ಆ್ಯಪ್ನಗರ

ಮ್ಯಾಚ್‌ ಫಿಕ್ಸಿಂಗ್‌ ಬಗ್ಗೆ ಮಾತನಾಡಿದ ಗವಾಸ್ಕರ್‌!

ಭಾರತೀಯ ಕ್ರಿಕೆಟ್‌ಗೆ ಮ್ಯಾಚ್‌ ಫಿಕ್ಸಿಂಗ್‌ ಭೂತ ಆಗಾ ಕಾಡುತ್ತಲೇ ಇದೆ. ಐಪಿಎಲ್‌ನಲ್ಲೂ ಮ್ಯಾಚ್‌ ಮತ್ತು ಸ್ಪಾಟ್‌ ಫಿಕ್ಸಿಂಗ್‌ ಹಾಗೂ ಬೆಟ್ಟಿಂಗ್‌ನಂತಹ ಮೋಸದಾಟಗಳು ಎಗ್ಗಿಲ್ಲದಂತೆ ನಡೆದು ಕೊನೆಗೆ ಬಹಿರಂಗಗೊಂಡಿತ್ತು. ಇದೀಗ ರಾಜ್ಯ ಮಟ್ಟದ ಕ್ರಿಕೆಟ್‌ ಲೀಗ್‌ಗಳಲ್ಲೂ ಇದೇ ರೀತಿಯ ಮೋಸದಾಟಗಳು ತಲೆದೂರುತ್ತಿವೆ.

Vijaya Karnataka Web 23 Sep 2019, 1:49 pm
ಹೊಸದಿಲ್ಲಿ: ಭಾರತೀಯ ಕ್ರಿಕೆಟ್‌ಗೆ ಮತ್ತೊಮ್ಮೆ ಮ್ಯಾಚ್‌ ಫಿಕ್ಸಿಂಗ್‌ ಪಿಡುಗು ಕಾಡಲು ಶುರು ಮಾಡಿದೆ. ತಮಿಳು ನಾಡು ಪ್ರೀಮಿಯರ್‌ ಲೀಗ್‌ನಲ್ಲಿ ಮೋಸದಾಟ ನಡೆದಿರುವ ಕುರಿತಾಗಿ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಬಿಸಿಸಿಐನ ಭ್ರಷ್ಟಾಚಾರ ತಡೆ ಘಟಕ ತನಿಖೆ ಆರಂಭಿಸಿದೆ.
Vijaya Karnataka Web sunil gavaskar 2019


ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಬಹಿರಂಗಗೊಂಡ ಮ್ಯಾಚ್‌ ಫಿಕ್ಸಿಂಗ್‌, ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಪ್ರಕರಣಗಳು ಭಾರತೀಯ ಕ್ರಿಕೆಟ್‌ಗೆ ಕಪ್ಪು ಚುಕ್ಕೆಯನ್ನಿಟ್ಟಿವೆ. ಈ ಸಂದರ್ಭದಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ನಾಯಕ ಸುನಿಲ್‌ ಗವಾಸ್ಕರ್‌, ದುರಾಸೆಗೆ ಯಾವುದೇ ರೀತಿಯ ಮದ್ದಿಲ್ಲ ಎಂದಿದ್ದಾರೆ.

ವಿದೇಶ ಪ್ರವಾಸದ ವೇಳೆ ಟೀಮ್‌ ಇಂಡಿಯಾ ಆಟಗಾರರಿಗೆ ಸಿಗಲಿರುವ ದಿನದ ಭತ್ಯೆ ಎಷ್ಟು ಗೊತ್ತಾ?

"ಭ್ರಷ್ಟಾಚಾರ ತಡೆ ಘಟಕವು ಎಷ್ಟೇ ವಿಚಾರ ಸಂಕಿರಣಗಳನ್ನು ನಡೆಸಲಿ, ಮಾರ್ಗದರ್ಶನಗಳನ್ನು ನೀಡಲಿ ಮತ್ತು ಶಿಕ್ಷಣವನ್ನು ಒದಗಿಸಲಿ ಇದ್ಯಾವುದೂ ಮನುಷ್ಯನ ದುರಾಸೆ ಮುಂದೆ ನಿಲ್ಲರಾರವು. ದುರಾಸೆಯೆಂಬುದು ಮಾನವನಲ್ಲಿ ಅಡಗಿರುತ್ತದೆ. ಆದ್ದರಿಂದಲೇ ಅತ್ಯಂತ ಪ್ರಗತಿಪರ ಸಮಾಜದಲ್ಲೂ ಅಪರಾದಗಳು ನಡೆಯುತ್ತಲೇ ಇವೆ. ಕ್ರಿಕೆಟ್‌ನಲ್ಲೂ ಕೆಲವರು ಈ ರೀತಿ ದುರಾಸೆಗೆ ತುತ್ತಾಗುತ್ತಾರೆ. ಅಥವಾ ಬೇರಾವುದೋ ಕಾರಣಕ್ಕೆ ಆತ ಈ ರೀತಿಯ ಕೆಲಸ ಮಾಡುವಂತಾಗಿರುತ್ತದೆ. ಹೀಗಾಗಿ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯವಾಗಿದೆ," ಎಂದು ಸುನಿಲ್‌ ಗವಾಸ್ಕರ್‌ ಹೇಳಿರುವುದಾಗಿ ಕ್ರಿಕ್‌ಬಝ್‌ ವರದಿ ಮಾಡಿದೆ.

ರಾಷ್ಟ್ರೀಯ ರ‍್ಯಾಲಿಯಲ್ಲಿ ದುರಂತ: ರೇಸರ್‌ ಗೌರವ್‌ ಗಿಲ್‌ ಕಾರಿಗೆ ಸಿಕ್ಕ ಮೂವರ ದುರ್ಮರಣ!

ಇದೇ ವೇಳೆ ತಂತ್ರಜ್ಞಾನದಲ್ಲಿನ ಅಭಿವೃದ್ಧಿಯಿಂದಾಗಿ ಇಂದು ಮೋಸದ ಆಟ ಆಡುವವರಿಗೆ ಉಳಿಗಾಲವಿಲ್ಲ ಎಂಬುದನ್ನೂ ಲಿಟ್ಲ್‌ ಮಾಸ್ಟರ್‌ ವಿವರಿಸಿದ್ದಾರೆ.

"ಕೆಲ ಆಟಗಾರರು ಮೋಸದಾಟವನ್ನಾಡಿ ತಪ್ಪಿಸಿಕೊಳ್ಳಬಹುದು ಎಂದು ಭಾವಿಸುತ್ತಾರೆ. ಆದರೆ ಅವರು ತಪ್ಪಿಸಿಕೊಳ್ಳುವುದು ಖಂಡಿತಾ ಸಾಧ್ಯವಿಲ್ಲ. ಏಕೆಂದರೆ ಆಟದ ಪ್ರತಿಯೊಂದು ಕ್ಷಣಗಳೂ ಟೆಲಿವಿಷನ್‌ನಲ್ಲಿ ಪ್ರಸಾರವಾಗುತ್ತಿರುತ್ತದೆ. ಚಿಕ್ಕ ಚಿಕ್ಕ ಅಂಶಗಳು ಕೂಡ. ಏನೇ ತಪ್ಪು ಮಾಡಿದರೂ ಸಿಕ್ಕಿ ಬೀಳುವುದಂತೂ ಖಂಡಿತಾ," ಎಂದು ಹೇಳಿದ್ದಾರೆ.

ಕ್ರಿಕೆಟ್‌ ಲೀಗ್‌ಗಳಲ್ಲಿ ಮೋಸದಾಟ ನಡೆಯುವ ಸಾಧ್ಯತೆ ಇದ್ದರೂ ಕೂಡ, ಇಂತಹ ಟೂರ್ನಿಗಳ ಮೂಲಕ ದೇಶದ ಕ್ರಿಕೆಟ್‌ಗೆ ಕೊಡುಗೆಯಾಗಬಲ್ಲ ಭವಿಷ್ಯದ ಆಟಗಾರರನ್ನು ಹುಟ್ಟು ಹಾಕಲು ಪ್ರಯತ್ನಿಸ ಬೇಕು ಎಂದು ಗವಾಸ್ಕರ್‌ ಅಭಿಪ್ರಾಯ ಪಟ್ಟಿದ್ದಾರೆ.

ಇನ್ನೂ 2 ತಿಂಗಳು ಧೋನಿ ಕ್ರಿಕೆಟ್‌ ಆಡೋಲ್ಲ ಯಾಕೆ ಗೊತ್ತಾ?!

"ಜಿಲ್ಲೆಗಳಿಂದ ಮೂಡಿ ಬರುತ್ತಿರುವ ಪ್ರತಿಭೆಗಳನ್ನು ಗಮನಿಸಿ. ಉದಾಹರಣೆಗೆ ಕರ್ನಾಟಕ ಪ್ರೀಮಿಯರ್‌ ಲೀಗ್‌ನಲ್ಲಿ ಬಹುತೇಕ ಆಟಗಾರರು ಬಂದಿರುವುದು ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಿಂದ. ಇಂತಹ ಪ್ರತಿಭೆಗಳು ಹೊರಹೊಮ್ಮುತ್ತಾರೆಂದು ಕರ್ನಾಟಕ ಕ್ರಿಕೆಟ್‌ ಕೂಡ ಅಂದಾಜಿಸಿರುವುದಿಲ್ಲ. ತಮಿಳುನಾಡು ಪ್ರೀಮಿಯರ್‌ ಲೀಗ್‌ ಕೂಡ ಇದಕ್ಕೆ ಸಾಕ್ಷಿಯಾಗಿದೆ. ಇಂತಹ ಲೀಗ್‌ ಟೂರ್ನಿಗಳು ನಿಜಕ್ಕೂ ಉತ್ತಮ. ಇದರಿಂದ ಭಾರತೀಯ ಕ್ರಿಕೆಟ್‌ಗೆ ಹೆಚ್ಚು ಪ್ರತಿಭೆಗಳು ಲಭ್ಯವಾಗಲಿದೆ. ಇಲ್ಲವಾದರೆ ಬಹುತೇಕ ಪ್ರತಿಭೆಗಳು ಎಲೆಮರೆ ಕಾಯಿಯಂತೆ ಉಳಿದುಹೋಗುತ್ತವೆ," ಎಂದಿದ್ದಾರೆ.

ಭಾರತ v/s ದ. ಆಫ್ರಿಕಾ 3ನೇ ಟಿ20: ಧೋನಿ ದಾಖಲೆ ಸರಿಗಟ್ಟಿದ 'ಹಿಟ್‌ಮ್ಯಾನ್‌' ರೋಹಿತ್‌!

ಈ ಮಧ್ಯೆ ಮಹಿಳಾ ಕ್ರಿಕೆಟ್‌ನಲ್ಲೂ ಮ್ಯಾಚ್‌ ಫಿಕ್ಸಿಂಗ್‌ ಮಡೆಸುವ ಪ್ರಯತ್ನ ನಡೆಯುತ್ತಿರುವುದಾಗಿ ವರದಿಯಾಗಿದೆ. ಕಳೆದ ಫೆಬ್ರವರಿಯಲ್ಲಿ ಭಾರತ ಮತ್ತು ಇಂಗ್ಲೆಂಡ್‌ ಮಹಿಳಾ ತಂಡಗಳ ಸರಣಿ ವೇಳೆ ಕರ್ನಾಟಕ ಮೂಲಕ ಭಾರತ ತಂಡದ ಪ್ರಮುಖ ಆಟಗಾರ್ತಿಗೆ ಮ್ಯಾಚ್‌ ಫಿಕ್ಸಿಂಗ್‌ ಸಲುವಾಗಿ ಪ್ರಯತ್ನ ನಡೆಸಲಾಗಿತ್ತು. ಈ ಸಂಬಂಧ ಆಟಗಾರ್ತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌