ಆ್ಯಪ್ನಗರ

'ಅನಿಲ್‌ ಕುಂಬ್ಳೆ ದಾಖಲೆ ಮುರಿದಿದ್ದ ಬಗ್ಗೆ ಗೊತ್ತೇ ಇರಲಿಲ್ಲ' : 2014ರ ಸ್ಮರಣೀಯ ಪಂದ್ಯ ನೆನೆದ ಸ್ಟುವರ್ಟ್‌ ಬಿನ್ನಿ!

2014ರ ಬಾಂಗ್ಲಾದೇಶ ವಿರುದ್ಧ ಆರು ವಿಕೆಟ್‌ ಪಡೆಯುವ ಮೂಲಕ ಅನಿಲ್‌ ಕುಂಬ್ಳೆ ದಾಖಲೆಯನ್ನು ಮುರಿದಿದ್ದದ ಬಗ್ಗೆ ಸ್ಟುವರ್ಟ್‌ ಬಿನ್ನಿ ಸ್ಮರಿಸಿಕೊಂಡಿದ್ದಾರೆ. ಅಂದು ಸ್ವತಃ ಅನಿಲ್‌ ಭಾಯ್‌ ಸಂದೇಶ ಮಾಡಿದ್ದರು ಎಂದು ಹೇಳಿದರು.

Vijaya Karnataka Web 25 Jul 2020, 10:02 pm
ಬೆಂಗಳೂರು: ಕರ್ನಾಟಕದ ಸ್ಟಾರ್‌ ಆಲ್‌ರೌಂಡರ್‌ ಸ್ಟುವರ್ಟ್‌ ಬಿನ್ನಿ ಹೊಸ ಭರವಸೆಯೊಂದಿಗೆ ಟೀಮ್‌ ಇಂಡಿಯಾಗೆ ಪದಾರ್ಪಣೆ ಮಾಡಿದ್ದರು. ಆದರೆ, ಅವರು ದೀರ್ಘಕಾಲ ಭಾರತ ತಂಡದಲ್ಲಿ ಉಳಿಯುವಲ್ಲಿ ವಿಫಲರಾದರು. ಮೂರೂ ಸ್ವರೂಪದಲ್ಲಿ ರಾಷ್ಟ್ರೀಯ ತಂಡದ ಪರ ಆಡಿದ್ದು ಕೇವಲ 23 ಪಂದ್ಯಗಳಲ್ಲಿ ಮಾತ್ರ.
Vijaya Karnataka Web Binny


2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಬಿನ್ನಿ, ಓಡಿಐ ಪಂದ್ಯವೊಂದರಲ್ಲಿ ಅತ್ಯುತ್ತಮ ಬೌಲಿಂಗ್‌ ಮಾಡುವ ಮೂಲಕ ವಿಶಿಷ್ಠ ದಾಖಲೆಗೆ ಭಾಜನರಾಗಿದ್ದರು. ಆ ವೇಳೆ ಭಾರತ ತಂಡದ ಮಾಜಿ ನಾಯಕ ಹಾಗೂ ಸ್ಪಿನ್ ದಿಗ್ಗಜ ಅನಿಲ್‌ ಕುಂಬ್ಳೆ ಮಾಡಿದ್ದಅಂಭಿನಂದನೆಯ ಸಂದೇಶದ ಬಗ್ಗೆ ಆಲ್‌ರೌಂಡರ್‌ ಇದೀಗ ಬಹಿರಂಗಪಡಿಸಿದ್ದಾರೆ.

2014ರ ಜೂನ್‌ನಲ್ಲಿ ಢಾಕಾದಲ್ಲಿ ನಡೆದಿದ್ದ ಮೂರನೇ ಏಕದಿನ ಪಂದ್ಯದಲ್ಲಿ ಮಳೆ ಬಂದಿದ್ದರಿಂದ ಪಂದ್ಯವನ್ನು 41 ಓವರ್‌ಗಳಿಗೆ ಇಳಿಸಲಾಗಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ, 25.3 ಓವರ್‌ಗಳಿಗೆ 105 ರನ್‌ಗಳಿಗೆ ಆಲೌಟ್‌ ಆಯಿತು. ನಂತರ, ಗುರಿ ಹಿಂಬಾಲಿಸಿದ ಬಾಂಗ್ಲಾದೇಶ 17.4 ಓವರ್‌ಗಳಿಗೆ ಕೇವಲ 58 ರನ್ ಗಳಿಗೆ ಆಲೌಟ್‌ ಆಗುವ ಮೂಲಕ 47 ರನ್‌ಗಳಿಂದ ಸೋಲು ಅನುಭವಿಸಿತು.

200 ವಿಕೆಟ್‌ಗಳನ್ನು ಕಬಳಿಸಿ ವಿಂಡೀಸ್‌ ಎಲೈಟ್‌ ಪಟ್ಟಿ ಸೇರಿದ ಕೇಮರ್‌ ರೋಚ್‌!

ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆಲ್‌ರೌಂಡರ್‌ ಸ್ಟುವರ್ಟ್‌ ಬಿನ್ನಿ, 4.4 ಓವರ್‌ಗಳಿಗೆ ಎರಡು ಮೇಡಿನ್‌, 4 ರನ್‌ ನೀಡಿ 6 ವಿಕೆಟ್‌ಗಳನ್ನು ಪಡೆದು ಬಾಂಗ್ಲಾ ಪತನಕ್ಕೆ ಕಾರಣರಾದರು. ಮುಷ್ಫಿಕರ್‌ ರಹೀಮ್‌, ಮೊಹಮ್ಮದ್‌ ಮಿಥುನ್‌, ಮಹ್ಮುದುಲ್ಲಾ, ನಾಸೀರ್‌ ಹುಸೇನ್‌ ಮಶ್ರಾಫೆ ಮೊರ್ತಾಜ ಹಾಗೂ ನಾಸೀರ್‌ ಹುಸೇನ್‌ ಅವರನ್ನು ಬಾಲಂಗೋಚಿಗಳಂತೆ ಬಿನ್ನಿ ಪೆವಿಲಿಯನ್‌ಗೆ ಅಟ್ಟಿದರು.

ಆ ಪಂದ್ಯದಲ್ಲಿ ಸ್ಟುವರ್ಟ್‌ ಬಿನ್ನಿ ಸ್ಪಿನ್‌ ದಿಗ್ಗಜ ಅನಿಲ್‌ ಕುಂಬ್ಳೆ ಅವರ 21 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಅಂದಿನ ದಿನ ಪ್ರಶಸ್ತಿ ಸ್ವೀಕರಿಸಲು ಹೋಗುವುದಕ್ಕೂ ಮುನ್ನ ಆಲ್‌ರೌಂಡರ್‌ಗೆ ಈ ದಾಖಲೆಯ ಬಗ್ಗೆ ಅರಿವಿರಲಿಲ್ಲ. ಆ ವೇಳೆ ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಬಿನ್ನಿಗೆ ಮಾಡಿದ್ದ ಸಂದೇಶದಲ್ಲಿ ಕರ್ನಾಟಕದವರೇ ಈ ದಾಖಲೆಯನ್ನು ಮುರಿದಿರುವುದು ಸಂತೋಷ ತಂದಿದೆ ಎಂದು ಹೇಳಿದ್ದರು.

"ನಿಮ್ಮನ್ನು ಬೇರೆಯವರೊಂದಿಗೆ ಹೋಲಿಸಬೇಡಿ" : ಯಶಸ್ಸಿನ ಮೂಲಮಂತ್ರ ಜಪಿಸಿದ ದಿ ವಾಲ್‌!

"ಅನಿಲ್‌ ಭಾಯ್‌ ದಾಖಲೆ ಮುರಿದಿದ್ದು ನಿಜಕ್ಕೂ ಒಂಥರಾ ವಿಶೇಷ ಎನಿಸಿತು," ಎಂದು ಹೇಳಿದ ಬಿನ್ನಿ, "ಅಂದಿನ ದಿನ ನಾನು ಪ್ರಶಸ್ತಿ ಪಡೆಯಲು ಹೋಗುವ ತನಕವೂ ದಾಖಲೆ ಮುರಿದಿರುವ ಬಗ್ಗೆ ಗೊತ್ತಿರಲಿಲ್ಲ. ಅನಿಲ್‌ ಕುಂಬ್ಳೆಯಿಂದ ಸಂದೇಶ ಕೂಡ ಬಂದಿತ್ತು. 'ಅಭಿನಂದನೆಗಳು! ಕರ್ನಾಟಕದವರೇ ಒಬ್ಬರು ದಾಖಲೆ ಮುರಿದಿರುವುದರಿಂದ ಸಂತೋಷವಾಗುತ್ತಿದೆ', " ಎಂದು ಸ್ಪೋರ್ಟ್ಸ್‌ಕೀಡಾದೊಂದಿಗೆ ಮಾತನಾಡುವಾಗ ಬಿನ್ನಿ ಈ ವಿಷಯ ಬಹಿರಂಗಪಡಿಸಿದರು.

ದೇಶಿ ಕ್ರಿಕೆಟ್‌ನಲ್ಲಿ ಬೌಲಿಂಗ್‌ ಮಾಡುತ್ತಿದ್ದ ರೀತಿಯಲ್ಲೇ ಆ ಪಂದ್ಯದಲ್ಲಿ ಸ್ಪೆಲ್‌ ಮಾಡಿದ್ದೆ. ಸೀಮ್‌ನಿಂದ ಚೆಂಡನ್ನು ಪಿಚ್‌ ಮಾಡುತ್ತಿದ್ದೆ. ಆ ಪಂದ್ಯದಲ್ಲಿ ನಾಯಕರಾಗಿದ್ದ ಸುರೇಶ್‌ ರೈನಾ, ಟೆಸ್ಟ್ ಲೆನ್ತ್‌ ಬೌಲಿಂಗ್‌ ಮಾಡುವಂತೆ ಹೇಳಿದ್ದರು. ಅದೇ ರೀತಿ ನಾನು ಚೆಂಡನ್ನು ಎಸೆಯುತ್ತಿದ್ದೆ. ಬಾಂಗ್ಲಾ ಬ್ಯಾಟ್ಸ್‌ಮನ್‌ಗಳು ಬೇಗ ವಿಕೆಟ್‌ಗಳನ್ನು ನೀಡಿದರು ಎಂದು ಬಿನ್ನಿ 2014ರ ವಿಶೇಷ ಕ್ಷಣವನ್ನು ಸ್ಮರಿಸಿಕೊಂಡರು.
'ವಯಸ್ಸು ಕೇವಲ ಸಂಖ್ಯೆಗಳಷ್ಟೆ' : ಧೋನಿ ಫಿಟ್‌ ಆಗಿದ್ದರೆ ತಂಡಕ್ಕೆ ಮರಳಲಿ ಎಂದ ಗಂಭೀರ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌