ಆ್ಯಪ್ನಗರ

ಭಾರತ ಟಿ20 ತಂಡದಲ್ಲಿ ಸ್ಥಾನ ಕಳೆದುಕೊಂಡ ಬಳಿಕ ಮೊದಲ ಬಾರಿ ತುಟಿ ಬಿಚ್ಚಿದ ಕುಲ್ದೀಪ್‌!

ಕಳೆದ ಎರಡು ವರ್ಷಗಳಲ್ಲಿ ಭಾರತ ತಂಡದ ಪ್ರಮುಖ ಸ್ಪಿನ್ನರ್‌ ಆಗಿದ್ದ ಚೈನಾಮನ್‌ ಬೌಲಿಂಗ್‌ ಶೈಲಿಯ ಕುಲ್ದೀಪ್‌ ಯಾದವ್‌, ಎದುರಾಳಿ ಬ್ಯಾಟ್ಸ್‌ಮನ್‌ಗಳ ನಿದ್ರೆ ಕೆಟಿಸಿದ್ದರು. ಆದರೆ, ಟೀಮ್‌ ಇಂಡಿಯಾ ಟಿ20 ಕ್ರಿಕೆಟ್‌ನಲ್ಲಿ ಆಲ್‌ರೌಂಡರ್‌ಗಳ ಕಡೆಗೆ ಹೆಚ್ಚಿನ ಮಹತ್ವ ನೀಡಿರುವ ಹಿನ್ನೆಲೆಯಲ್ಲಿ ಕುಲ್ದೀಪ್‌ಗೆ ಟಿ20 ತಂದದಿಂದ ಹೊರಗಿಡಲಾಗಿದೆ.

Vijaya Karnataka Web 20 Sep 2019, 10:00 pm
ಮೈಸೂರು: ಎಡಗೈ ರಿಸ್ಟ್‌ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ ಕಳೆದ ಎರಡು ವರ್ಷಗಳಿಂದ ಭಾರತ ತಂಡದ ಪರ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಮಿಂಚಿದ್ದವರು. ಟೆಸ್ಟ್‌, ಏಕದಿನ ಮತ್ತು ಟಿ20-ಐ ಕ್ರಿಕೆಟ್‌ ಮೂರರಲ್ಲೂ 5 ವಿಕೆಟ್‌ ಪಡೆದ ಸಾಧನೆ ಮಾಡಿದ ಭಾರತದ ಮೊದಲ ಬೌಲರ್‌ ಕೂಡ. ಹೀಗಿರುವಾಗ ಸತತ ಎರಡು ದ್ವಿಪಕ್ಷೇಯ ಟಿ20 ಕ್ರಿಕೆಟ್‌ ಸರಣಿಗಳಿಂದ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿದೆ.
Vijaya Karnataka Web kuldeep yadav 2019 test


ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಲಿರುವ 2020ರ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಭಾರತ ತಂಡದ ತಂತ್ರಗಾರಿಕೆ ವಿಭಿನ್ನವಾಗಿದೆ. ಬ್ಯಾಟಿಂಗ್‌ನಲ್ಲಿ ಕೆಳ ಕ್ರಮಾಂಕದ ವರೆಗೂ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ಆಲ್‌ರೌಂಡರ್‌ಗಳಿಗೆ ಮಣೆ ಹಾಕುತ್ತಿದೆ. ತನ್ನ ಈ ಕಾರ್ಯ ತಂತ್ರ ಸಲುವಾಗಿ ಕುಲ್ದೀಪ್‌ ಯಾದವ್‌ ಮತ್ತು ಯುಜ್ವೇಂದ್ರ ಚಹಲ್‌ ಅವರಂತಹ ಪ್ರಮುಖ ಹಾಗೂ ಯಶಸ್ವಿ ಸ್ಪಿನ್ನರ್‌ಗಳನ್ನೇ ಹೊರಗಿಡುವ ಅಪಾಯವನ್ನು ತೆಗೆದುಕೊಂಡಿದೆ.

ಕುಸ್ತಿ ವಿಶ್ವ ಚಾಂಪಿಯನ್‌ಷಿಪ್‌: ಚಿನ್ನಕ್ಕೆ ಗುರಿಯಿಟ್ಟು ಕಂಚಿಗೆ ಕೊರಳೊಡ್ಡಿದ ಬಜರಂಗ್‌ ಪೂನಿಯಾ

ಅಂದಹಾಗೆ ಭಾರತ ಟಿ20 ತಂಡದಲ್ಲಿ ಸ್ಥಾನ ಕಳೆದುಕೊಂಡ ಬಳಿಕ ಇದೇ ಮೊದಲ ಬಾರಿ ಮಾತನಾಡಿರುವ 24 ವರ್ಷದ ಯುವ ಸ್ಪಿನ್ನರ್‌ ಕುಲ್ದೀಪ್‌, ಟೆಸ್ಟ್‌ ಕ್ರಿಕೆಟ್‌ ಕಡೆಗೆ ಗಮನ ನೀಡುವುದಾಗಿ ಹೇಳಿಕೊಂಡಿದ್ದಾರೆ.

"ಭಾರತ ಟಿ20 ತಂಡಕ್ಕೆ ನನ್ನ ಆಯ್ಕೆ ಆಗದೇ ಇರುವುದಕ್ಕೆ ಬೇಸರವಿಲ್ಲ. ಆಯ್ಕೆದಾರರು ನನಗೆ ವಿಶ್ರಾಂತಿ ನೀಡಬೇಕೆಂದು ಬಯಸಿರಬೇಕು. ಇಲ್ಲ ತಂಡದಲ್ಲಿ ಬದಲಾವಣೆ ಬೇಕೆಂದು ಅನಿಸಿರಬೇಕು. ಇದನ್ನು ನಾನು ಗೌರವಿಸುತ್ತೇನೆ. ನನ್ನ ಬಳಿ ಯಾವುದೇ ದೂರುಗಳಿಲ್ಲ. ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ನನಗೆ ಕೊಟ್ಟಿರುವ ಅವಕಾಶ ಎಂದು ಭಾವಿಸುತ್ತೇನೆ," ಎಂದಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬಾಕ್ಸರ್‌ ಅಮಿತ್‌ ಪಂಘಲ್‌ ದಂಡಯಾತ್ರೆಗೆ ಕನ್ನಡಿಗ ಕುಟ್ಟಪ್ಪ ಸಾರಥಿ!

"ಸೀಮಿತ ಓವರ್‌ಗಳ ಕ್ರಿಕೆಟ್‌ ಸತತವಾಗಿ ಆಡಿದ ಸಂದರ್ಭದಲ್ಲಿ ಕೆಂಪು ಚೆಂಡಿನ ಆಟಕ್ಕೆ ಹೊಂದಿಕೊಳ್ಳುವುದು ಕಷ್ಟ. ಬಿಳಿ ಚೆಂಡಿನಿಂದ ಕೆಂಪು ಚೆಂಡಿಗೆ ಹೊಂದಿಕೊಳ್ಳಲು ಸಮಯ ಬೇಕು. ಒಡಿಐ ಮತ್ತು ಟಿ20 ಆಡುತ್ತಿದ್ದ ಸಂದರ್ಭದಲ್ಲಿ ಯಾವುದೇ ತಯಾರಿಗಳಿಲ್ಲದೆ ಇದ್ದಕ್ಕಿದ್ದಂತೆ ಟೆಸ್ಟ್‌ ಆಡುವಂತಾದರೆ ಹೊಂದಾಣಿಕೆ ಕಷ್ಟವಾಗುತ್ತದೆ," ಎಂದು ಶುಕ್ರವಾರ ಡ್ರಾ ಫಲಿತಾಂಶ ಕಂಡ ಭಾರತ 'ಎ' ಮತ್ತು ದಕ್ಷಿಣ ಆಫ್ರಿಕಾ 'ಎ' ನಡುವಣ 2ನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ 4 ವಿಕೆಟ್‌ ಪಡೆದು ಗಮನ ಸೆಳೆದಿದ್ದ ಕುಲ್ದೀಪ್‌ ಹೇಳಿದ್ದಾರೆ.

ಇತ್ತೀಚಿನ ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ಭಾರತ ಟೆಸ್ಟ್‌ ತಂಡದಲ್ಲಿ ಕುಲ್ದೀಪ್‌ ಮತ್ತು ಆರ್‌. ಅಶ್ವಿನ್‌ ಅವರ ಬದಲಾಗಿ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದೀಗ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 3 ಟೆಸ್ಟ್‌ಗಳ ಸರಣಿಯನ್ನಾಡುತ್ತಿದ್ದು, ತಂಡಕ್ಕೆ ಅಗತ್ಯವಿರುವ ಇಬ್ಬರು ಸ್ಪಿನ್ನರ್‌ಗಳ ಪೈಕಿ ಒಂದು ಸ್ಥಾನ ಗಿಟ್ಟಿಸಿಕೊಳ್ಳುವುದು ಕುಲ್ದೀಪ್‌ ಅವರ ಲೆಕ್ಕಾಚಾರವಾಗಿದೆ.

ದೇಶದಲ್ಲಿ ಟೆನಿಸ್‌ ಅಭಿವೃದ್ಧಿಗಾಗಿ ಎಸಿಕ್ಸ್‌ ಜೊತೆ ಕೈ ಜೋಡಿಸಿದ ರೋಹನ್‌ ಬೋಪಣ್ಣ

"ನಾನು, ಜಡೇಜಾ ಮತ್ತು ಅಶ್ವಿನ್‌ ಮೂವರೂ ಸ್ಪಿನ್ನರ್‌ಗಳು ತಂಡದಲ್ಲಿದ್ದಾಗ ಉತ್ತಮ ಸಂಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವುದು ಸವಾಲಿನ ಸಂಗತಿ. ಸಿಕ್ಕ ಅವಕಾಶ ಬಳಸಿಕೊಳ್ಳಲು ನೀವು ಸಿದ್ದರಿರಬೇಕು. ಏಕೆಂದರೆ ಸಿಗುವುದು ಕೆಲವೇ ಕೆಲ ಅವಕಾಶಗಳು ಎಂಬ ಒತ್ತಡವಿರುತ್ತದೆ," ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌