ಆ್ಯಪ್ನಗರ

20 ವರ್ಷ ಕಳೆದರೂ ಕೊಹ್ಲಿ-ರೋಹಿತ್ ಭಿನ್ನಭಿಪ್ರಾಯ ಕಥೆಗಳು ನಿಲ್ಲಲ್ಲ: ಗವಾಸ್ಕರ್

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ಭಿನ್ನಭಿಪ್ರಾಯದ ಬಗ್ಗೆ ಕಟ್ಟುಕಥೆಗಳನ್ನು ಕಟ್ಟುವವರು ಖಂಡಿತವಾಗಿಯೂ ಭಾರತ ಕ್ರಿಕೆಟ್‌ನ ಹಿತೈಷಿಗಳಲ್ಲ ಎಂದು ಮಾಜಿ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 9 Aug 2019, 3:16 pm
ಹೊಸದಿಲ್ಲಿ: ಏಕದಿನ ವಿಶ್ವಕಪ್ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿಯಲ್ಲ ಎಂಬ ವದಂತಿ ಹಬ್ಬಿತ್ತು. ವೆಸ್ಟ್‌ಇಂಡೀಸ್ ಸರಣಿಗೂ ಮುನ್ನ ತಮ್ಮಿಬ್ಬರ ಮಧ್ಯೆ ಯಾವುದೇ ತರಹದ ವೈಮನಸ್ಸಿಲ್ಲ ಎಂಬುದನ್ನು ಹೇಳುವ ಮೂಲಕ ನಾಯಕ ಕೊಹ್ಲಿ ವಿವಾದಕ್ಕೆ ತೆರೆ ಎಳೆದಿದ್ದರು.
Vijaya Karnataka Web rohit-kohli


ಇದೀಗ ವಿಶ್ವಕಪ್ ಬಳಿಕ ಯಾವುದೇ ಪುನರ್ ವಿಮರ್ಶೆಯಿಲ್ಲದೆ ನಾಯಕರಾಗಿ ಕೊಹ್ಲಿ ಅವರನ್ನೇ ಮುಂದುವರಿಸಿರುವ ಕ್ರಮವನ್ನು ಖಂಡಿಸಿರುವ ಮಾಜಿ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್, 20 ವರ್ಷ ಕಳೆದರೂ ರೋಹಿತ್ ಹಾಗೂ ವಿರಾಟ್ ನಡುವಣ ಭಿನ್ನಭಿಪ್ರಾಯ ಕಥೆಗಳು ನಿಲ್ಲಲ್ಲ ಎಂದು ಹೇಳಿದ್ದಾರೆ.

ವಿರಾಟ್ ಹಾಗೂ ರೋಹಿತ್ ಎಷ್ಟೇ ಕಿರುಚಾಡಿದರೂ ಕಥೆಗಳು ಇಲ್ಲಿಗೆ ಮುಗಿಯುವುದಿಲ್ಲ. ಪ್ರತಿ ಬಾರಿಯೂ ರೋಹಿತ್ ಪೇಲ್ ಆದಾಗ ಉದ್ದೇಶಪೂರ್ವಕವಾಗಿಯೇ ಔಟ್ ಆಗಿದ್ದಾರೆ ಎಂಬ ಆರೋಪ ಕೇಳಿಬರಲಿದೆ ಎಂದಿದ್ದಾರೆ.

ಇಂತಹ ಕಟ್ಟುಕಥೆಗಳನ್ನು ಆರಂಭಿಸಿದವರು ಖಂಡಿತವಾಗಿಯೂ ಭಾರತೀಯ ಕ್ರಿಕೆಟ್‌ನ ಹಿತೈಷಿಗಳಲ್ಲ. ಮೀಡಿಯಾಗಳು ಇದಕ್ಕೆ ತುಪ್ಪ ಸುರಿಯುತ್ತಿದೆ ಎಂದು ಗವಾಸ್ಕರ್ ಕಿಡಿ ಕಾರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌