ಆ್ಯಪ್ನಗರ

ಕುಂಬ್ಳೆ ತೆರವಿನಿಂದ ಬರಿದಾಗಿದೆ: ಬಂಗಾರ್

ಟೀಮ್ ಇಂಡಿಯಾದ ಪ್ರಧಾನ ಕೋಚ್ ಅನಿಲ್ ಕುಂಬ್ಳೆ ಅವರ ತೆರವಿನಿಂದ ಖಂಡಿತವಾಗಿಯೂ ಬರಿದಾಗಿದೆ ಎಂದಿರುವ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್, ಹಾಗಿದ್ದರೂ ಪರಿಸ್ಥಿತಿಯನ್ನು ತಂಡವು ಸಮರ್ಥವಾಗಿ ನಿಭಾಯಿಸುತ್ತಿದೆ ಎಂದಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 25 Jun 2017, 3:13 pm
ಪೋರ್ಟ್ ಆಫ್ ಸ್ಪೇನ್: ಟೀಮ್ ಇಂಡಿಯಾದ ಪ್ರಧಾನ ಕೋಚ್ ಅನಿಲ್ ಕುಂಬ್ಳೆ ಅವರ ತೆರವಿನಿಂದ ಖಂಡಿತವಾಗಿಯೂ ಬರಿದಾಗಿದೆ ಎಂದಿರುವ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್, ಹಾಗಿದ್ದರೂ ಪರಿಸ್ಥಿತಿಯನ್ನು ತಂಡವು ಸಮರ್ಥವಾಗಿ ನಿಭಾಯಿಸುತ್ತಿದೆ ಎಂದಿದ್ದಾರೆ.
Vijaya Karnataka Web there is definitely a bit of lacuna sanjay bangar on anil kumble quitting
ಕುಂಬ್ಳೆ ತೆರವಿನಿಂದ ಬರಿದಾಗಿದೆ: ಬಂಗಾರ್


ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ನಡುವೆ ಭಿನ್ನಿಭಿಪ್ರಾಯದ ಹಿನ್ನಲೆಯಲ್ಲಿ ಪ್ರಧಾನ ಕೋಚ್ ಹುದ್ದೆಯನ್ನು ತೊರೆಯಲು ಅನಿಲ್ ಕುಂಬ್ಳೆ ನಿರ್ಧರಿಸಿದ್ದರು. ಚಾಂಪಿಯನ್ಸ್ ಟ್ರೋಫಿ ಬೆನ್ನಲ್ಲೇ ಕುಂಬ್ಳೆ ರಾಜೀನಾಮೆ ನೀಡಿರುವ ಹಿನ್ನಲೆಯಲ್ಲಿ ಪ್ರಧಾನ ಕೋಚ್ ಅಲಭ್ಯತೆಯಲ್ಲಿ ಭಾರತ ತಂಡವು ವೆಸ್ಟ್‌ಇಂಡೀಸ್ ಪ್ರವಾಸವನ್ನು ಕೈಗೊಂಡಿತ್ತು.

ಈ ಎಲ್ಲ ಪ್ರಕರಣದ ಬಗ್ಗೆ ಕೇಳಿದಾಗ ಬಂಗಾರ್, ನಾವೆಲ್ಲವೂ ವೃತ್ತಿಪರರಾಗಿದ್ದು, ಇವೆಲ್ಲವೂ ಯಾವುದೇ ಸಂಸ್ಥೆಯ ಭಾಗವಾಗಿದ್ದು, ಬದಲಾವಣೆಗಳು ಯಾವಾಗ ಬೇಕಾದರೂ ಸಂಭವಿಸಬಹುದು. ಇಂತಹ ಪರಿಸ್ಥಿತಿಗಳನ್ನು ನಿಭಾಯಿಸಲು ಸಹಾಯಕ ಸಿಬ್ಬಂದಿಗಳು ಹಾಗೂ ಆಟಗಾರರು ಇದುವರೆಗೂ ಬೇಕಾದಷ್ಟು ವೃತಿಪರತೆಯನ್ನು ತೋರಿದ್ದು ಸಮರ್ಥವಾಗಿ ನಿಭಾಯಿಸಿದ್ದೇವೆ ಎಂದರು.

ಈ ಹಿಂದೆಯೂ ಇಂತಹ ಪರಿಸ್ಥಿತಿಗಳು ಎದುರಾಗಿದೆ. ಆದರೆ ಇದರಿಂದ ತಂಡದ ನಿರ್ವಹಣೆಗೆ ಧಕ್ಕೆಯಾಗಬಾರದು ಎಂದು 44ರ ಹರೆಯದ ಭಾರತದ ಮಾಜಿ ಆಲ್‌ರೌಂಡರ್ ತಿಳಿಸಿದರು.

ಅನಿಲ್ ಕುಂಬ್ಳೆ ಅಡಿಯಲ್ಲಿ ಭಾರತ ಅನೇಕ ಧನಾತ್ಮಕ ಯಶಸ್ಸನ್ನು ಸಾಧಿಸಿದೆ. ನಾವೆಲ್ಲವೂ ಯಶಸ್ಸನ್ನು ಒಟ್ಟಿಗೆ ಅನುಭವಿಸಿದ್ದೇವೆ. ಖಂಡಿತವಾಗಿಯೂ ಅವರ ತೆರವಿನಿಂದ ಬರಿದಾಗಿದೆ. ಆದರೆ ಮಹೇಂದ್ರ ಸಿಂಗ್ ಧೋನಿ, ಯುವರಾಜ್ ಸಿಂಗ್ ಹಾಗೂ ವಿರಾಟ್ ಕೋಹ್ಲಿ ಅವರಂತಹ ಅನುಭವಿ ಆಟಗಾರರು ತಂಡದಲ್ಲಿದ್ದು, ಯುವ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದವರು ಸೇರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌