ಆ್ಯಪ್ನಗರ

ಸುದೀರ್ಘ ವಿಶ್ರಾಂತಿ; ಧೋನಿ ವಿರುದ್ಧ ಗರಂ ಆದ ಗವಾಸ್ಕರ್

ಕಳೆದ ವರ್ಷ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ರಂಗದಿಂದ ದೂರವುಳಿದಿದ್ದಾರೆ. ಧೋನಿ ಕಮ್‌ಬ್ಯಾಕ್ ಮಾಡುವರೇ ಅಥವಾ ನಿವೃತ್ತಿ ಸಲ್ಲಿಸುವರೇ ಎಂಬುದು ಸಾಕಷ್ಟು ವದಂತಿಗಳಿಗೆ ಕಾರಣವಾಗಿದೆ. ಈ ಮಧ್ಯೆ ಮಾಜಿ ನಾಯಕ ಸುನಿಲ್ ಗವಾಸ್ಕರ್ ಗರಂ ಆಗಿದ್ದಾರೆ.

Vijaya Karnataka Web 13 Jan 2020, 10:35 am
ಹೊಸದಿಲ್ಲಿ: ಕಳೆದ ವರ್ಷ ಏಕದಿನ ವಿಶ್ವಕಪ್ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ ರಂಗದಿಂದ ದೂರವುಳಿದಿರುವ ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ಬಲಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಸುದೀರ್ಘ ಅವಧಿಯ ವಿಶ್ರಾಂತಿಯಲ್ಲಿದ್ದಾರೆ.
Vijaya Karnataka Web ಮಹೇಂದ್ರ ಸಿಂಗ್ ಧೋನಿ - ಸುನಿಲ್ ಗವಾಸ್ಕರ್


ಚಾಂಪಿಯನ್ ಆಟಗಾರ ಧೋನಿ ಟೀಮ್ ಇಂಡಿಯಾಗೆ ಕಮ್ ಬ್ಯಾಕ್ ಮಾಡುವರೇ ಅಥವಾ ನಿವೃತ್ತಿ ಸಲ್ಲಿಸುವರೇ ಎಂಬುದು ತಿಳಿದು ಬಂದಿಲ್ಲ. ಬಿಸಿಸಿಐ ಹಾಗೂ ಆಯ್ಕೆ ಸಮಿತಿ ಧೋನಿ ಭವಿಷ್ಯದ ಬಗ್ಗೆ ಸ್ಪಷ್ಟತೆಯಿದೆ ಎಂದಷ್ಟೇ ಹೇಳುತ್ತಿದೆ. ಸ್ವತ: ಧೋನಿ ಕೂಡಾ ಸ್ಪಷ್ಟನೆ ನೀಡಿಲ್ಲ. ಇವೆಲ್ಲದರಿಂದ ಮುಂಬರುವ ಟಿ20 ವಿಶ್ವಕಪ್ ಹಿನ್ನಲೆಯಲ್ಲಿ ಭಾರತದ ಯೋಜನೆಗಳಿಗೆ ಹೊಡೆತ ಬೀಳುವ ಸಾಧ್ಯತೆಯಿದೆ.

ಈ ಮಧ್ಯೆ ಮಹಿ ಕ್ರಿಕೆಟ್ ರಂಗದಿಂದ ದೂರವುಳಿದು ಸುದೀರ್ಘ ವಿಶ್ರಾಂತಿ ಪಡೆದಿರುವುದಕ್ಕೆ ಮಾಜಿ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಗರಂ ಆಗಿದ್ದಾರೆ.

ರೋಹಿತ್ ಶರ್ಮಾ, ಮೊಹಮ್ಮದ್ ಶಮಿ ವಾಪಸ್; ಸಂಜು ಸ್ಯಾಮ್ಸನ್‌ಗೆ ಗೇಟ್ ಪಾಸ್

"ಈ ಪ್ರಶ್ನೆಯನ್ನು ನೀವು ಧೋನಿ ಅವರನ್ನೇ ಕೇಳಬೇಕು. 2019 ಜುಲೈ 10ರ ಬಳಿಕ ಭಾರತ ತಂಡದ ಪರ ಆಡುತ್ತಿಲ್ಲ. ಇದೊಂದು ಮಹತ್ವದ ಪ್ರಶ್ನೆಯಾಗಿದೆ. ಯಾರೆ ಆದರೂ ಇಷ್ಟು ಸುದೀರ್ಘ ಕಾಲ ತಂಡದಿಂದ ಹೊರಗುಳಿಯುವರೇ? ಈ ಪ್ರಶ್ನೆಗೆ ಉತ್ತರ ಸಿಗಬೇಕಿದೆ" ಎಂದು ಗವಾಸ್ಕರ್ ತಿಳಿಸಿದರು.

ಇತ್ತೀಚೆಗಷ್ಟೇ ಹೇಳಿಕೆ ನೀಡಿರುವ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ, ಧೋನಿ ಶೀಘ್ರದಲ್ಲೇ ಏಕದಿನಕ್ಕೆ ವಿದಾಯ ಹಾಡುವ ಸಾಧ್ಯತೆಯಿದೆ ಎಂದಿದ್ದರು. ಆದರು ಟಿ20 ಪುನರಾಗಮನಕ್ಕೆ ಸಂಬಂಧಪಟ್ಟಂತೆ ಮುಂಬರುವ ಐಪಿಎಲ್ ನಿರ್ಣಾಯಕವೆನಿಸಲಿದೆ ಎಂದಿದ್ದರು.

ಏತನ್ಮಧ್ಯೆ ಐಪಿಎಲ್‌ಗೆ ಹೋಲಿಸಿದಾಗ ರಣಜಿ ಆಟಗಾರರು ವೇತನವನ್ನು ಗಣನೀಯವಾಗಿ ಹೆಚ್ಚಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ಐಪಿಎಲ್ ಹಾಗೂ ಪ್ರಥಮ ದರ್ಜೆ ಸಂಭಾವನೆಯಲ್ಲಿ ತುಂಬಾನೇ ವ್ಯತ್ಯಾಸವಿದೆ ಎಂಬುದನ್ನು ಬೊಟ್ಟು ಮಾಡಿದರು. ಈ ವಿಷಯಗಳನ್ನು ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಪರಿಗಣಿಸುವ ನಂಬಿಕೆ ವ್ಯಕ್ತಪಡಿಸಿದರು.

ಭಾರತ ವಿರುದ್ಧದ ಟಿ20 ಸರಣಿ ಸೋಲಿನ ಬಳಿಕ ನಾಯಕತ್ವ ಬಿಡಲು ಮುಂದಾದ ಮಾಲಿಂಗ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌