ಆ್ಯಪ್ನಗರ

ಪಾಂಡೆ ಪಡೆಗೆ ಮುಂಬಯಿ ಮೊದಲ ಸವಾಲು

ಇಂದೋರ್‌ನ ಹೋಳ್ಕರ್‌ ಕ್ರೀಡಾಂಗಣದಲ್ಲಿ ಇದೇ 8ರಂದು ನಡೆಯಲಿರುವ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಟೂರ್ನಿಯ ಸೂಪರ್‌ ಲೀಗ್‌ ಹಂತಕ್ಕೆ 15 ಸದಸ್ಯರ ಕರ್ನಾಟಕ ತಂಡವನ್ನು ರಾಜ್ಯ ಕ್ರಿಕೆಟ್‌ ಸಂಸ್ಥೆ ಸೋಮವಾರ ಪ್ರಕಟಿಸಿದೆ.

Vijaya Karnataka 5 Mar 2019, 5:00 am
ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ : ಸೂಪರ್‌ ಲೀಗ್‌ಗೆ ಕರ್ನಾಟಕ ತಂಡ ಪ್ರಕಟ
Vijaya Karnataka Web super league mumbai v karnataka fight in march 8
ಪಾಂಡೆ ಪಡೆಗೆ ಮುಂಬಯಿ ಮೊದಲ ಸವಾಲು

ಬೆಂಗಳೂರು :
ಇಂದೋರ್‌ನ ಹೋಳ್ಕರ್‌ ಕ್ರೀಡಾಂಗಣದಲ್ಲಿ ಇದೇ 8ರಂದು ನಡೆಯಲಿರುವ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಟೂರ್ನಿಯ ಸೂಪರ್‌ ಲೀಗ್‌ ಹಂತಕ್ಕೆ 15 ಸದಸ್ಯರ ಕರ್ನಾಟಕ ತಂಡವನ್ನು ರಾಜ್ಯ ಕ್ರಿಕೆಟ್‌ ಸಂಸ್ಥೆ ಸೋಮವಾರ ಪ್ರಕಟಿಸಿದೆ.

'ಬಿ' ಗುಂಪಿನಲ್ಲಿ ಸ್ಥಾನ ಪಡೆದಿರುವ ಮನೀಶ್‌ ಪಾಂಡೆ ಸಾರಥ್ಯದ ಕರ್ನಾಟಕ ತಂಡ ಸೂಪರ್‌ ಲೀಗ್‌ ಹಂತದ ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬಯಿ ತಂಡವನ್ನು ಎದುರಿಸಲಿದೆ. ನಂತರ ಇದೇ 9ರಂದು ಇದೇ ಕ್ರೀಡಾಂಗಣದಲ್ಲಿ ಉತ್ತರ ಪ್ರದೇಶ ತಂಡವನ್ನು ಎದುರಿಸಲಿರುವ ಕರ್ನಾಟಕ, ಮರು ದಿನ ತನ್ನ ಮೂರನೇ ಹಣಾಹಣಿಯಲ್ಲಿ ದಿಲ್ಲಿ ವಿರುದ್ಧ ಹಾಗೂ ಅಂತಿಮ ಹಾಗೂ ನಾಲ್ಕನೇ ಪಂದ್ಯದಲ್ಲಿ ವಿದರ್ಭ ವಿರುದ್ಧ ಕಣಕ್ಕಿಳಿಯಲಿದೆ.

ಸೂಪರ್‌ ಲೀಗ್‌ ಹಂತಕ್ಕೆ ತೇರ್ಗಡೆಯಾದ ಒಟ್ಟು ಹತ್ತು ತಂಡಗಳನ್ನು ತಲಾ ಐದು ತಂಡಗಳಂತೆ 'ಎ' ಮತ್ತು 'ಬಿ' ಗುಂಪುಗಳಾಗಿ ವಿಂಗಡಿಸಲಾಗಿದೆ. 'ಎ' ಗುಂಪಿನಲ್ಲಿ ಜಾರ್ಖಂಡ್‌, ಗುಜರಾತ್‌, ರೈಲ್ವೆ, ಬಂಗಾಳ ಮತ್ತು ಮಹಾರಾಷ್ಟ್ರ ತಂಡಗಳು ಸ್ಥಾನ ಪಡೆದರೆ, 'ಬಿ' ಗುಂಪಿನಲ್ಲಿ ಕರ್ನಾಟಕ, ದಿಲ್ಲಿ, ವಿದರ್ಭ, ಮುಂಬಯಿ ಮತ್ತು ಉತ್ತರ ಪ್ರದೇಶ ತಂಡಗಳು ಸ್ಥಾನ ಪಡೆದಿವೆ. ಉಭಯ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ಇದೇ 14ರಂದು ಹೋಳ್ಕರ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.
ಕರ್ನಾಟಕ ತಂಡ: ಮನೀಶ್‌ ಪಾಂಡೆ (ನಾಯಕ), ಕರುಣ್‌ ನಾಯರ್‌, ಮಯಾಂಕ್‌ ಅಗರ್ವಾಲ್‌, ರೋಹನ್‌ ಕದಮ್‌, ಬಿ.ಆರ್‌. ಶರತ್‌, ಜೆ. ಸುಚಿತ್‌, ಶ್ರೇಯಸ್‌ ಗೋಪಾಲ್‌, ಆರ್‌. ವಿನಯ್‌ ಕುಮಾರ್‌, ಪ್ರಸಿದ್ಧ್‌ ಕೃಷ್ಣ, ಅಭಿಮನ್ಯು ಮಿಥುನ್‌, ಕೆ.ಸಿ. ಕಾರಿಯಪ್ಪ, ವಿ. ಕೌಶಿಕ್‌, ಕೆ.ವಿ ಸಿದ್ಧಾರ್ಥ್‌, ಮನೋಜ್‌ ಭಾಂಡಗೆ, ಲವನೀತ್‌ ಸಿಸೋಡಿಯಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌