ಆ್ಯಪ್ನಗರ

ಸುಧಾರಿಸಿಕೊಳ್ಳಿ, ಇಲ್ಲ ನಾವೇ ನಿಮ್ಮನ್ನು ಸುಧಾರಿಸ್ತೀವಿ: ಸೆಹ್ವಾಗ್

ಎಂದಿನಂತೆ ಕ್ರಿಕೆಟ್ ಶೈಲಿಯಲ್ಲಿ ಟ್ವೀಟ್ ಮಾಡಿರುವ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್, ಭಾರತೀಯ ಸೇನೆ ಅತ್ಯುತ್ತಮ ಆಟವಾಡಿದೆ ಎಂದು ಭಾರತೀಯ ಸೇನೆಯ ಎರಡನೇ ಸರ್ಜಿಕಲ್ ದಾಳಿಯನ್ನು ಹೊಗಳಿದ್ದಾರೆ.

Vijaya Karnataka Web 26 Feb 2019, 1:58 pm
ಹೊಸದಿಲ್ಲಿ: ಪುಲ್ವಾಮಾ ಉಗ್ರರ ದಾಳಿಗೆ ಪ್ರತೀಕಾರವಾಗಿ ಗಡಿ ನಿಯಂತ್ರಣ ರೇಖೆ ದಾಟಿರುವ ಭಾರತೀಯ ವಾಯುಪಡೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳಿಗೆ ವೈಮಾನಿಕ ದಾಳಿಯನ್ನು ನಡೆಸಿದೆ.
Vijaya Karnataka Web dassault


ಫೆಬ್ರವರಿ 26 ಮಂಗಳವಾರ ಮುಂಜಾನೆ ಭಾರತೀಯ ವಾಯುಪಡೆಯ 12 ಮಿರಾಜ್ 2000 ಯುದ್ಧ ವಿಮಾನಗಳು ನಡೆಸಿದ ದಾಳಿಯಲ್ಲಿ 200ರಿಂದ 300ರಷ್ಟು ಉಗ್ರರನ್ನು ಹತ್ಯೆಗೈಯಲಾಗಿದೆ ಎಂಬುದು ತಿಳಿದು ಬಂದಿದೆ.

ಪುಲ್ವಾಮಾ ಕೃತ್ಯಕ್ಕೆ ಸೇಡು ತೀರಿಸಿರುವ ಭಾರತೀಯ ಸೇನೆಗೆ ಹೊಗಳಿಕೆಯ ಮಹಾಪೂರವೇ ಹರಿದು ಬರುತ್ತಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ತಮ್ಮದೇ ಕ್ರಿಕೆಟ್ ಶೈಲಿಯಲ್ಲಿ ಟ್ವೀಟ್ ಮಾಡಿದ್ದಾರೆ.

ನಮ್ಮ ಹುಡುಗರು ನಿಜಕ್ಕೂ ಉತ್ತಮ ಆಟ ಆಡಿದ್ದಾರೆ ಎಂದು ವೀರು ಉಲ್ಲೇಖಿಸಿದ್ದಾರೆ. ಅದೇ ಹೊತ್ತಿಗೆ ಹ್ಯಾಶ್‌ಟ್ಯಾಗ್ ಮೂಲಕ ಪಾಕ್‌ಗೆ ಎಚ್ಚರಿಕೆಯನ್ನು ರವಾನಿಸಿದ್ದಾರೆ.

ನಿಮ್ಮನ್ನು ನೀವೇ ಸುಧಾರಿಸಿಕೊಳ್ಳಿ. ಇಲ್ಲವಾದ್ದಲ್ಲಿ ನಾವೇ ನಿಮ್ಮನ್ನು ಸುಧಾರಿಸ್ತೀವಿ ಎಂಬ ಖಡಕ್ ಮಾತುಗಳನ್ನು ಬಳಕೆ ಮಾಡಿದ್ದಾರೆ.

ಈ ಮೊದಲು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ 40 ಯೋಧರು ಹುತಾತ್ಮಗೊಂಡಿದ್ದಾರೆ. ಇದಾದ ಬೆನ್ನಲ್ಲೇ ದೇಶಾದ್ಯಂತ ಪ್ರತೀಕಾರದ ಅಲೆ ಬೀಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌