ಆ್ಯಪ್ನಗರ

ಗೆಲುವಿಗೂ ಮೊದಲೇ ಟೀಮ್ ಇಂಡಿಯಾ ಸಂಭ್ರಮ

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ರೋಚಕ ಹಂತವನ್ನು ತಲುಪಿದೆ. ಮೊದಲೆರಡು ದಿನಗಳ ಅಂತ್ಯಕ್ಕೆ ಭಾರತ ಹಿಡಿತ ಸಾಧಿಸಿದರೂ ಜಯ ದಾಖಲಿಸಬಹುದೇ ಎಂಬುದು ಇನ್ನೂ ಅಸ್ಪಷ್ಟವಾಗಿದೆ.

Vijaya Karnataka Web 26 Jan 2018, 12:20 pm
ಜೋಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ರೋಚಕ ಹಂತವನ್ನು ತಲುಪಿದೆ. ಮೊದಲೆರಡು ದಿನಗಳ ಅಂತ್ಯಕ್ಕೆ ಭಾರತ ಹಿಡಿತ ಸಾಧಿಸಿದರೂ ಜಯ ದಾಖಲಿಸಬಹುದೇ ಎಂಬುದು ಇನ್ನೂ ಅಸ್ಪಷ್ಟವಾಗಿದೆ.
Vijaya Karnataka Web cheteswara-pujara-birthday


ಹಾಗಿರಬೇಕೇಂದರೆ ಗೆಲುವಿಗೂ ಮೊದಲೇ ಟೀಮ್ ಆಟಗಾರರು ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ.

ಹ್ಹಾಂ! ಅದೇನು ಅಂತೀರಾ ? ವಿಷಯ ಏನೆಂದರೆ ಭಾರತದ ಕಲಾತ್ಮಕ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಜನವರಿ 25 ಗುರುವಾರದಂದು 30ನೇ ವರ್ಷಕ್ಕೆ ಕಾಲಿರಿಸಿದ್ದರು.


ಇದರಂತೆ ಎರಡನೇ ಪಂದ್ಯದ ದಿನದಂತ್ಯದಲ್ಲಿ ಪೂಜಾರ ಹುಟ್ಟುಹಬ್ಬವನ್ನು ಸಹ ಆಟಗಾರರು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ.

ಜನವರಿ 26ರಂದು ಇಡೀ ದೇಶವೇ ಗಣರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಇದರಂತೆ ಭಾರತೀಯ ಬಾವುಟವನ್ನು ಹೋಲುವ ವಿಶೇಷ ಕೇಕ್ ಅನ್ನು ಪೂಜಾರ ಅವರಿಗಾಗಿ ಸಿದ್ಧಪಡಿಸಲಾಗಿತ್ತು.

ಬಳಿಕ ಕೇಕ್ ಕಟ್ಟಿಂಗ್ ಮಾಡಿದ ಪೂಜಾರ ಮುಖಕ್ಕೆ ಸಹ ಆಟಗಾರರು ಕೇಕ್ ಹಚ್ಚಿ ಮಧುರ ಪ್ರತೀಕಾರವನ್ನು ತೀರಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌