ಆ್ಯಪ್ನಗರ

ವಿರಾಟ್ ಅನುಪಸ್ಥಿತಿಯಲ್ಲೂ ಭಾರತವೇ ಫೇವರಿಟ್: ದಾದಾ

ಯುಎಇನಲ್ಲಿ ಸಾಗುತ್ತಿರುವ ಪ್ರತಿಷ್ಠಿತ ಏಷ್ಯಾ ಕಪ್ 2018 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾರತವೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದು ಟೀಮ್ ಇಂಡಿಯಾ ಮಾಜಿ ಯಶಸ್ವಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 16 Sep 2018, 4:07 pm
ದುಬೈ: ಯುಎಇನಲ್ಲಿ ಸಾಗುತ್ತಿರುವ ಪ್ರತಿಷ್ಠಿತ ಏಷ್ಯಾ ಕಪ್ 2018 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾರತವೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದು ಟೀಮ್ ಇಂಡಿಯಾ ಮಾಜಿ ಯಶಸ್ವಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web rohit-sharma-10


ತಂಡದ ಖಾಯಂ ನಾಯಕ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ಸೂಚಿಸಲಾಗಿದೆ. ಇದರಿಂದಾಗಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುತ್ತಿದ್ದಾರೆ.

"ಇಂಗ್ಲೆಂಡ್‌ನಲ್ಲಿ ಭಾರತ ಅತ್ಯುತ್ತಮ ನಿರ್ವಹಣೆ ನೀಡದೇ ಹೋಗಿರಬಹದು. ಆದರೆ ಏಕದಿನದಲ್ಲಿ ಅಗ್ರ ತಂಡವಾಗಿದೆ. ತಂಡದಲ್ಲಿ ವಿರಾಟ್ ಇರುತ್ತಿದ್ದರೆ ಮತ್ತಷ್ಟು ಪ್ರಬಲವಾಗಿರುತ್ತಿತ್ತು. ಆದರೆ ರೋಹಿತ್ ಸಹ ಅತ್ಯುತ್ತಮ ನಾಯಕತ್ವ ದಾಖಲೆಯನ್ನು ಹೊಂದಿದ್ದಾರೆ. ಅವರೂ ಕೂಡಾ ಉತ್ತಮ ನಿರ್ವಹಣೆ ನೀಡುವ ನಿರೀಕ್ಷೆ ನನಗಿದೆ. ಟೀಮ್ ಇಂಡಿಯಾಗೆ ಏಷ್ಯಾ ಕಪ್ ಗೆಲ್ಲುವ ಸಾಮರ್ಥ್ಯವಿದೆ" ಎಂದು ಗಂಗೂಲಿ ಸೇರಿಸಿದರು.

13 ಆವೃತ್ತಿಗಳಲ್ಲಿ ಏಷ್ಯಾ ಕಪ್‌ ಇತಿಹಾಸದಲ್ಲಿ ಅತಿ ಯಶಸ್ವಿ ತಂಡವೆನಿಸಿರುವ ಭಾರತ ಆರು ಬಾರಿ ಪ್ರಶಸ್ತಿ ಜಯಿಸಿದೆ. 2016ರಲ್ಲಿ ಆಯೋಜಿಸಲಾದ ಟ್ವೆಂಟಿ-20 ಪ್ರಕಾರದಲ್ಲೂ ಭಾರತವೇ ಚಾಂಪಿಯನ್ ಪಟ್ಟ ಆಲಂಕರಿಸಿತ್ತು.

ಏಷ್ಯಾ ಕಪ್‌ನಲ್ಲಿ ಭಾರತ ಪ್ರಶಸ್ತಿ ಸಾಧನೆ:


1984 (ಚೊಚ್ಚಲ ಏಷ್ಯಾಕಪ್), 1988, 1990-91, 1995, 2010 ಮತ್ತು 2016

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌