ಆ್ಯಪ್ನಗರ

ಧೋನಿ ಇಲ್ಲದ ಟೀಮ್ ಇಂಡಿಯಾ ಹೇಗಿತ್ತು ?

ಆಸ್ಟ್ರೇಲಿಯಾ ವಿರುದ್ದ ನಡೆದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಸರಣಿ ಸೋಲಿನ ಮುಖಭಂಗ ಎದುರಿಸಿದೆ. ಕೊನೆಯ ಎರಡು ಪಂದ್ಯಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಅಭಾವ ಎದ್ದು ಕಾಣಿಸಿತ್ತು.

Vijaya Karnataka Web 14 Mar 2019, 6:08 pm
ದಿಲ್ಲಿ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಕೊನೆಯ ಎರಡು ಪಂದ್ಯಗಳಿಂದ ಹಿರಿಯ ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರಿಗೆ ವಿಶ್ರಾಂತಿಯನ್ನು ಸೂಚಿಸಲಾಗಿತ್ತು. ಪರಿಣಾಮ ಕೊನೆಯ ಎರಡು ಪಂದ್ಯಗಳಲ್ಲಿ ಸೋಲನ್ನಪ್ಪಿರುವ ಟೀಮ್ ಇಂಡಿಯಾ ಸರಣಿ ಸೋಲಿನ ಮುಖಭಂಗಕ್ಕೊಳಗಾಗಿದೆ.
Vijaya Karnataka Web dhoni-kohli


ಮಹೇಂದ್ರ ಸಿಂಗ್ ಧೋನಿ ನಿಧಾನಗತಿಯ ಆಟದ ಬಗ್ಗೆ ಸಾಕಷ್ಟು ವಿಮರ್ಶೆಗಳು ಎದ್ದು ಬಂದಿದ್ದರೂ ಮಹಿ ತೋರುವ ಹೋರಾಟ ಛಲವನ್ನು ಭಾರತೀಯ ಆಟಗಾರರು ತೋರಲಿಲ್ಲ. ಮಹಿ ಇಲ್ಲದೆ ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕವು ಸಂಪೂರ್ಣವಾಗಿ ಮೊನಚು ಕಳೆದುಕೊಂಡಿತು.

ಬ್ಯಾಟಿಂಗ್‌ಗಿಂತಲೂ ಮಿಗಿಲಾಗಿ ವಿಕೆಟ್ ಹಿಂದುಗಡೆ ಧೋನಿ ಅವರನ್ನು ಟೀಮ್ ಇಂಡಿಯಾ ಮಿಸ್ ಮಾಡಿಕೊಂಡಿತ್ತು. ಮಹಿ ಜಾಗದಲ್ಲಿ ಕಾಣಿಸಿಕೊಂಡ ರಿಷಬ್ ಪಂತ್ ಕ್ಯಾಚ್ ಹಾಗೂ ಸ್ಟಂಪಿಂಗ್ ಅವಕಾಶಗಳನ್ನು ಮಿಸ್ ಮಾಡಿಕೊಂಡರು. ಪರಿಣಾಮ ಅತೀವ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಲು ವಿಫಲವಾದರು.

ಬೌಲರ್‌ಗಳು ಪ್ರಮುಖವಾಗಿಯೂ ಸ್ಪಿನ್ನರ್‌ಗಳ ಯುಜ್ವೇಂದ್ರ ಚಹಲ್ ಹಾಗೂ ಕುಲ್‌ದೀಪ್ ಯಾದವ್, ಮಹಿ ಮಾರ್ಗದರ್ಶನವಿಲ್ಲದೆ ಸಾಕಷ್ಟು ದುಬಾರಿಯೆನಿಸಿಕೊಂಡರು. ಸೂಕ್ತ ಜಾಗದಲ್ಲಿ ಫೀಲ್ಡಿಂಗ್ ಇಲ್ಲದೆ ಭಾರತ ಹಿನ್ನಡೆಯನ್ನು ಅನುಭವಿಸಿತು.

ಅಂತಿಮವಾಗಿ ನಾಯಕ ವಿರಾಟ್ ಕೊಹ್ಲಿ ಸಹ ನಿರ್ಣಾಯಕ ಹಂತದಲ್ಲಿ ಮಹಿ ಸಲಹೆಗಳನ್ನು ಮಿಸ್ ಮಾಡಿಕೊಂಡಿದ್ದರು. ಒಟ್ಟಿನಲ್ಲಿ ಆಸೀಸ್ ಸರಣಿಯು 37ರ ಹರೆಯದ ಧೋನಿ ತಂಡದಲ್ಲಿ ಏಕೆ ಅವಿಭಾಜ್ಯ ಅಂಗ ಎಂಬುದನ್ನು ಸಾಬೀತು ಮಾಡಿದೆ. ಮುಂಬರುವ ಏಕದಿನ ವಿಶ್ವಕಪ್‌ನಲ್ಲೂ ಧೋನಿ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂಬುದು ಅಷ್ಟೇ ಸತ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌