ ಸಮಯದಲ್ಲಿ ಅಂತಾರಾಷ್ಟ್ರೀಯ ಚೆಸ್ ಟೂರ್ನಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ, ಪಂದ್ಯದ ಎರಡನೇ ದಿನದಾಟಕ್ಕೆ ಚಾಲನೆ ನೀಡಲು ಹಾಲಿ ಮತ್ತು ಮಾಜಿ ವಿಶ್ವ ಚಾಂಪಿಯನ್‌ ಚೆಸ್‌ ಪಟುಗಳಿಗೆ ಆಹ್ವಾನಿಸಲಾಗಿತ್ತು. ಸೌರವ್‌ ಗಂಗೂಲಿ ಅವರ ಜೊತೆಗೆನಿಂತು ಬೆಲ್‌ ಬಾರಿಸುವ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.

'ಪಿಂಕ್ ಟೆಸ್ಟ್' ರೂವಾರಿ ಸೌರವ್ ಗಂಗೂಲಿ ಪಾಲಿಗೆ ಚೊಚ್ಚಲ ಹಗಲು-ರಾತ್ರಿ ಪಂದ್ಯ ಹೇಗಿತ್ತು ಗೊತ್ತಾ?

ಪಂದ್ಯದಲ್ಲಿ ಅಕ್ಷರಶಃ ಅಧಿಕಾರಯುತ ಪ್ರದರ್ಶನ ನೀಡಿದ ವಿಶ್ವದ ನಂ.1 ಟೆಸ್ಟ್‌ ತಂಡ ಭಾರತ, ಕೇವಲ ಎರಡೂವರೆ ದಿನಗಳ ಅಂತರದಲ್ಲಿ ಪ್ರವಾಸಿ ಪಡೆಯ ಹೆಡೆಮುರಿಕಟ್ಟಿ ಇನಿಂಗ್ಸ್‌ ಮತ್ತು 46 ರನ್‌ಗಳ ಅಮೋಘ ಗೆಲುವು ತನ್ನದಾಗಿಸಿಕೊಂಡಿತು. ಈ ಮೂಲಕ ಹತ್ತು ಹಲವು ದಾಖಲೆಗಳನ್ನು ಕೂಡ ಬರೆಯಿತು. ಭಾರತ ತಂಡ ಇದೀಗ ತಾಯ್ನಾಡಿನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ತಲಾ 3 ಪಂದ್ಯಗಳ ಟಿ20 ಮತ್ತು ಏಕದಿನ ಕ್ರಿಕೆಟ್‌ ಸರಣಿಗಳನ್ನು ಆಡಲಿದ್ದು, ಮೊದಲ ಟಿ20 ಪಂದ್ಯ ಡಿ.6ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌