ಆ್ಯಪ್ನಗರ

ಇಂಗ್ಲೆಂಡ್‌ ವಿಶ್ವಕಪ್‌ ಅವ್ಯವಸ್ಥೆಗಳ ಆಗರ

ಹನ್ನೆರಡನೇ ವಿಶ್ವಕಪ್‌ ಆಯೋಜನೆಯಲ್ಲಿನ ಲೋಪ-ದೋಷಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಲೇ ಇದೆ. ಈ ಬಗ್ಗೆ ಐಸಿಸಿಗೆ ದೂರುಗಳ ಸುರಿಮಳೆಯಾಗುತ್ತಿದ್ದು, ಟೂರ್ನಿ ಆಯೋಜಿಸಿರುವ ಇಂಗ್ಲೆಂಡ್‌ ಆ್ಯಂಡ್‌ ವೇಲ್ಸ್‌ ಕ್ರಿಕೆಟ್‌ ಮಂಡಳಿ ವಿರುದ್ಧ ಅಸಮಾಧಾನ ಹೊಗೆಯಾಡುತ್ತಿದೆ.

Vijaya Karnataka 15 Jun 2019, 5:00 am
ಹೊಸದಿಲ್ಲಿ: ಹನ್ನೆರಡನೇ ವಿಶ್ವಕಪ್‌ ಆಯೋಜನೆಯಲ್ಲಿನ ಲೋಪ-ದೋಷಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಲೇ ಇದೆ. ಈ ಬಗ್ಗೆ ಐಸಿಸಿಗೆ ದೂರುಗಳ ಸುರಿಮಳೆಯಾಗುತ್ತಿದ್ದು, ಟೂರ್ನಿ ಆಯೋಜಿಸಿರುವ ಇಂಗ್ಲೆಂಡ್‌ ಆ್ಯಂಡ್‌ ವೇಲ್ಸ್‌ ಕ್ರಿಕೆಟ್‌ ಮಂಡಳಿ ವಿರುದ್ಧ ಅಸಮಾಧಾನ ಹೊಗೆಯಾಡುತ್ತಿದೆ.
Vijaya Karnataka Web TEAM INDIA


ಆಟಗಾರರು ವಾಸ್ತವ್ಯ ಹೂಡಿರುವ ಹೋಟೆಲ್‌ಗಳಲ್ಲಿ ಪೂರಕ ಸೌಕರ್ಯಗಳನ್ನು ಒದಗಿಸಲು ಆಯೋಜಕರು ಸಂಪೂರ್ಣ ವಿಫಲವಾಗಿದ್ದಾರೆ. ಹೋಟೆಲ್‌ನಲ್ಲಿ ಜಿಮ್‌ ಪರಿಕರಗಳಿದ್ದರೂ ಅವು ಕ್ರಿಕೆಟಿಗರಿಗೆ ಪೂರಕವಾಗಿಲ್ಲ. ಹೀಗಾಗಿ ಕೊಹ್ಲಿ ನೇತೃತ್ವದ ಟೀಮ್‌ ಇಂಡಿಯಾದ ಸದಸ್ಯರು ಜಿಮ್‌ ಹುಡುಕಿಕೊಂಡು ಬ್ರಿಟನ್‌ನ ಬೀದಿಬೀದಿ ಅಲೆಯುವಂತಾಗಿದೆ.

ಹೋಟೆಲ್‌ನಲ್ಲಿ ಈಜು ಕೊಳ ಹಾಗೂ ಹವಾನಿಯಂತ್ರಿತ ವ್ಯವಸ್ಥೆ ಸರಿಯಾಗಿಲ್ಲ. ಅಲ್ಲದೆ, ಕ್ರಿಕೆಟಿಗರಿಗೆ ಒದಗಿಸಲಾಗಿರುವ ಖಾಸಗಿ ಭದ್ರತೆಯೂ ಕಡಿಮೆ ಇದ್ದು, ಹೊರಗಡೆ ಓಡಾಡುವ ವೇಳೆ ಟೀಮ್‌ ಇಂಡಿಯಾ ಸದಸ್ಯರನ್ನು ಅಭಿಮಾನಿಗಳು ಮುತ್ತಿಕ್ಕುತ್ತಿದ್ದಾರೆ.

ಬಸ್‌ನಲ್ಲಿ ಪ್ರಯಾಣ: ತಂಡವನ್ನು ಒಂದು ನಗರದಿಂದ ಇನ್ನೊಂದು ನಗರಕ್ಕೆ ಬಸ್‌ನಲ್ಲಿ ಕರೆದೊಯ್ಯಲಾಗುತ್ತಿದೆ. ನಗರಗಳ ನಡುವೆ ಅತಿ ವೇಗದ ರೈಲು ಸಂಪರ್ಕ ಇದ್ದರೂ ಬಳಸಿಕೊಳ್ಳಲಾಗುತ್ತಿಲ್ಲ. ಇಂಗ್ಲೆಂಡ್‌ನಲ್ಲಿ ಫುಟ್ಬಾಲ್‌ ಟೂರ್ನಿಗಳ ವೇಳೆ ಆಯೋಜಕರು ಆಟಗಾರರಿಗೆ ರೈಲಿನ ವ್ಯವಸ್ಥೆ ಮಾಡುತ್ತಾರೆ. ಆದರೆ, ಕ್ರಿಕೆಟ್‌ ವಿಶ್ವಕಪ್‌ ವೇಳೆ ಕ್ರಿಕೆಟಿಗರಿಗೆ ಆ ಭಾಗ್ಯ ಇಲ್ಲ.

ಮಳೆಯಿಂದಾಗಿ ಪಂದ್ಯಗಳು ರದ್ದು: ಮಳೆ ಬಂದಾಗ ಪಂದ್ಯ ಮುಂದುವರಿಸುವ ರೀತಿಯಲ್ಲಿ ಇಸಿಬಿ ಯಾವುದೇ ವ್ಯವಸ್ಥೆ ಮಾಡಿಲ್ಲ ಎನ್ನಲಾಗುತ್ತಿದೆ. ಇದುವರೆಗೆ ನಾಲ್ಕು ಪಂದ್ಯಗಳು ಮಳೆಯಿಂದಾಗಿ ರದ್ದಾಗಿದೆ. ವಿಶ್ವಕಪ್‌ ಚರಿತ್ರೆಯಲ್ಲಿ ಇದು ದಾಖಲೆ. ಮಳೆ ಸುರಿದಾಗ ಕೇವಲ ಪಿಚ್‌ ಮಾತ್ರ ಮುಚ್ಚುವುದರಿಂದ ಮೈದಾನ ಪೂರ್ತಿ ನೀರು ನಿಲ್ಲುತ್ತದೆ. ಮೈದಾನವನ್ನು ತ್ವರಿತಗತಿಯಲ್ಲಿ ಒಣಗಿಸುವ ಯಾವುದೇ ವ್ಯವಸ್ಥೆ ಇಲ್ಲ.

ಮ್ಯಾಚ್‌ ರೆಫರಿಗಳಿಗೆ ಪೊಲೀಸ್‌ ಭದ್ರತೆ ಕೊಡಬೇಕು ಎನ್ನುವ ಬೇಡಿಕೆಗೂ ಆಯೋಜಕರು ಸ್ಪಂದಿಸುತ್ತಿಲ್ಲ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌