ಆ್ಯಪ್ನಗರ

ರಿಷಬ್ ಪಂತ್‌ರನ್ನು ಟೀಮ್ ಮ್ಯಾನೇಜ್‌ಮೆಂಟ್ ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಗೌತಮ್ ಗಂಭೀರ್ ಗರಂ!

ಭಾರತ ಕ್ರಿಕೆಟ್ ತಂಡದ ಉದಯೋನ್ಮುಖ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರನ್ನು ನಡೆಸಿಕೊಳ್ಳುವ ರೀತಿ ಬಗ್ಗೆ ಮಾಜಿ ಆಟಗಾರ ಗೌತಮ್ ಗಂಭೀರ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

Vijaya Karnataka Web 23 Sep 2019, 4:29 pm
ಬೆಂಗಳೂರು: ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್‌ಗೆ ಉಸಿರಾಡಲು ಅವಕಾಶ ನೀಡಿ ಎಂದು ಮಾಜಿ ನಾಯಕ ಸುನಿಲ್ ಗವಾಸ್ಕರ್ ಸಲಹೆ ಮಾಡಿದ್ದರು. ಇದಾದ ಬೆನ್ನಲ್ಲೇ ಮಾಜಿ ಆಟಗಾರ ಹಾಗೂ ಸಂಸದ ಗೌತಮ್ ಗಂಭೀರ್ ಇದಕ್ಕೆ ಸಮಾನವಾದ ಹೇಳಿಕೆಯೊಂದನ್ನು ನೀಡಿದ್ದಾರೆ.
Vijaya Karnataka Web rishabh-pant-07


ಪ್ರಮುಖವಾಗಿಯೂ ಯುವ ಆಟಗಾರ ರಿಷಬ್ ಪಂತ್‌ರನ್ನು ಟೀಮ್ ಮ್ಯಾನೇಜ್‌ಮೆಂಟ್ ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಗೌತಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ವಿಜಯ ಕರ್ನಾಟಕ ಸೋದರ ಸಂಸ್ಥೆ ಟೈಮ್ ಆಫ್ ಇಂಡಿಯಾ ಅಂಕಣದಲ್ಲಿ ಈ ಬಗ್ಗೆ ವಿಮರ್ಶೆ ಮಾಡಿರುವ ಗಂಭೀರ್, ತಂಡದ ವ್ಯವಸ್ಥಾಪಕ ಮಂಡಳಿಯು ಉತ್ತಮ ನಿರ್ವಹಣೆ ನೀಡುವುದಕ್ಕಾಗಿ ಹುರಿದುಂಬಿಸಬೇಕು ಎಂದಿದ್ದಾರೆ.

ದ.ಆಫ್ರಿಕಾ ವಿರುದ್ದ ಬೆಂಗಳೂರು ಟಿ20ನಲ್ಲಿ ಭಾರತದ ಸೋಲಿಗಿರುವ 10 ಪ್ರಮುಖ ಕಾರಣಗಳು!

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವಿಷಯಕ್ಕೆ ಬಂದಾಗ ವೈಯಕ್ತಿಕವಾಗಿ ನಾನು ರಿಷಬ್ ಪಂತ್‌ಗಿಂತಲೂ ಮಿಗಿಲಾಗಿ ಸಂಜು ಸ್ಯಾಮ್ಸನ್‌ರನ್ನು ಬೆಂಬಲಿಸುತ್ತಿದ್ದೇನೆ. ಆದರೆ ಟೀಮ್ ಮ್ಯಾನೇಜ್‌ಮೆಂಟ್ 'ಫಿಯರ್‌ಲೆಸ್‌ನಿಂದ ಕೇರ್‌ಲೆಸ್', 'ರಿಷಬ್‌ಗೆ ಬ್ಯಾಕಪ್ ಅಗತ್ಯ' ಎಂಬಿತ್ಯಾದಿ ಪದಗಳನ್ನು ಬಳಕೆ ಮಾಡುತ್ತಿರುವುದು ನಿಜಕ್ಕೂ ಬೇಸರ ತಂದಿದೆ. ಇದು ಯುವ ಸಂಪನ್ಮೂಲವನ್ನು ಬಳಕೆ ಮಾಡುವ ರೀತಿಯಲ್ಲ. ಅವರಂತೆಯೇ ಎಲ್ಲರೂ ರಿಷಬ್ ಪಂತ್‌ರಿಂದ ಪ್ರಜ್ಞೆಯ ಕ್ರಿಕೆಟ್ ನಿರೀಕ್ಷೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಪಂತ್ ಈಗ ರನ್ ಗಳಿಸುವುದಕ್ಕಿಂತಲೂ ಮಿಗಿಲಾಗಿ ತಮ್ಮ ಉಳಿಗಾಲಕ್ಕಾಗಿ ಆಡುತ್ತಿದ್ದಾರೆ ಎಂದು ಗಂಭೀರ್ ವಿವರಿಸಿದರು. ಈ ಹುಡುಗ ಈಗ ರನ್ ಗಳಿಸುವುದಕ್ಕಿಂತಲೂ ಹೆಚ್ಚಾಗಿ ಉಳಿಗಾಲಕ್ಕಾಗಿ ಆಡುತ್ತಿದ್ದಾರೆ. ಯಾರಾದರೂ ಆತನ ಹೆಗಲ ಮೇಲೆ ಕೈಯನ್ನಿಟ್ಟು ನಿನ್ನ ಸಾನಿಧ್ಯ ತಂಡಕ್ಕೆ ಅಗತ್ಯವಿದೆ ಎಂದು ಹೇಳಬೇಕೆನ್ನಿಸುತ್ತಿದೆ ಎಂದು ಸೇರಿಸಿದರು.

ರಿಷಬ್ ಪಂತ್‌ಗೆ ಉಸಿರಾಡಲು ಅವಕಾಶ ನೀಡಿ: ಸುನಿಲ್ ಗವಾಸ್ಕರ್

ಕೆಲವು ದಿನಗಳ ಹಿಂದೆಯಷ್ಟೇ ಸಂದರ್ಶನದಲ್ಲಿ ರಿಷಬ್ ಪಂತ್ ವಿರುದ್ಧ ಕೋಚ್ ರವಿಶಾಸ್ತ್ರಿ ಹಾಗೂ ನಾಯಕ ವಿರಾಟ್ ಕೊಹ್ಲಿ ಪರೋಕ್ಷ ಎಚ್ಚರಿಕೆಯನ್ನು ನೀಡಿದ್ದರು. ಪದೇ ಪದೇ ಕೆಟ್ಟ ಶಾಟ್‌ಗಳಿಗೆ ವಿಕೆಟ್ ಒಪ್ಪಿಸುವುದರ ವಿರುದ್ಧ ಅಸಮಾಧಾನವನ್ನು ತೋಡಿಕೊಂಡಿದ್ದರು. ಅಲ್ಲದೆ ಪಂದ್ಯದ ಪರಿಸ್ಥಿತಿಗೆ ಅನುಸಾರವಾಗಿ ವಿವೇಚನೆಯುಕ್ತ ಕ್ರಿಕೆಟ್ ಬಯಸುತ್ತಿದ್ದೇವೆ ಎಂದು ಹೇಳಿದ್ದರು.

ಇವೆಲ್ಲದರ ನಡುವೆ ತೀವ್ರ ಒತ್ತಡದಲ್ಲಿರುವ ರಿಷಬ್ ಪಂತ್, ದಕ್ಷಿಣ ಆಫ್ರಿಕಾ ವಿರುದ್ಧದ ಟ್ವೆಂಟಿ-20 ಸರಣಿಯಲ್ಲಿ ವೈಫಲ್ಯವನ್ನು ಅನುಭವಿಸಿದ್ದರು. ಎರಡೂ ಪಂದ್ಯಗಳಲ್ಲಿ ಅನುಕ್ರಮವಾಗಿ 4 ಹಾಗೂ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.

ಒಟ್ಟಾರೆಯಾಗಿ ಯುವ ಪ್ರತಿಭೆ ರಿಷಬ್ ಪಂತ್ ಮೇಲೆ ಒತ್ತಡ ಹೆಚ್ಚಿದ್ದು, ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಇದು ಪರಿಮಾಣ ಬೀರುವ ಸಾಧ್ಯತೆಯಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯ ಅಕ್ಟೋಬರ್ 2ರಂದು ಆರಂಭವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌