ಆ್ಯಪ್ನಗರ

ಏಕದಿನ ಸ್ಪೆಷಲಿಸ್ಟ್‌ಗಳಿಗೆ ವಿಶ್ರಾಂತಿ ಪಡೆಯಲು ಸೂಚನೆ

ಭಾರತ ಕ್ರಿಕೆಟ್ ತಂಡದ ಏಕದಿನ ಸ್ಪೆಷಲಿಸ್ಟ್ ಆಟಗಾರರಲ್ಲಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಟೀಮ್ ಇಂಡಿಯಾ ವ್ಯವಸ್ಥಾಪಕ ಮಂಡಳಿ ಸೂಚಿಸಿದೆ.

ಟೈಮ್ಸ್ ಆಫ್ ಇಂಡಿಯಾ 23 Nov 2017, 6:25 pm
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಏಕದಿನ ಸ್ಪೆಷಲಿಸ್ಟ್ ಆಟಗಾರರಲ್ಲಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಟೀಮ್ ಇಂಡಿಯಾ ವ್ಯವಸ್ಥಾಪಕ ಮಂಡಳಿ ಸೂಚಿಸಿದೆ.
Vijaya Karnataka Web team india asks odi specialists to skip ranji matches
ಏಕದಿನ ಸ್ಪೆಷಲಿಸ್ಟ್‌ಗಳಿಗೆ ವಿಶ್ರಾಂತಿ ಪಡೆಯಲು ಸೂಚನೆ


ಪ್ರಸ್ತುತ ರಣಜಿ ಟ್ರೋಫಿ ಸಾಗುತ್ತಿದ್ದು, ಇದರಲ್ಲಿ ಪಾಲ್ಗೊಳ್ಳದಂತೆ ಸೀಮಿತ ಓವರ್‌ಗಳ ಆಟಗಾರರಿಗೆ ಸೂಚನೆ ನೀಡಲಾಗಿದೆ. ಈ ಮೂಲಕ ಆಟಗಾರರ ಇಕ್ಕಟ್ಟಿನ ವೇಳಾಪಟ್ಟಿ ಬಗ್ಗೆ ಗಂಭೀರವಾದ ಅವಲೋಕನ ನಡೆಸಿದೆ.

ಸದ್ಯ ಟೆಸ್ಟ್ ತಂಡದಿಂದ ದೂರವಿರುವ ಯಜುವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ಕೇದರ್ ಜಾಧವ್, ದಿನೇಶ್ ಕಾರ್ತಿಕ್ ಸೇರಿದ ಆಟಗಾರರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ದೈಹಿಕ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಪೈಕಿ ಪಾಂಡ್ಯ ವಿಶ್ರಾಂತಿಯನ್ನು ಕೇಳಿ ಪಡೆದಿದ್ದಲ್ಲಿ ಇತರ ಆಟಗಾರರಿಗೆ ರಣಜಿಯಲ್ಲಿ ಭಾಗವಹಿಸದಂತೆ ಹೇಳಲಾಗಿದೆ. ಹರಿಯಾಣ ಪರ ರಣಜಿ ಆಡಲು ಚಹಲ್ ಉತ್ಸುಕತೆ ತೋರಿದ್ದರೂ ಇದಕ್ಕೆ ಟೀಮ್ ಮ್ಯಾನೇಜ್‌ಮೆಂಟ್ ಕಡಿವಾಣ ಹಾಕಿದೆ.

ಯಾವುದೇ ಗಾಯದ ಸಮಸ್ಯೆಯನ್ನು ತಪ್ಪಿಸುವುದು ಅಥವಾ ಹೆಚ್ಚುವರಿ ಕೆಲಸದೊತ್ತಡವನ್ನು ಕಡಿಮೆ ಮಾಡುವ ಇರಾದೆಯನ್ನು ಟೀಮ್ ಮ್ಯಾನೇಜ್‌ಮೆಂಟ್ ಹೊಂದಿದೆ.

ಅಂದ ಹಾಗೆ ಟೆಸ್ಟ್ ಸರಣಿ ಬೆನ್ನಲ್ಲೇ ಲಂಕಾ ವಿರುದ್ಧ ತಲಾ ಮೂರು ಏಕದಿನ ಹಾಗೂ ಟ್ವೆಂಟಿ-20 ಸರಣಿಯಲ್ಲಿ ಟೀಮ್ ಇಂಡಿಯಾ ಭಾಗವಹಿಸಲಿದೆ. ಈ ವೇಳೆ ಏಕದಿನ ಸ್ಪೆಷಲಿಸ್ಟ್‌ಗಳು ತಂಡವನ್ನು ಸೇರಿಕೊಳ್ಳಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌