ಆ್ಯಪ್ನಗರ

ದಾದಾ ಬೇಡವೆಂದರೂ ಶಾಸ್ತ್ರಿ ಮೇಲೆ ಸಚಿನ್‌ಗೆ ಒಲವು

ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸುವಂತೆ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಅವರನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮನವೊಳಿಸಿರುವ ಬಗ್ಗೆ ವರದಿಗಳು ಬಂದಿದೆ.

ಟೈಮ್ಸ್ ಆಫ್ ಇಂಡಿಯಾ 28 Jun 2017, 6:05 pm
ಮುಂಬೈ: ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸುವಂತೆ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಅವರನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮನವೊಳಿಸಿರುವ ಬಗ್ಗೆ ವರದಿಗಳು ಬಂದಿದೆ.
Vijaya Karnataka Web tendulkar steps in convinces shastri to apply for team india coachs post
ದಾದಾ ಬೇಡವೆಂದರೂ ಶಾಸ್ತ್ರಿ ಮೇಲೆ ಸಚಿನ್‌ಗೆ ಒಲವು


ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು ಅನಿಲ್ ಕುಂಬ್ಳೆ ಅವರಿಂದ ತೆರವಾದ ಸ್ಥಾನಕ್ಕೆ ಟೀಮ್ ಇಂಡಿಯಾದ ನೂತನ ಕೋಚ್ ಆಯ್ಕೆ ಮಾಡಲಿದೆ.

ಈ ಹಿಂದೆ ಚಾಂಪಿಯನ್ಸ್ ಟ್ರೋಫಿ ಬೆನ್ನಲ್ಲೇ ನಾಯಕ ವಿರಾಟ್ ಕೋಹ್ಲಿ ನಡುವಣ ಭಿನ್ನಭಿಪ್ರಾಯದ ಹಿನ್ನಲೆಯಲ್ಲಿ ಕೋಚ್ ಸ್ಥಾನದಿಂದ ನಿರ್ಗಮಿಸಲು ಅನಿಲ್ ಕುಂಬ್ಳೆ ನಿರ್ಧರಿಸಿದ್ದರು.

ಈ ಹಿಂದೆ 2014ರಿಂದ 2016ರ ವರಗೆ ಟೀಮ್ ಇಂಡಿಯಾದ ನಿರ್ದೇಶಕರಾಗಿ ರವಿಶಾಸ್ತ್ರಿ ಸೇವೆ ಸಲ್ಲಿಸಿದ್ದರು. ಅಲ್ಲದೆ ನಾಯಕ ವಿರಾಟ್ ಕೋಹ್ಲಿ ಜೊತೆಗೆ ಉತ್ತಮ ಒಡನಾಟವನ್ನು ಹೊಂದಿದ್ದಾರೆ.

ಸಚಿನ್ ಮನವೊಲಿಸಿದ್ದರಿಂದ ಮಾತ್ರ ರವಿಶಾಸ್ತ್ರಿ ಎರಡನೇ ಬಾರಿಗೆ ಅರ್ಜಿ ಸಲ್ಲಿಸಲು ಒಪ್ಪಿಗೆ ಸೂಚಿಸಿದ್ದಾರೆ. ಕಳೆದ ವರ್ಷ ಶಾಸ್ತ್ರಿ ಅರ್ಜಿ ಕೋಚ್ ರೇಸ್‌ನಲ್ಲಿದ್ದರೂ ಕ್ರಿಕೆಟ್ ಸಲಹಾ ಸಮಿತಿಯು ಅನುಭವಿ ಕುಂಬ್ಳೆ ಅವರನ್ನು ಒಂದು ವರ್ಷದ ಅವಧಿಗೆ ತಂಡದ ಪ್ರಮುಖ ಕೋಚ್ ಆಗಿ ನೆೇಮಕಗೊಳಿಸಿತ್ತು.

ಸದ್ಯ ಲಂಡನ್‌ನಲ್ಲಿರುವ ಶಾಸ್ತ್ರಿ ಕಳೆದ ವರ್ಷ ಕಡೆಗಣಿಸಿದ್ದಕ್ಕೆ ಮುನಿಸಿಕೊಂಡಿದ್ದು, ಉದ್ದೇಶಪೂರ್ವಕವಾಗಿಯೇ ಈ ಬಾರಿ ಅರ್ಜಿ ಸಲ್ಲಿಸಿರಲಿಲ್ಲ. ಅತ್ತ ಕುಂಬ್ಳೆ ರಾಜೀನಾಮೆ ಬೆನ್ನಲ್ಲೇ ಬಿಸಿಸಿಐ ನೂತನ ಕೋಚ್ ಆಯ್ಕೆ ಸಂಬಂಧ ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಿಸಿತ್ತು. ಇದರಿಂದಾಗಿ ಶಾಸ್ತ್ರಿ ಅವರಿಗೆ ವೀರೇಂದ್ರ ಸೆಹ್ವಾಗ್, ಟಾಮ್ ಮೂಡಿ ಮುಂತಾದ ಮಾಜಿಗಳ ಜೊತೆಗೆ ಪೈಪೋಟಿಗಿಳಿಯಲು ಅವಕಾಶ ದೊರಕಿದೆ.

ಕಳೆದ ಬಾರಿಯೂ ಶಾಸ್ತ್ರಿ ಅವರನ್ನು ತೆಂಡೂಲ್ಕರ್ ಬೆಂಬಲಿಸಿದ್ದರು. ಆದರೆ ದಾದಾ ಖ್ಯಾತಿಯ ಗಂಗೂಲಿ ಅವರು ಕುಂಬ್ಳೆ ಪರ ನಿಂತಿದ್ದರು. ಇದರಿಂದಾಗಿ ಕೊನೆಯ ನಿಲುವು ವಿವಿಎಸ್ ಲಕ್ಷ್ಮಣ್ ಅವರಾದ್ದಾಗಿತ್ತು. ಲಕ್ಷ್ಮಣ್ ಕೂಡಾ ಕುಂಬ್ಳೆ ಅವರನ್ನು ಬೆಂಬಲಿಸುವ ಮೂಲಕ ಶಾಸ್ತ್ರಿ ಹಿನ್ನಡೆ ಅನುಭವಿಸಬೇಕಾಯಿತು.

ಹಿಂದಿನ ಘಟನೆಯನ್ನು ನೆನಪಿಸಿದರೆ ಶಾಸ್ತ್ರಿ ಕೋಚ್ ಆಗುವುದು ಗಂಗೂಲಿಗೆ ಇಷ್ಟವಿರಲಿಲ್ಲ. ಇದರಿಂದಾಗಿ ತುರ್ತಾದ ಕೆಲಸವಿದೆ ಎಂಬ ಕಾರಣ ನೀಡಿ ಸಂದರ್ಶನವನ್ನು ತಪ್ಪಿಸಿಕೊಂಡಿದ್ದರು. ಈಗ ತೆಂಡೂಲ್ಕರ್ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸುವರೆ ಎಂಬುದು ಕಾದು ನೋಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌