ಆ್ಯಪ್ನಗರ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ; ಕರ್ನಾಟಕ vs ತಮಿಳುನಾಡು ಫೈನಲ್ ಫೈಟ್

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಹರಿಯಾಣ ವಿರುದ್ಧ ನಡೆದ ಸೆಮಿಫೈನಲ್ ಮುಖಾಮುಖಿಯಲ್ಲಿ ಕರ್ನಾಟಕದ ಅನುಭವಿ ವೇಗದ ಬೌಲರ್ ಅಭಿಮನ್ಯು ಮಿಥುನ್ ಒಂದೇ ಓವರ್‌ನಲ್ಲಿ ಹ್ಯಾಟ್ರಿಕ್ ಸೇರಿದಂತೆ ಐದು ವಿಕೆಟ್ ಸಾಧನೆ ಮಾಡಿದ್ದಾರೆ.

Vijaya Karnataka Web 30 Nov 2019, 10:27 am
ಸೂರತ್: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಇಲ್ಲಿನ ಲಾಲಾಭಾಯಿ ಕಂಟ್ರ್ಯಾಕ್ಟರ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಮುಖಾಮುಖಿಯಲ್ಲಿ ಕರ್ನಾಟಕ ತಂಡವು ಸಾಂಪ್ರಾದಾಯಿಕ ಬದ್ಧ ವೈರಿ ತಮಿಳುನಾಡು ಸವಾಲನ್ನು ಎದುರಿಸಲಿದೆ. ಇದರೊಂದಿಗೆ ಮಗದೊಂದು ಸದರ್ನ್ ಡೆರ್ಬಿ ಹೋರಾಟಕ್ಕೆ ವೇದಿಕೆ ಸಿದ್ಧಗೊಂಡಿದೆ.
Vijaya Karnataka Web ಅಭಿಮನ್ಯು ಮಿಥುನ್


ಶುಕ್ರವಾರ ನಡೆದ ಮೊದಲ ಸೆಮಿಫೈನಲ್ ಮುಖಾಮುಖಿಯಲ್ಲಿ ಕರ್ನಾಟಕ ತಂಡವು ಹರಿಯಾಣ ವಿರುದ್ಧ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ಮಧ್ಯಮ ವೇಗಿ ಅಭಿಮನ್ಯು ಮಿಥುನ್‌ (39ಕ್ಕೆ 5) ಪ್ರಚಂಡ ಬೌಲಿಂಗ್‌ ಪ್ರದರ್ಶನ ನೀಡಿದ್ದರೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್‌. ರಾಹುಲ್‌ (66) ಹಾಗೂ ದೇವದತ್‌ ಪಡಿಕ್ಕಲ್‌ (87) ಸಿಡಿಲಬ್ಬರದ ಬ್ಯಾಟಿಂಗ್‌ ವೈಭವ ಪ್ರದರ್ಶಿಸಿದ್ದರು.

ಒಂದೇ ಓವರ್‌ನಲ್ಲಿ ಐದು ವಿಕೆಟ್ ಪಡೆದ ಅಭಿಮನ್ಯು ಮಿಥುನ್ ದಾಖಲೆ ಬರೆದಿದ್ದರು. ಅಲ್ಲದೆ ದೇಶೀಯ ಟೂರ್ನಿಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಹಿರಿಮೆಗೆ ಭಾಜನವಾಗಿದ್ದರು. ಇತ್ತೀಚೆಗಷ್ಟೇ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಅಭಿಮನ್ಯು ಮಿಥುನ್ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು.

ಟಿ20 ಕ್ರಿಕೆಟ್‌: ಅಭಿಮನ್ಯು ಮಿಥುನ್‌ ವಿಶ್ವ ದಾಖಲೆ, ಕರ್ನಾಟಕ ತಂಡ ಫೈನಲ್‌ಗೆ

20ನೇ ಓವರ್‌ನಲ್ಲಿಕರ್ನಾಟಕದ ಮಧ್ಯಮ ವೇಗಿ ಅಭಿಮನ್ಯು ಮಿಥುನ್‌ ಅವರಿಂದ ದೇಶಿ ಕ್ರಿಕೆಟಿನಲ್ಲೇ ಪರಮ ಶ್ರೇಷ್ಠ ಎನ್ನಬಹುದಾದ ಪ್ರದರ್ಶನವೊಂದು ದಾಖಲಾಯಿತು. ಆ ಓವರ್‌ನ ಮೊದಲ 4 ಎಸೆತಗಳಲ್ಲಿ4 ವಿಕೆಟ್‌ ಉರುಳಿಸುವ ಮೂಲಕ ಹರಿಯಾಣ ತಂಡವನ್ನು ಧೂಳಿಪಟಗೈದ ಮಿಥುನ್‌ ಕೊನೆಯ ಎಸೆತದಲ್ಲಿ ಮತ್ತೊಂದು ವಿಕೆಟ್‌ ಉರುಳಿಸಿ ದಾಖಲೆಗೆ ಭಾಜನರಾದರು.

ತಮಿಳುನಾಡು ತಂಡವನ್ನು ಮಣಿಸಿದ್ದ ಕರ್ನಾಟಕ ವಿಜಯ್ ಹಜಾರೆ ರಣಜಿ ಏಕದಿನ ಟ್ರೋಫಿ ಮುಡಿಗೇರಿಸಿತ್ತು. ಇದೀಗ ಸೈಯದ್ ಮುಷ್ತಾಕ್ ಅಲಿ ಟ್ರೋಪಿಯಲ್ಲೂ ತಮಿಳುನಾಡು ಸವಾಲು ಎದುರಾಗುತ್ತಿರುವುದು ರೋಚಕತೆ ಮತ್ತಷ್ಟು ಹೆಚ್ಚಿಸಿದೆ. ಮಗದೊಂದು ಸೆಮೀಸ್ ಮುಖಾಮುಖಿಯಲ್ಲಿ ತಮಿಳುನಾಡು ತಂಡವು ರಾಜಸ್ಥಾನ ವಿರುದ್ಧ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು.

ಲಸಿತ್‌ ಮಾಲಿಂಗ ವಿಶ್ವ ದಾಖಲೆ ಧೂಳೀಪಟ ಮಾಡಿದ ಅಭಿಮನ್ಯು ಮಿಥುನ್‌!

ಅಭಿಮನ್ಯು ಮಿಥುನ್‌ ಎಸೆದ 20ನೇ ಓವರ್‌ ವಿವರ: ವಿಕೆಟ್‌, ವಿಕೆಟ್‌, ವಿಕೆಟ್‌, ವಿಕೆಟ್‌, ವೈಡ್‌, 1ರನ್‌, ವಿಕೆಟ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌