ಆ್ಯಪ್ನಗರ

ಪಾಕಿಸ್ತಾನ ಪ್ರವಾಸಕ್ಕೆ ಸ್ಟಾರ್‌ಗಳಿಲ್ಲದ ತಂಡ ಪ್ರಕಟಿಸಿದ ಶ್ರೀಲಂಕಾ, ಇಬ್ಬರಿಗೆ ನಾಯಕತ್ವ!

ಭದ್ರತೆ ದೃಷ್ಠಿಯಿಂದ ಪಾಕಿಸ್ತಾನ ಪ್ರವಾಸದಿಂದ ಪ್ರಮುಖ ಆಟಗಾರೆಲ್ಲಾ ಹಿಂದೆ ಸರಿದ ಹಿನ್ನೆಲೆಯಲ್ಲಿ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಅನನುಭವಿ ಮತ್ತು ಹೊಸ ಮುಖಗಳನ್ನು ಒಳಗೊಂಡ ಶ್ರೀಲಂಕಾ ತಂಡಗಳನ್ನು ಬುಧವಾರ ಪ್ರಕಟ ಮಾಡಿದೆ.

Vijaya Karnataka Web 12 Sep 2019, 12:33 pm
ಕೊಲಂಬೊ, ಸೆಪ್ಟೆಂಬರ್‌ 11: ಶ್ರೀಲಂಕಾ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳುತ್ತಿದ್ದು, ಈಗಾಗಲೇ ಸ್ಟಾರ್‌ ಆಟಗಾರರು ಈ ಪ್ರವಾಸದಿಂದ ಹಿಂದೆ ಸರಿದು ಸಾಕಷ್ಟು ವಿವಾದ ಸೃಷ್ಟಿಯಾಗಿದೆ. ಇದರ ಬೆನ್ನಲ್ಲೇ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೂ ತಂಡ ಪ್ರಕಟ ಮಾಡಿರುವ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಏಕದಿನ ಮತ್ತು ಟಿ20 ಕ್ರಿಕೆಟ್‌ಗೆ ನೂತನ ನಾಯಕರನ್ನು ನೇಮಕ ಮಾಡಿದೆ.
Vijaya Karnataka Web sri lanka team pakistan tour 2019


ದಿಮುತ್‌ ಕರುಣಾರತ್ನೆ ಮತ್ತು ಲಸಿತ್‌ ಮಾಲಿಂಗ ಸೇರಿದಂತೆ 10 ಪ್ರಮುಖ ಆಟಗಾರರು ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿದ ಎರಡು ದಿನಗಳ ಬಳಿಕ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ತಂಡಗಳನ್ನು ಪ್ರಕಟ ಮಾಡಿದ್ದು, ಲಾಹಿರು ತಿರಿಮನ್ನೆ ಮತ್ತು ದಸುನ್‌ ಶನಕ ಕ್ರಮವಾಗಿ ಏಕದಿನ ಮತ್ತು ಟಿ20 ತಂಡಗಳ ನಾಯಕರನ್ನಾಗಿ ನೇಮಿಸಿದೆ.



ಮಾಲಿಂಗ ಮತ್ತು ಕರುಣಾರತ್ನೆ ಹೊರತಾಗಿ ಸ್ಟಾರ್‌ ಆಲ್‌ರೌಂಡರ್‌ ಏಂಜಲೊ ಮ್ಯಾಥ್ಯೂಸ್‌, ನಿರೋಶನ್‌ ಡಿಕ್ವೆಲ್ಲಾ, ಕುಶಲ್‌ ಪೆರೆರಾ, ಧನಂಜಯ ಡಿ'ಸಿಲ್ವಾ, ತಿಸಾರ ಪೆರೆರಾ, ಅಖಿಲ ಧನಂಜಯ, ಸುರಂಗ ಲಕ್ಮಲ್‌ ಹಾಗೂ ದಿನೇಶ್‌ ಚಾಂದಿಮಾಲ್‌ ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಈ ಮಧ್ಯೆ ಕುಶಲ್‌ ಮೆಂಡಿಸ್‌ ಗಾಯದ ಸಮಸ್ಯೆ ಕಾರಣ ಅಲಭ್ಯರಾಗಿದ್ದಾರೆ. ಭದ್ರತೆ ದೃಷ್ಠಿಯಿಂದ ಲಂಕಾ ಆಟಗಾರರು ಪಾಕ್‌ ಪ್ರವಾಸದಿಂದ ಹಿಂದೆ ಸರಿದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್‌ ಸರಣಿಗೆ ಹಾರ್ದಿಕ್‌ ಪಾಂಡ್ಯ ಸಂಪೂರ್ಣ ಫಿಟ್‌

2009ರಲ್ಲಿ ಶ್ರೀಲಂಕಾ ತಂಡ ಪಾಕಿಸ್ತಾನ ಪ್ರವಾಸದಲ್ಲಿ ಇದ್ದ ಸಂದರ್ಭದಲ್ಲಿ ಲಂಕಾ ತಂಡದ ಬಸ್‌ ಮೇಲೆ ಭಯೋತ್ಪಾದಕರ ದಾಳಿ ನಡೆದು ಕೂದಲೆಳೆ ಅಂತರದಲ್ಲಿ ದ್ವೀಪರಾಷ್ಟ್ರದ ಕ್ರಿಕೆಟಿಗರು ಪ್ರಾಣಾಪಾಯದಿಂದ ಪಾರಾಗಿದ್ದರು. ಅಂದಿನಿಂದ ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಯೋಜನೆಗೆ ಐಸಿಸಿ ನಿಷೇಧ ಹೇರಿತ್ತು.



ಪ್ರಮುಖ ಆಟಗಾರರು ಹಿಂದೆಸರಿದ ಹಿನ್ನೆಲೆಯಲ್ಲಿ ಅನ್ಯ ಮಾರ್ಗವಿಲ್ಲದೆ ಕಡಿಮೆ ಅನುಭವ ಹೊಂದಿರುವ ಆಟಗಾರರ ತಂಡವನ್ನೇ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಪ್ರಕಟ ಮಾಡಿದ್ದು, ಚೊಚ್ಚಲ ಬಾರಿ ಅವಕಾಶ ಪಡೆದಿರುವ ಮಿನೋದ್‌ ಬಾನುಕಾ ಏಕದಿನ ಮತ್ತು ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡುವುದನ್ನು ಎದುರು ನೋಡುತ್ತಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿರುಷ್ಕಾ ಫೋಟೊ!

ಸೆ.20ರಂದ ಅಕ್ಟೋಬರ್‌9ರ ಒಳಗಾಗಿ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ತಲಾ ಮೂರು ಪಂದ್ಯಗಳ ಏಕದಿನ ಮತ್ತು ಟಿ20 ಸರಣಿಯನ್ನಾಡಲಿವೆ.

ಏಕದಿನ ಕ್ರಿಕೆಟ್‌ ತಂಡ
ಲಾಹಿರಿ ತಿರಿಮನ್ನೆ (ನಾಯಕ), ಧನುಷ್ಕಾ ಗುಣತಿಲಕ, ಸಾದೀರ ಸಮರವಿಕ್ರಮ, ಅವಿಷ್ಕಾ ಫರ್ನಾಂಡೊ, ಒಶಾದ ಫರ್ನಾಂಡೊ, ಶೆಹಾನ್‌ ಜಯಸೂರ್ಯ, ದಸುನ್‌ ಶನಕ, ಮಿನೋದ್‌ ಭಾನುಕ, ಏಂಜಲೊ ಪೆರೆರಾ, ವಾನಿಂದು ಹಸರಂಗ, ಲಕ್ಷನ್‌ ಸಂದಕನ್‌, ನುವಾನ್‌ ಪ್ರದೀಪ್‌, ಇಸುರು ಉದನ, ಕಸುನ್‌ ರಜಿತಾ, ಲಾಹಿರು ಕುಮಾರ.

ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌: ಗೇಲ್‌ ಶತಕ ಸ್ಫೋಟಿಸಿದರೂ ಸೋತು ಸುಣ್ಣವಾದ ಜಮೈಕಾ

ಟಿ20 ತಂಡ
ದಸುನ್‌ ಶನಕ (ನಾಯಕ), ದನುಷ್ಕಾ ಗುಣತಿಲಕ, ಸಾದೀರ ಸಮರವಿಕ್ರಮ, ಅವಿಷ್ಕಾ ಫರ್ನಾಂಡೊ, ಒಶಾದ ಫರ್ನಾಂಡೊ, ಶೆಹಾನ್‌ ಜಯಸೂರ್ಯ, ಏಂಜಲೊ ಪೆರೆರಾ, ಭಾನುಕಾ ರಾಜಪಕ್ಷ, ಮಿನೋದ್‌ ಭಾನುಕ, ಲಾಹಿರು ಮಧುಶಂಕ, ವಾನಿಂದು ಹಸರಂಗ, ಲಕ್ಷಣ್‌ ಸಂದಕನ್‌, ಇಸುರು ಉದನ, ನುವಾನ್‌ ಪ್ರದೀಪ್‌, ಕಸುನ್‌ ರಜಿತಾ, ಲಾಹಿರು ಕುಮಾರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌