ಆ್ಯಪ್ನಗರ

ಮನೆಯಂಗಣದ ಗೆಲುವು ಮುಖ್ಯ: ಸುನಿಲ್‌ ಗವಾಸ್ಕರ್‌

ಐಪಿಎಲ್‌ನ ಎಲ್ಲಾ ತಂಡಗಳು ತಮ್ಮ ತವರಿನಂಗಣದಲ್ಲಿ ಭದ್ರ ಕೋಟೆಯನ್ನು ಕಟ್ಟಿರುತ್ತವೆ. ಆದರೂ ಕೆಲ ಪಂದ್ಯಗಳಲ್ಲಿ ಸೋಲೆದುರಾಗಬಹುದು. ಅಂದಹಾಗೆ, ಮನೆಯಂಗಣದಲ್ಲಿನ ಒಟ್ಟು 7 ಪಂದ್ಯಗಳಲ್ಲಿ ಕನಿಷ್ಠ ಐದು ಪಂದ್ಯಗಳನ್ನು ಗೆದ್ದರೆ ನಾಕ್‌ಔಟ್‌ ಹಂತಕ್ಕೆ ಅರ್ಹತೆ ಪಡೆಯುವುದು ಸುಲಭ.

ವಿಕ ಸುದ್ದಿಲೋಕ 18 Apr 2017, 9:03 am

ಐಪಿಎಲ್‌ನ ಎಲ್ಲಾ ತಂಡಗಳು ತಮ್ಮ ತವರಿನಂಗಣದಲ್ಲಿ ಭದ್ರ ಕೋಟೆಯನ್ನು ಕಟ್ಟಿರುತ್ತವೆ. ಆದರೂ ಕೆಲ ಪಂದ್ಯಗಳಲ್ಲಿ ಸೋಲೆದುರಾಗಬಹುದು. ಅಂದಹಾಗೆ, ಮನೆಯಂಗಣದಲ್ಲಿನ ಒಟ್ಟು 7 ಪಂದ್ಯಗಳಲ್ಲಿ ಕನಿಷ್ಠ ಐದು ಪಂದ್ಯಗಳನ್ನು ಗೆದ್ದರೆ ನಾಕ್‌ಔಟ್‌ ಹಂತಕ್ಕೆ ಅರ್ಹತೆ ಪಡೆಯುವುದು ಸುಲಭ.

Vijaya Karnataka Web sunil gavaskar column
ಮನೆಯಂಗಣದ ಗೆಲುವು ಮುಖ್ಯ: ಸುನಿಲ್‌ ಗವಾಸ್ಕರ್‌


ಜತೆಗೆ ಮನೆಯಂಗಣದಲ್ಲಿ ಗೆಲ್ಲಲೇ ಬೇಕೆಂಬ ಅಭಿಮಾನಿಗಳ ನಿರೀಕ್ಷೆ ಕೂಡ ಹೆಚ್ಚಿರುತ್ತದೆ. ಎರಡು ವರ್ಷಗಳ ಹಿಂದೆ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡ ತವರಿನಲ್ಲಿ ಸತತವಾಗಿ ಸೋಲನುಭವಿಸುತ್ತಿತ್ತು. ಈ ಸಂದರ್ಭದಲ್ಲಿ ಅಭಿಮಾನಿಗಳು ಸನ್‌ ರೈಸರ್ಸ್‌ ತಂಡ ತನ್ನ ತವರಿನ ಕ್ರೀಡಾಂಗಣ ಬದಲಾಯಿಸುವ ಸಲಹೆ ನೀಡಿದ್ದರು.

ಆರ್‌ಸಿಬಿ ತಂಡ ಇತ್ತೀಚೆಗೆ ತವರಿನಂಗಣದಲ್ಲಿ ಸತತ 2 ಪಂದ್ಯಗಳನ್ನು ಸೋತಿದೆ. ಮೊದಲಿಗೆ ಮುಂಬಯಿ ಇಂಡಿಯನ್ಸ್‌ ತಂಡವನ್ನು ಆರಂಭದಲ್ಲಿ ಕಟ್ಟಿಹಾಕಿಯೂ ಸೋತ ಆರ್‌ಸಿಬಿ, ಬಳಿಕ ಪುಣೆ ವಿರುದ್ಧದ ಪಂದ್ಯದಲ್ಲಿ ಸಾಧಾರಣ ಮೊತ್ತವನ್ನು ಬೆನ್ನತ್ತುವಲ್ಲಿ ವಿಫಲಗೊಂಡಿತು. ತಂಡದ ಬೌಲಿಂಗ್‌ ದುರ್ಬಲವಾಗಿದೆ. ಹೀಗಾಗಿ ಆರ್‌ಸಿಬಿ ತಂಡ ಕ್ರಿಸ್‌ ಗೇಲ್‌ ಬದಲಾಗಿ ಲೆಗ್‌ಸ್ಪಿನ್ನರ್‌ ಸ್ಯಾಮುಯೆಲ್‌ ಬದ್ರಿಗೆ ಸ್ಥಾನ ನೀಡುತ್ತಿದೆ. ಆದರೆ, ಕೊಹ್ಲಿ ಮತ್ತು ಡಿ'ವಿಲಿಯರ್ಸ್‌ ಆಡದೇ ಇದ್ದಲ್ಲಿ ಚಾಲೆಂಜರ್ಸ್‌ ತಂಡ ವೈಫಲ್ಯ ಅನುಭವಿಸುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌